Spiritual: ರುದ್ರಾಕ್ಷಿ ಎಂದರೆ, ಹಿಂದೂಗಳ ಪವಿತ್ರ ವಸ್ತುಗಳಲ್ಲಿ ಒಂದು. ಶಿವನ ಮೂರನೇ ಕಣ್ಣೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ಇನ್ನು ಕೆಲವರು ಶಿವನ ಕಣ್ಣೀರೇ ರುದ್ರಾಕ್ಷಿ ಎನ್ನುತ್ತಾರೆ. ಹಿಂದೂಗಳಲ್ಲಿ ರುದ್ರಾಕ್ಷಿ ಧರಿಸುವುದಕ್ಕೂ ಹಲವು ನಿಯಮಗಳಿದೆ. ರುದ್ರಾಕ್ಷಿ ಧರಿಸಿ ಕೆಲ ಕೆಲಸಗಳನ್ನು ಮಾಡಬಾರದು. ರುದ್ರಾಕ್ಷಿ ಧರಿಸಿ, ಕೆಲ ಸ್ಥಳಗಳಿಗೆ ಹೋಗಬಾರದು. ರುದ್ರಾಕ್ಷಿ ಧರಿಸಿ, ಕೆಲವು ಕಡೆ ಓಡಾಡಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ರುದ್ರಾಕ್ಷಿಯನ್ನು ಎಲ್ಲಿ ಧರಿಸಬಾರದು ಅಂತಾ ತಿಳಿಯೋಣ ಬನ್ನಿ..
ಸ್ಮಶಾನಕ್ಕೆ ಹೋಗುವಾಗ ರುದ್ರಾಕ್ಷಿ ಧರಿಸಬಾರದು. ಯಾರದ್ದಾರದರೂ ಅಂತ್ಯಕ್ರಿಯೆಗೆ ಹೋಗುವಾಗ, ಸ್ಮಶಾನಕ್ಕೆ ಹೋಗಬೇಕಾಗುತ್ತದೆ. ಈ ವೇಳೆ ರುದ್ರಾಕ್ಷಿಯನ್ನು ಧರಿಸಬಾರದು. ಏಕೆಂದರೆ, ಅಲ್ಲಿ ಮೈಲಿಗೆ ಇರುತ್ತದೆ. ನಕಾರಾತ್ಮಕ ಶಕ್ತಿಗಳ ಪ್ರಭಾವವಿರುತ್ತದೆ. ಹಾಗಾದರೆ ಸ್ಮಶಾನದಲ್ಲಿ ವಾಸಿಸುವ ನಾಗಾಸಾಧುಗಳು ರುದ್ರಾಕ್ಷಿ ಧರಿಸುತ್ತಾರಲ್ಲಾ ಅಂತಾ ಹಲವರು ಪ್ರಶ್ನಿಸುತ್ತಾರೆ. ಅವರು ರುದ್ರಾಕ್ಷಿ ಧರಿಸಿದರೂ, ಅದರ ನಿಯಮವನ್ನು ಅನುಸರಿಸುತ್ತಾರೆ.
ಸೂತಕದ ಮನೆಗೆ ಹೋಗುವಾಗ ರುದ್ರಾಕ್ಷಿ ಧರಿಸಬಾರದು. ಯಾರಾದರೂ ಸತ್ತಾಗ ಆ ಮನೆಯನ್ನು ಸೂತಕದ ಮನೆ ಎನ್ನುತ್ತಾರೆ. ಅಲ್ಲಿ 12 ದಿನಗಳ ಕಾಲ ಸೂತಕ ಆಚರಿಸಲಾಗುತ್ತದೆ. ಮತ್ತು ಮಗು ಹುಟ್ಟಿದಾಗ, 45 ದಿನಗಳ ಕಾಲ ಅಮೆ ಆಚರಿಸಲಾಗುತ್ತದೆ. ಅಂಥ ವೇಳೆ ರುದ್ರಾಕ್ಷಿ ಧರಿಸಬಾರದು. ರುದ್ರಾಕ್ಷಿ ಧರಿಸಿ, ಶವ ನೋಡಲು ಹೋಗುವುದು ಅಥವಾ ಆಗಷ್ಟೇ ಹುಟ್ಟಿದ ಮಗು ನೋಡಲು ಹೋಗುವುದೆಲ್ಲ ಮಾಡಬಾರದು.
