Spiritual News: ಶಸ್ತ್ರ-ಶಾಸ್ತ್ರ ವಿದ್ಯಾಪಾರಂಗತ, ಸಕಲಕಲಾವಲ್ಲಭ, ನವಗ್ರಹಗಳನ್ನೇ ತನ್ನ ಅಡಿಯಲ್ಲಿರಿಕೊಂಡಿದ್ದ ಲಂಕಾಧಿಪತಿ ರಾವಣನ ಸಂಹಾರವಾಗಿದ್ದು, ಮಾನವರೂಪಿ ಶ್ರೀರಾಮನಿಂದ. ಹಾಗಾದರೆ ರಾವಣನನ್ನು ಕೊಲ್ಲಲು ಶ್ರೀರಾಮನೇ ಏಕೆ ಜನ್ಮ ತಾಳಬೇಕಾಯಿತು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ..
ತ್ರೇತಾಯುಗದಲ್ಲಿ ಪ್ರತಾಪ್ವಾನ್, ಅರಿಮರ್ದನ, ಧರ್ಮರುಚಿ ಎಂಬ ಮೂವರು ವ್ಯಕ್ತಿಗಳಿದ್ದರು. ಇವರಿಗೆ ಬ್ರಾಹ್ಮಣರಿಂದ ಶಾಪ ಸಿಕ್ಕ ಕಾರಣ, ಇವರು ಮುಂದಿನ ಜನ್ಮದಲ್ಲಿ ರಾಕ್ಷಸರಾಗಿ ಹುಟ್ಟಿದರು. ಈ ಮೂವರು ರಾಕ್ಷಸರೇ, ರಾವಣ, ಕುಂಭಕರಣ ಮತ್ತು ವಿಭೀಷಣ. ಈ ಮೂವರಿಗೆ ರಾಕ್ಷಸ ಜನ್ಮ ಸಿಕ್ಕ ಕಾರಣ, ಇವರು ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿದರು.
ಇವರ ತಪಸ್ಸಿಗೆ ಒಲಿದ ಬ್ರಹ್ಮ ನಿಮಗೇನು ವರಬೇಕು ಎಂದು ಕೇಳುತ್ತಾನೆ. ಅದಕ್ಕೆ ರಾವಣ ನನಗೆ ವಾನರ ಮತ್ತು ಮಾನವ ಬಿಟ್ಟು, ಬೇರೆ ಯಾರೂ ನನ್ನ ಸಂಹಾರ ಮಾಡುವಂತಿಲ್ಲ ಎಂದು ಕೇಳಿಕೊಳ್ಳುತ್ತಾನೆ. ಬ್ರಹ್ಮ ದೇವರು ತಥಾಸ್ತು ಎನ್ನುತ್ತಾನೆ. ಕುಂಭಕರಣ ವರ ಕೇಳುವ ಮುನ್ನ, ಸರಸ್ವತಿ ಅವರ ಮತಿಭ್ರಮಣೆ ಮಾಡುತ್ತಾಳೆ. ಆಗ ಕುಂಭಕರಣ 6 ತಿಂಗಳ ಗಾಢ ನಿದ್ರೆ ಕೇಳುತ್ತಾನೆ. ವಿಭೀಷಣ, ಉತ್ತಮ ಜೀವನ, ಅನನ್ಯ, ನಿಷ್ಕಾಮ ಪ್ರೇಮದ ಅಭಿಲಾಷೆಯನ್ನಿಟ್ಟನು. ಹೀಗೆ ಎಲ್ಲರಿಗೂ ತಾವು ಕೇಳಿದ ವರ ಸಿಕ್ಕಿತು.
