Health Tips: ಡಯಟ್ ಮಾಡುವವರಿಗೆ, ಶುಗರ್ ಇರುವ ಕೆಲವರಿಗೆ ಬಿಟ್ಟರೆ, ಎಲ್ಲರಿಗೂ ಸಿಹಿ ತಿಂಡಿ ಅಂದ್ರೆ ತುಂಬಾ ಇಷ್ಟ. ಬರ್ಫಿ, ಪಾಯಸ, ಶೀರಾ, ಗುಲಾಬ್ ಜಾಮೂನ್, ರಸಗುಲ್ಲಾ ಒಂದಾ ಎರಡಾ..? ಹೇಳುತ್ತಾ ಹೋದರೆ, ರಾಶಿ ರಾಶಿ ಸಿಹಿ ತಿಂಡಿ ಇದೆ. ಆದ್ರೆ ಈ ಸಿಹಿ ತಿಂಡಿಯನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ, ರೋಗ ಬರೋದು ಗ್ಯಾರಂಟಿ. ಹಾಗಾದ್ರೆ ಎಷ್ಟು ಪ್ರಮಾಣದಲ್ಲಿ ಸಿಹಿ ತಿಂಡಿ ತಿನ್ನಬೇಕು ಅಂತಾ ತಿಳಿಯೋಣ ಬನ್ನಿ..
ಷಡ್ರಸಗಳು ನಮ್ಮ ದೇಹ ಸೇರಬೇಕು. ಆಗ ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಷಡ್ರಸವೆಂದರೆ, ಸಿಹಿ, ಹುಳಿ, ಉಪ್ಪು, ಖಾರ, ಒಗರು ಮತ್ತು ಕಹಿ. ಇವಿಷ್ಟು ರಸಗಳು ನಮ್ಮ ದೇಹ ಸೇರಿದಾಗಲೇ, ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದು ವೈದ್ಯ ಕಿಶೋರ್ ಹೇಳಿದ್ದಾರೆ. ಎಲ್ಲವನ್ನೂ ಚೆನ್ನಾಗಿ ಆಸ್ವಾದಿಸಿದಾಗಲೇ ಆ ಊಟದ ರುಚಿ ಗೊತ್ತಾಗುತ್ತದೆ.
ಅದರಲ್ಲೂ ಸಿಹಿ ಪದಾರ್ಥವನ್ನು ನೀವು ಆಸ್ವದಿಸಿ ತಿಂದಾಗಲೇ, ಉಳಿದ ಪದಾರ್ಥಗಳನ್ನು ನೀವು ಚೆನ್ನಾಗಿ ಆಸ್ವಾದಿಸಿ ತಿನ್ನಲು ಸಾಧ್ಯವಾಗುತ್ತದೆ. ಹಾಗಾಗಿ ಭಾರತದಲ್ಲಿ ಪ್ರತೀ ರಾಜ್ಯದಲ್ಲೂ ಸ್ಪೆಶಲ್ ಸ್ವೀಟ್ ಇದೆ. ಆಗ್ರಾದಲ್ಲಿ ಪೇಟಾ, ಸೌತ್ ಇಂಡಿಯಾದಲ್ಲಿ ಪಾಯಸ, ಕೇಸರಿ ಭಾತ್, ಬಂಗಾಲದಲ್ಲಿ ರಸಗುಲ್ಲಾ, ಮಹಾರಾಷ್ಟ್ರದಲ್ಲಿ ಹೋಳಿಗೆ ಹೀಗೆ ಒಂದೊಂದು ರಾಜ್ಯಕ್ಕೂ ಒಂದೊಂದು ಸ್ಪೆಶಲ್ ಸಿಹಿ ತಿಂಡಿ ಇದೆ.
ಆದರೆ ಈ ಎಲ್ಲ ಸಿಹಿ ತಿಂಡಿಗಳನ್ನೂ ಊಟದಲ್ಲಿ ಲಿಮಿಟಿನಲ್ಲಿ ಬಡಿಸಲಾಗುತ್ತದೆ. ಅಂದ್ರೆ ಸಿಹಿ ತಿಂಡಿ ಎಷ್ಟೇ ಸ್ವಾದಿಷ್ಟವಾಗಿದ್ದರೂ ಕೂಡ, ಅದನ್ನು ಮಿತವಾಗಿ ತಿನ್ನಬೇಕು ಎಂಬ ಕಾರಣಕ್ಕೆ, ಬಾಳೆ ಎಲೆ ಊಟದಲ್ಲಿ ಸ್ವಲ್ಪವೇ ಸಿಹಿ ತಿಂಡಿಯನ್ನು ಹಾಕಲಾಗುತ್ತದೆ. ಯಾಕಂದ್ರೆ ಸಿಹಿ ಮಿತವಾಗಿ ತಿಂದಾಗ, ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಶುಗರ್ ಸಮವಾಗಿ ಇರುತ್ತದೆ. ದೇಹದಲ್ಲಿ ಶುಗರ್ ಪ್ರಮಾಣ ಕೊಂಚವಾದರೂ ಇರಬೇಕು. ಅದಕ್ಕಾಗಿ ಮನುಷ್ಯ ಸಿಹಿ ತಿಂಡಿಯನ್ನು ತಿಂದರೂ ಮಿತವಾಗಿರಬೇಕು. ಅದು ಹೆಚ್ಚಾದಾಗ ಮಾತ್ರ ಶುಗರ್ ಬರುತ್ತದೆ.
ಇನ್ನು ಶುಗರ್ ಇದ್ದವರು ಕೂಡ ಕೆಲವು ನಿಯಮಗಳನ್ನು ಅನುಸರಿಸಿ, ಸಿಹಿ ತಿಂಡಿಯನ್ನು ತಿನ್ನಬಹುದು. ಆದರೆ ಬೆಲ್ಲದಿಂದ ತಯಾರಿಸಿದ, ಮನೆಯಲ್ಲೇ ತಯಾರಿಸಿದ ಸಿಹಿ ತಿಂಡಿ ತಿಂದರೆ ಉತ್ತಮ. ಏಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ, ಇತರ ಫ್ಲೇವರ್ ಹಾಕಿ ಮಾಡಿದ ಸಿಹಿ ತಿಂಡಿಯಿಂದ ಶುಗರ್ ಸೇರಿ ಹಲವು ಮಾರಕ ಖಾಯಿಲೆಗಳು ಬರುತ್ತದೆ. ಹಾಗಾಗಿ ಮನೆಯಲ್ಲೇ ಬೆಲ್ಲದಿಂದ ತಯಾರಿಸಿ, ತುಪ್ಪ ಬೆರೆಸಿದ ಸಿಹಿ ಪದಾರ್ಥವನ್ನು ಮಿತವಾಗಿ ಸೇವಿಸಬಹುದು. ಇದರೊಂದಿಗೆ ವಾಕಿಂಗ್, ಯೋಗ, ಕೆಲವು ಡಯಟ್ಗಳು ಬೇಕೆ ಬೇಕು ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..