ಶೌಚಾಲಯಕ್ಕೆ ಹೋಗುವಾಗ, ಸ್ನಾನಕ್ಕೆ ಹೋಗುವಾಗ ರುದ್ರಾಕ್ಷಿ ಧರಿಸಬಾರದು. ಶೌಚಕ್ಕೆ, ಸ್ನಾನ ಮಾಡಲು ಹೋಗುವಾಗ, ನಾವು ನಮ್ಮ ದೇಹದ ಕಸವನ್ನು ಹೊರಹಾಕಲು ಹೋಗುತ್ತೇವೆ. ಹಾಗಾಗಿ ಈ ವೇಳೆ ರುದ್ರಾಕ್ಷವನ್ನು ಧರಿಸಬಾರದು.
ಮಾಂಸ ಮತ್ತು ಮದಿರೆಯ ಸೇವನೆ ಮಾಡುವಾಗ ರುದ್ರಾಕ್ಷಿ ಧರಿಸಬಾರದು. ರುದ್ರಾಕ್ಷವನ್ನು ಧರಿಸಿ ಮಾಂಸ ಮದಿರೆ ಸೇವಿಸಬಾರದು. ಅಲ್ಲದೇ, ರುದ್ರಾಕ್ಷಿಯನ್ನು ಧರಿಸಿ, ಮಾಂಸದಂಗಡಿ ಮತ್ತು ಮದಿರೆಯ ಅಂಗಡಿಗೆ ಹೋಗಬಾರದು. ಈ ಸ್ಥಳ ಅಪವಿತ್ರತೆಯಿಂದ ಕೂಡಿರುತ್ತದೆ. ಈ ಕಾರಣಕ್ಕೆ ಇಲ್ಲಿ ರುದ್ರಾಕ್ಷಿಯನ್ನು ಧರಿಸಿ ಹೋಗಬಾರದು.
ಸಂಭೋಗ ಮಾಡುವ ವೇಳೆ ರುದ್ರಾಕ್ಷಿ ಧರಿಸಬಾರದು. ಸಂಭೋಗ ಮಾಡುವುದು ಒಂದು ಸಾಮಾನ್ಯ ಕ್ರಿಯೆಯಾಗಿದೆ. ಆದರೆ, ಸಂಭೋಗದ ವೇಳೆ ಮನಸ್ಸಿನಲ್ಲಿ ಕಾಮವಿರುತ್ತದೆ. ಹಾಗಾಗಿ ಈ ವೇಳೆ ರುದ್ರಾಕ್ಷಿಯಂಥ ಪವಿತ್ರ ವಸ್ತುವನ್ನು ಧರಿಸಬಾರದು.
ಮಲಗುವ ವೇಳೆ ರುದ್ರಾಕ್ಷಿ ಧರಿಸಬಾರದು. ಮಲಗಿದ್ದಾಗ, ನಮ್ಮ ದೇಹದ ಕಲ್ಮಶ ಹೊರಹೋಗುವ ಕ್ರಿಯೆ ಹೋಗುತ್ತದೆ. ಹಾಗಾಗಿ ಮರುದಿನ ಬೆಳಿಗ್ಗೆ ನಮ್ಮ ದೇಹ ಅಪವಿತ್ರವಾಗಿರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದು, ಶೌಚಾದಿಗಳನ್ನು ಮಾಡಿ, ಸ್ನಾನ ಮಾಡಲಾಗುತ್ತದೆ. ಈ ಕಾರಣಕ್ಕೆ ರಾತ್ರಿ ಮಲಗುವಾಗ ರುದ್ರಾಕ್ಷಿಯನ್ನು ಧರಿಸಬಾರದು.
ಈ 6 ಸ್ಥಳಕ್ಕೆ ಯಾರು ರುದ್ರಾಕ್ಷಿ ಧರಿಸಿ ಹೋಗುತ್ತಾರೋ, ಅವರು ಶಿವನ ಕೋಪಕ್ಕೆ ಗುರಿಯಾಗುತ್ತಾರೆ. ಅಂಥವರ ಆರ್ಥಿಕ ಸ್ಥಿತಿ, ಆರೋಗ್ಯ ಸ್ಥಿತಿ ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ಹಾಗಾಗಿ ರುದ್ರಾಕ್ಷಿ ಧರಿಸುವಾಗ ಅದರ ಬಗ್ಗೆ ತಿಳಿದು ಧರಿಸಿ.
ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?
ಪ್ರತೀ ವರ್ಷ ಪುರಿ ಜಗನ್ನಾಥನಿಗೆ ಅನಾರೋಗ್ಯವಾಗುತ್ತದೆ.. ಇದರ ಹಿಂದಿನ ಕಥೆ ಇಲ್ಲಿದೆ ನೋಡಿ..