ರಾವಣ ಮಾನವ ಮತ್ತು ವಾನರ ಬಿಟ್ಟು, ತನ್ನನ್ನು ಯಾರೂ ಸಂಹರಿಸಬಾರದು ಎಂದು ವರ ಕೇಳಿದ್ದ. ಅದಕ್ಕಾಗಿಯೇ, ಶ್ರೀವಿಷ್ಣು ಶ್ರೀರಾಮನ ಅವತಾರದಲ್ಲಿ ಭೂಮಿಯ ಮೇಲೆ ಮನುಷ್ಯ ರೂಪದಲ್ಲಿ ಜನ್ಮ ತಾಳಿದನು. ಇನ್ನು ಶಿವನ ಅಂಶವಾದ ಹನುಮಂತ, ವಾನರನಾಗಿ, ರಾಮಭಕ್ತನಾಗಿ ಜನ್ಮ ತಾಳಿದ. ಸಕಲಕಲಾ ವಲ್ಲಭನಾಗಿದ್ದ ರಾವಣ, ರಾಕ್ಷಸನಾದರೂ, ಬ್ರಾಹ್ಮಣನಾಗಿ ಜನ್ಮ ತಾಳಿದ್ದ. ಶಸ್ತ್ರ-ಶಾಸ್ತ್ರ ವಿದ್ಯಾಪಾರಂಗತನಾಗಿದ್ದ. ಆದರೆ ಮನುಷ್ಯ ಮತ್ತು ವಾನರರನ್ನು ತುಚ್ಛರೆಂದು ಭಾವಿಸಿದ್ದ.
ದೇವತೆಗಳು, ಯಕ್ಷರು, ಹೀಗೆ ಹಲವು ಶಕ್ತಿಶಾಲಿಗಳೇ ತನ್ನನ್ನು ಸಂಹರಿಸಲು ಸಾಧ್ಯವಾಗದಿದ್ದಾಗ, ಮನುಷ್ಯ ಮತ್ತು ವಾನರ ತನ್ನನ್ನೇನು ಮಾಡಲು ಸಾಧ್ಯವೆಂಬ ಅಹಂಕಾರದಲ್ಲಿ ತೇಲುತ್ತಿದ್ದ. ಭೂಮಿಯ ಮೇಲಿನ ಜನರಿಗೆ ತೊಂದರೆ ಕೊಡುತ್ತಿದ್ದ. ಋಷಿಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುವಾಗ ಉಪದ್ರಿಸುತ್ತಿದ್ದ. ಎಲ್ಲರಿಗೂ ಕಷ್ಟಕೊಂಡು, ತನ್ನ ಲಂಕೆಯನ್ನು ಸ್ವರ್ಣಮಯವಾಗಿಸಿದ್ದ.
ಹೀಗಿದ್ದ ರಾವಣನ ಸಹೋದರಿ ಹಿಡಿಂಬೆ ಲಕ್ಷ್ಮಣನನ್ನು ಕೆಣಕಿ, ತನ್ನ ಮೂಗು ಕತ್ತರಿಸಿಕೊಂಡು ಬಂದಿದ್ದಳು. ಇದರಿಂದ ಕೋಪಗೊಂಡ ರಾವಣ, ಸೀತಾಪಹರಣ ಮಾಡಿ. ಸೀತೆಯನ್ನು ಪುನಃ ಕರೆದೊಯ್ಯಲು ವಾನರ ಸೇನೆಯೊಂದಿಗೆ ಬಂದಿದ್ದ ರಾಮ, ರಾವಣನೊಂದಿಗೆ ಕಾದಾಡಿ, ಕೊನೆಗೆ ವಿಭೀಷಣನ ಸಹಾಯದಿಂದ, ರಾವಣನ ನಾಭಿಗೆ ಬಾಣ ಬಿಟ್ಟ. ಆಗಲೇ ರಾವಣನ ಸಂಹಾರವಾಯಿತು. ತುಚ್ಛನೆಂದು ತಿಳಿದಿದ್ದ ಮಾನವನಿಂದಲೇ, ರಾವಣನ ಅಂತ್ಯವಾಯಿತು. ಹಾಗಾಗಿ ನಾವು ಯಾರನ್ನೂ, ಯಾವುದನ್ನೂ ತುಚ್ಛವಾಗಿ ಕಾಣಬಾರದು ಅನ್ನುವುದೇ, ಇದರ ಸಂದೇಶವಾಗಿದೆ.
ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..