Friday, March 29, 2024

Latest Posts

‘ಕಾಂಗ್ರೆಸ್ ನವರು ಜೆಡಿಎಸ್ ಗೆ, ಜೆಡಿಎಸ್ ನವರು ಕಾಂಗ್ರೆಸ್ ಗೆ ಮತಹಾಕಿಲ್ಲ’- ಮಾಜಿ ಸಚಿವ ಆಂಜನೇಯ

- Advertisement -

ಚಿತ್ರದುರ್ಗ: ಮೈತ್ರಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೊಡೆತ ಬಿದ್ದಿದೆ ಅಂತ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಆಂಜನೇಯ, ಮೈತ್ರಿ ಸರ್ಕಾರ ನಡೆಸಲು ಸೀಮಿತವಾಗಿ ಚುನಾವಣೆ ಪ್ರತ್ಯೇಕವಾಗಿ ಮಾಡಬೇಕಿತ್ತು. ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹೊಡೆತ ಬಿದ್ದಿಲ್ಲ. ಜೆಡಿಎಸ್ ಪಕ್ಷಕ್ಕೂ ಮೈತ್ರಿ ಹೊಡೆತ ಬಿದ್ದಿದೆ.

ಚುನಾವಣೆಯಲ್ಲಿ ಮೈತ್ರಿ ಬೇಕಿರಲಿಲ್ಲ ಅಂತ ಆಂಜನೇಯ ಅಭಿಪ್ರಾಯ ವ್ಯಕ್ಚಪಡಿಸಿದ್ದಾರೆ. ಮೈತ್ರಿ ಮಾಡಿಕೊಳ್ಳದಿದ್ದರೆ ನಾವು 16 ಸ್ಥಾನ ಗೆಲ್ಲುವ ಅವಕಾಶ ಇತ್ತು ಎಂದು ಹೇಳಿದ್ದಾರೆ. ಅಲ್ಲದೆ ಈ ಬಾರಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಮತ ಹಾಕಿಲ್ಲ. ಹಾಗೇ ಕಾಂಗ್ರೆಸ್ ನವರು ಜೆಡಿಎಸ್ ಗೆ ಮತ ಹಾಕಿಲ್ಲ ಈ ಬಗ್ಗೆ ಚರ್ಚೆ ಆಗಬೇಕು ಎಂದರು.

ಇನ್ನು ಚಿತ್ರದುರ್ಗದಲ್ಲಿ ಮೈತ್ರಿ ಅಭ್ಯರ್ಥಿ ಸೋಲಿನ ಕುರಿತಾಗಿ ಮಾತನಾಡಿದ ಆಂಜನೇಯ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತು ಎಂದಿದ್ದಾರೆ. ಸೋಲಿನ ಬಗ್ಗೆ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಧೃತಿಗೆಡಬಾರದು ಅಂತಲೂ ಮಾಜಿ ಸಚಿವ ಆಂಜನೇಯ ಸಲಹೆ ನೀಡಿದ್ದಾರೆ.

ನರೇಂದ್ರ ಮೋದಿ ಬಗ್ಗೆ ವಿನಯ್ ಗುರೂಜಿ ಏನ್ ಹೇಳಿದ್ರು ಗೊತ್ತಾ..? ಈ ವೀಡಿಯೋ ತಪ್ಪದೇ ನೋಡಿ.

https://www.youtube.com/watch?v=37KnWEAonRk
- Advertisement -

Latest Posts

Don't Miss