Wednesday, April 23, 2025

Latest Posts

Fly Over ಕಳಪೆ ಕಾಮಗಾರಿ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ..!

- Advertisement -

ಬೆಂಗಳೂರಿನ ಗೊರಗುಂಟೆಪಾಳ್ಯ ಪಾರ್ಲೆ ಟೋಲ್ (Goraguntepalya Parle Toll) ವರೆಗಿನ ಫೈ ಒವರ್ ಕಳಪೆ ಕಾಮಗಾರಿಗೆ ಕಾರಣವಾಗಿರುವವರ ವಿರುದ್ಧ ತನಿಖೆ ನಡೆಸಿ ಕ್ರಮಿನಲ್ ದೂರು ದಾಖಲಿಸಿ, ದುರಸ್ಥಿ ಕಾರ್ಯಕ್ಕೆ ಗುತ್ತಿಗೆದಾರರಿಂದ ಹಣ ವಸೂಲ ಮಾಡಲು ಆಗ್ರಹಿಸಿ ಸಿಪಿಐಎಂ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ (Office of the National Highway Authority) ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. 8ನೇ ಮೈಲಿಯಿಂದ ನೂರಾರು ಜನರ ಮೆರವಣಿಗೆ ನಡೆಸಲಾಯಿತು. ಸುಮಾರು 12 ವರ್ಷಗಳ ಮುಂಚೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ವರೆಗಿನ ಫ್ಲೈ ಒವರ್ 750 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವುದ್ದು, ಈ ಫ್ಲೈ ಓವರ್ ನಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹವನ್ನು ಮಾಡಲಾಗುತ್ತಿದೆ. ಇದೇ ಅಲ್ಲದೇ, ಈ ಟೋಲ್ ಸಂಗ್ರಹವನ್ನು ಖಾಸಗೀ ಗುತ್ತಿಗೆದಾರರಿಗೆ ನೀಡಿದ್ದು, ಅಂತೆಯೇ ಫೈ ಓವರ್ ನಿರ್ವಹಣೆಯನ್ನೂ ಕೂಡ ಖಾಸಗೀ ಗುತ್ತಿಗೆದಾರರಿಗೆ ನೀಡಲಾಗಿದೆ. ಈಗ ಕಳೆದ ಎರಡು ತಿಂಗಳಿಂದ ದಿಢೀರ್ ಎಂದು ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ವರೆಗಿನ ಫ್ಲೈಒವರ್ ನಲ್ಲಿನ  ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದಕ್ಕೆ ಫೈ ಓವರ್ ನ ಕಳಪೆ ಕಾಮಾಗಾರಿಯಿಂದ ಮತ್ತು ಪಿಲ್ಲರ್ ಗಳ ಅಸರ್ಮಪಕ ನಿರ್ವಹಣೆಯಿಂದಾಗಿ ವಾಹನ ಸಂಚಾರವು ಅಪಾಯಕಾರಿಯಾಗಿದೆ ಎಂದು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳೇ ವಿಧಾನ ಸಭೆಯಲ್ಲಿ ದಾಸರಹಳ್ಳಿಯ ವಿಧಾನ ಸಭಾ ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ. ಇಂದು ದುರಸ್ಥಿ ಮಾಡಲಾಗದಷ್ಟರ ಮಟ್ಟಿಗೆ ಹದಗೆಟ್ಟಿರುವ ಫೈ ಓವರ್ ಒಂದೆರಡು ತಿಂಗಳಲ್ಲಿ ಆಗಿರಬಹುದಾದ ಸಮಸ್ಯೆಯಲ್ಲ. ಬದಲಾಗಿ ಫೈ ಓವರ್ ನಿರ್ಮಾಣದ ಹಂತದಲ್ಲಿ ಸಿಮೆಂಟ್ ಹಾಗು ಇನ್ನಿತರ ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಹಾಗು ಅತೀವ ಭ್ರಷ್ಟಾಚಾರದಿಂದ (corruption) ಆಗಿರುವ ಸಮಸ್ಯೆ ಇದಾಗಿದೆ. ಆದ್ದರಿಂದ ಈ ಕಳಪೆ ಕಾಮಾಗಾರಿಯ ಕುರಿತು ತಪ್ಪಿತಸ್ಥರ ವಿರುದ್ಧ ಸಮಗ್ರ ತನಿಖೆ ಆಗಬೇಕು. ಈ ಮೇಲಿನಂತೆ 