Spiritual Story: ನಾವೆಲ್ಲರೂ ನೆಮ್ಮದಿ, ಸುಖ, ಸಂತೋಷ, ಗೌರವದಿಂದ ಬದುಕಬೇಕು ಅಂದ್ರೆ, ನಾವು ನಮ್ಮ ಜೀವನದ ಕೆಲವು ವಿಷಯಗಳನ್ನು ಮತ್ತು ಕೆಲವು ಸತ್ಯಗಳನ್ನು ಯಾರಲ್ಲಿಯೂ ಹೇಳಬಾರದು. ಆ ವಿಷಯಗಳು ಬೇರೆಯವರಿಗೆ ತಿಳಿದಾಗ, ಅದರಿಂದ ನಮಗೇನು ನಷ್ಟವಾಗುವುದಿಲ್ಲ. ಆದರೆ ಅದು ಕೆಲವೊಂದು ಸಮಸ್ಯೆಗಳು ಬರಬಹುದು. ಹಾಗಾದ್ರೆ ನಾವು ಯಾವ ವಿಷಯಗಳನ್ನು ಬೇರೆಯವರಲ್ಲಿ ಹೇಳಬಾರದು ಅಂತಾ ತಿಳಿಯೋಣ ಬನ್ನಿ..
ನಿಮ್ಮ ಬಳಿ ಇರುವ ಧನದ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ಇನ್ನೊಬ್ಬರ ಎದುರು ನಾವು ನಮ್ಮ ಶ್ರೀಮಂತಿಕೆ ಬಗ್ಗೆ ಎಂದಿಗೂ ಕೊಚ್ಚಿಕೊಳ್ಳಬಾರದು ಅಂತಾರೆ ಚಾಣಕ್ಯರು. ಏಕೆಂದರೆ, ನಮ್ಮ ಶ್ರೀಮಂತಿಕೆ, ಗಳಿಕೆ ಬಗ್ಗೆ ತಿಳಿದುಕೊಂಡ ಕೆಲವರು, ನಮಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾರ ದುರಿಗೂ ನೀವು ಎಷ್ಟು ಹಣ ಸಂಪಾದಿಸುತ್ತೀರಿ. ನೀವು ಎಷ್ಟು ಖರ್ಚು ಮಾಡುತ್ತೀರಿ. ಎಷ್ಟು ಶ್ರೀಮಂತರಿದ್ದೀರಿ ಎಂದು ಹೇಳಬೇಡಿ ಅಂತಾರೆ ಚಾಣಕ್ಯರು.
ಎರಡನೇಯದಾಗಿ ದಾನ ಮಾಡಿದ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ದಾನವೆಂದರೆ ಪುಣ್ಯ ಕಾರ್ಯ. ಈ ಪುಣ್ಯದ ಫಲ ನಿಮಗೆ ದೊರಕಬೇಕು ಅಂದ್ರೆ ನೀವು ದಾನ ಮಾಡಿದ್ದರ ಬಗ್ಗೆ ಯಾರಲ್ಲಿಯೂ ಹೇಳಬಾರದು. ಎಲ್ಲರ ಬಳಿ ಡಂಗುರ ಸಾರುವ ಹೇಳಿಯೂ ನೀವು ದಾನ ಮಾಡಬಾರದು. ಇಂಥ ದಾನಗಳು ಮಾಡಿಯೂ ವ್ಯರ್ಥ.
ವೈವಾಹಿಕ ಜೀವನದ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನಿಮ್ಮ ವೈವಾಹಿಕ ಜೀವನದ ಬಗ್ಗೆ ನಿಮಗೆ ಗೊತ್ತಿರಬೇಕು. ಅಲ್ಲಿ ಜಗಳ, ಸರಸ, ವಿರಸ, ಖುಷಿ, ದುಃಖ ಎಲ್ಲವೂ ಇದ್ದರೂ, ಅದು ನಿಮಗಷ್ಟೇ ಗೊತ್ತಿರಬೇಕು. ಆ ಬಗ್ಗೆ ಮೂರನೇಯವರಿಗೆ ಹೇಳಬಾರದು. ಹಾಗೇನಾದರೂ ನೀವು ನಿಮ್ಮ ವೈವಾಹಿಕ ಜೀವನದ ಬಗ್ಗೆ ಇತರರಲ್ಲಿ ಹೇಳಿದರೆ, ಅಥವಾ ಸಂಬಂಧಿಕರಲ್ಲೇ ಹೇಳಿದರೂ, ಆ ಬಗ್ಗೆ ಅವರು ತಮಾಷೆ ಮಾಡುತ್ತಾರೆ. ಹಾಗಾಗಿ ನಿಮ್ಮ ವೈವಾಹಿಕ ಜೀವನದ ಬಗ್ಗೆ ಯಾರಲ್ಲಿಯೂ ಹೇಳಬೇಡಿ.
ನಿಮ್ಮ ವಯಸ್ಸನ್ನು ಯಾರಿಗೂ ಹೇಳಬಾರದಂತೆ. ಏಕೆಂದರೆ ಇದರಿಂದಲೂ ನಿಮ್ಮ ಜೀವನಕ್ಕೆ ಸಮಸ್ಯೆಯಾಗಬಹುದು ಅಂತಾರೆ ಚಾಣಕ್ಯ.