Political News: ಕಾಂತರಾಜು ನೇತೃತ್ವದ ಹಿಂದುಗಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳಲ್ಲಿನ ಜಾತಿಗಳ ಅಂಕಿ ಅಂಶಗಳ ಬಗ್ಗೆ ಅಧ್ಯಯನ ಮಾಡಲು, ತಜ್ಞರ ತಂಡ ಅಥವಾ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಬೇಕು ಎಂದು ಎಮ್ಎಲ್ಸಿ ದಿನೇಶ್ ಗೂಳಿಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ದಿನೇಶ್, ಸಮಿತಿಯ ವರದಿಯನ್ನು ಸಂಪುಟದ ಮುಂದೆ ಚರ್ಚೆಗೆ ತಂದಿರುವುದು ಹಲವು ರೀತಿಯ ವಿಶ್ಲೆಷಣೆಯನ್ನು ಹುಟ್ಟಹಾಕಿದೆ. ಆಯೋಗದ ಜಾರಿ ಬಗ್ಗೆ ನಾವು ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿರುವುದರಿಂದ ಈಗ ವಿಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎನ್ನುತ್ತಿದ್ದಾರೆ. ಆದರೆ ಈಗ ಇದು ಹಲವಾರು ಸಮುದಾಯದವರ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರದ ಬಗ್ಗೆ, ಕಾಂಗ್ರೆಸ್ ಆಶಯದ ಬಗ್ಗೆ ತಪ್ಪು ಕಲ್ಪನೆಗಳು ಹೊರಹೋಗಲು ಬಿಡಬಾರದು. ಇಂಥವುಗಳಿಗೆ ಕಡಿವಾಣ ಹಾಕಲು ಮತ್ತು ಜನರಿಗೂ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಈಗ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸುವ ಸಮೀಕ್ಷಾ ವರದಿಗೆ ಸಂಬಂಧಪಟ್ಟಂತೆ ಅಂಕಿ ಅಂಶಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ತಂಡ ಅಥವಾ ಹಿರಿಯ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸಲು ಮನವಿ ಮಾಡಿದ್ದಾರೆ.