12 ವರ್ಷಗಳ ಮುಂಚೆ ಸುಮಾರು 750 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಫೈ ಓವರ್‌ ನ್ನು ಈಗ ಅದನ್ನು ಕೆಡವಿ ಹೊಸದಾಗಿ  ನಿರ್ಮಾಣ ಮಾಡುವುದಾಗಿ ಹೇಳಲಾಗುತ್ತಿದೆ. ಆದರೆ ಇಂದು ಮತ್ತೆ ಫೈ ಓವರ್ ಕೆಡವಿ ಮರುನಿರ್ಮಾಣ ಮಾಡಿದಲ್ಲಿ ರಾಜ್ಯ ಸರ್ಕಾರ ಸುಮಾರು 22 ಜಿಲ್ಲೆಗಳಿಗೆ ಹಾಗು ಹೊರ ರಾಜ್ಯಗಳಿಗೆ ಪ್ರವೇಶ ದ್ವಾರವಾಗಿರುವ ಈ ಪ್ರಮುಖ ರಸ್ತೆಯು ಸಂಪೂರ್ಣ ಬಂದ್ ಆಗಲಿದ್ದು, ಇದರಿಂದ ಪ್ರತಿನಿತ್ಯ ಲಕ್ಷಾಂತರ ಜನರಿಗೆ ಅತೀವ ಅನಾನೂಕೂಲವಾಗಲಿದೆ,  ಅಲ್ಲದೇ ಈಗ ಹೊಸ ಫೈ ಓವರ್ ನಿರ್ಮಾಣಕ್ಕೆ ಕನಿಷ್ಠ 3೦೦೦ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಇಂದು ಸಿಪಿಐ(ಎಂ) ಪಕ್ಷದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಜಂಟಿಯಾಗಿ ಪ್ರತಿಭಟನೆ ನಡೆಸಿ  ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ವರೆಗಿನ ಫೈ ಪ್ಲೈಒರ್ ಹದಗೆಟ್ಟರುವ ಮತ್ತು ಕಳಪೆ ಕಾಮಾಗಾರಿಗೆ ಕಾರಣವಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗು ಅಂಥವರ ವಿರುದ್ಧ ಕ್ರಮಿನಲ್ ದೂರು ದಾಖಲಸಿ ಫ್ಲೈ ಒವರ್ ನ ದುರಸ್ಥಿ ಕಾರ್ಯಕ್ಕೆ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಲು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಮ್ಯಾನೆಜರ್ ಗೆ ಮನವಿ ನೀಡಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಮ್ರೇಡ್ ಕೆ.ಪ್ರಕಾಶ್, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್.ಎನ್ ಪ್ರತಾಪ್ ಸಿಂಹ (Comrade.N Pratap Lion), ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಗೌರಮ್ಮ, ಸಿಪಿಐಎಂ ಹಿರಿಯ ಮುಖಂಡರಾದ ಕಾಮ್ರೇಡ್ ಹೆಚ್. ಎನ್. ಗೋಪಾಲಗೌಡ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ‌ ಮಂಡಳಿ ಸದಸ್ಯರಾದ  ಲೀಲಾವತಿ.ಟಿ, ಹುಳ್ಳಿ ಉಮೇಶ್, ಜಿಲ್ಲಾ ಸಮಿತಿ ಸದಸ್ಯರಾದ ಹನುಮಂತರಾವ್ ಹವಲ್ದಾರ್, ಚಂದ್ರಶೇಖರ್, ಮಂಗಳ ಕುಮಾರಿ, ನಂಜೇಗೌಡ, ಹಾಗೂ ವಿಜಯಲಕ್ಷ್ಮಿ, ರೇಣುಕ, ತಿಮ್ಮರಾಜು, ಸುಶೀಲಮ್ಮ, ಮಂಜುಳಾ, ಎಆರ್.ಡಿ.ಯು ರವಿ, ಚಾರ್ಲಿ ಸೇರಿದಂತೆ ನೂರಾರು ಜನ‌ಕಾರ್ಮಿಕರು ಮಹಿಳೆಯರು  ಭಾಗವಹಿಸಿದ್ದರು.

                                                                                               ಕರ್ನಾಟಕ ಟವಿ, ಬೆಂಗಳೂರು.

- Advertisement -

Latest Posts

Don't Miss