Friday, June 20, 2025

Latest Posts

ಯಾರೊಂದಿಗಾದರೂ ನೀವು ಸ್ನೇಹ ಮಾಡುವುದಿದ್ದಲ್ಲಿ, ಈ ಪರೀಕ್ಷೆ ಮಾಡಿನೋಡಿ..

- Advertisement -

ಕೆಲವರ ಸ್ನೇಹದಿಂದ ಜೀವನ ಅತ್ಯುತ್ತಮವಾಗಿ ಬದಲಾದರೆ, ಇನ್ನೂ ಕೆಲವರ ಸ್ನೇಹದಿಂದ ಜೀವನ ದುರ್ಗತಿಗೆ ಬರುತ್ತದೆ. ಹಾಗಾಗಿ ಸರಿಯಾಗಿ ಪರೀಕ್ಷಿಸಿ, ಸ್ನೇಹ ಮಾಡಬೇಕು ಅಂತಾ ಹೇಳ್ತಾರೆ ಹಿರಿಯರು. ಯಾವುದಾದರೂ ಹೆಣ್ಣು ಅಥವಾ ಹುಡುಗ ಜೀವನ ಹಾಳು ಮಾಡಿಕೊಂಡರೆ, ಸಂಗತಿ ಸಂಗದೋಷ ಎನ್ನುತ್ತಾರೆ. ಅಂದ್ರೆ ಕೆಟ್ಟವರ ಸಂಗ ಮಾಡಿ, ಈ ರೀತಿಯಾಗಿ ಹೋಯಿತು ಎಂದರ್ಥ. ಹಾಗಾಗಿಯೇ ಉತ್ತಮರನ್ನು ಕಂಡು ಸ್ನೇಹ ಮಾಡಿಕೊಳ್ಳಬೇಕು ಅನ್ನೋದು. ಚಾಣಕ್ಯರ ಪ್ರಕಾರ, ನಮಗೆ ಉತ್ತಮ ಸ್ನೇಹಿತರು ಸಿಕ್ಕಬೇಕಾದರೆ, ನಾವು ಅವರಿಗೆ ಕೆಲ ಪರೀಕ್ಷೆ ಮಾಡಬೇಕಂತೆ. ಆ ಪರೀಕ್ಷೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಹೊಂಬಾಳೆ ಫಿಲಂಸ್ ನಿರ್ಮಾಣದ “ಧೂಮಂ” ಆರಂಭ.. ಪವನ್ ಕುಮಾರ್ ಡೈರೆಕ್ಷನ್..

ಎದುರಿಗಿರುವವರಲ್ಲಿ ನಾವು ಮೊದಲು ಮಾಡಬೇಕಾದ ಪರೀಕ್ಷೆ ಅಂದ್ರೆ, ಅವರ ಮಾತನ್ನು ಗಮನಿಸುವುದು. ಅವರು ತಮ್ಮ ಬಗ್ಗೆಯೇ ಹೆಚ್ಚು ಕೊಚ್ಚುಕೊಳ್ಳುತ್ತಿದ್ದು, ಬೇರೆಯವರನ್ನು ಬೈಯ್ಯುವವರಾಗಿದ್ದರೆ, ಖಂಡಿತ ಅಂಥವರ ಸಂಗ ಬೇಡ. ಇನ್ನು ಹಿಂದಿನಿಂದ ಹಿಯಾಳಿಸಿ, ಮುಂದಿನಿಂದ ಹೊಗಳುವವರು, ನಿಮಗೂ ಒಂದು ದಿನ ಹಾಗೇ ಮಾಡುತ್ತಾರೆಂದು ನೆನಪಿಡಿ. ಹಾಗಾದ್ರೆ ಎಂಥವರ ಸ್ನೇಹ ಮಾಡಬೇಕು ಅಂದ್ರೆ, ನಿಮ್ಮ ತಪ್ಪನ್ನು ನಿಮ್ಮ ಮುಂದೆಯೇ ಹೇಳುವವರನ್ನ ನಂಬಿ. ಇದ್ದದ್ದನ್ನ ಇದ್ದ ಹಾಗೆಯೇ ಹೇಳುವವರು ನಂಬಿಕೆಗೆ, ಗೆಳೆತನಕ್ಕೆ ಅರ್ಹರು.

ಎರಡನೇಯ ಪರೀಕ್ಷೆ ಅಂದ್ರೆ, ನೀವು ಕಷ್ಟದಲ್ಲಿದ್ದೀರಿ ಎಂದು ಯಾರು ಎದುರು ಹೇಳಿಕೊಳ್ಳುತ್ತೀರೋ, ಅವರಲ್ಲಿ ಯಾರು ನಿಮ್ಮ ಸಹಾಯಕ್ಕೆ ಮುಂದೆ ಬರುತ್ತಾರೋ, ಮತ್ತು ಆ ಸಹಾಯಕ್ಕೆ ಬದಲಾಗಿ ಏನನ್ನೂ ಬಯಸುವುದಿಲ್ಲವೋ, ಅಂಥವರು ಗೆಳೆತನಕ್ಕೆ ಉತ್ತಮರು.

ಹೆಣ್ಣು ಮಕ್ಕಳಿಗೆ ಇಂಥ ಪುರುಷರು ಇಷ್ಟವಾಗ್ತಾರಂತೆ..!

ಮೂರನೇಯದು ಎಲ್ಲರೊಂದಿಗೂ ಉತ್ತಮವಾಗಿದ್ದಾನಾ ಎಂಬುದನ್ನ ಗಮನಿಸಿ. ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತ ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುತ್ತಾರಾ ಎಂದು ಪರೀಕ್ಷಿಸಿ. ಅವರು ಎಲ್ಲರನ್ನೂ ಪ್ರೀತಿ, ಗೌರವದಿಂದ ಕಂಡರೆ, ನಿಮಗೂ ಅವರು ಒಳ್ಳೆಯದನ್ನೇ ಬಯಸುತ್ತಾರೆಂದು ಅರ್ಥ. ಆದರೆ ಎದುರಿನಿಂದ ಚೆಂದವಾಗಿ ಮಾತನಾಡಿ, ಹಿಂದಿನಿಂದ ಹಂಗಿಸುವುದು, ಅಥವಾ ಅವರಿಗೆ ಬೈಯ್ಯುವುದು, ಅಥವಾ ಅವರ ಬಗ್ಗೆ ಬೇರೆಯವರ ಬಳಿ ಕೆಟ್ಟ ಅಭಿಪ್ರಾಯ ಬರುವಂತೆ ಹೇಳುವುದೆಲ್ಲ ಮಾಡಿದರೆ, ಅಂಥವರೆಂದೂ ಉತ್ತಮ ಗೆಳೆಯರಾಗಲು ಸಾಧ್ಯವಿಲ್ಲ. ಅಂಥವರ ಸಂಗ ಬಿಡುವುದೇ ಉತ್ತಮ.

- Advertisement -

Latest Posts

Don't Miss