Thursday, April 25, 2024

Latest Posts

ದೇವಸ್ಥಾನದಲ್ಲಿ ನವಿಲು ಪ್ರದಕ್ಷಿಣೆ..!- ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಅಚ್ಚರಿ

- Advertisement -

ಮಂಗಳೂರು: ಇಲ್ಲಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾದಲ್ಲಿ ನಿನ್ನೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿನ ನೀರುಮಾರ್ಗ ಎಂಬಲ್ಲಿ ಇರುವ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಈ ವೇಳೆ ದಿಢೀರನೆ ನವಿಲೊಂದು ದೇವಸ್ಥಾನದ ಆವರಣದೊಳಕ್ಕೆ ಹಾರಿ ಬಂತು. ದೇಗುಲದ ಧ್ವಜಸ್ತಂಭಕ್ಕೆ ನಿನ್ನೆ ತೈಲದಿವಾಸ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಪ್ರತ್ಯಕ್ಷವಾದ ನವಿಲು ಜೋರಾಗಿ ಕೂಗತೊಡಗಿತು. ದೇವರ ವಿಗ್ರಹವಿದ್ದ ಗರ್ಭಗುಡಿಯೆದುರು ನಿಂತುಬಿಟ್ಟಿತು. ಈ ದೃಶ್ಯ ಕಂಡ ಭಕ್ತರು ಸುಬ್ರಹ್ಮಣ್ಯನ ವಾಹನ ನವಿಲು. ಹೀಗಾಗಿ ಈ ನವಿಲು ದೇವಸ್ಥಾನಕ್ಕೆ ಪೂಜೆಗೆಂದು ಬಂದಿದೆ ಅಂತ ಭಕ್ತಿಭಾವದಿಂದ ಕೈಮುಗಿದ್ರು.

- Advertisement -

Latest Posts

Don't Miss