ಚಾಣಕ್ಯರ ಮಾತಿನಂತೆ ಯಾರಾದ್ರೂ ಜೀವನ ನಡೆಸಿದ್ರೆ, ಅಂಥವರು ಗೆದ್ದೇ ಗೆಲ್ಲುತ್ತಾರೆಂಬ ಮಾತಿದೆ. ಯಾಕಂದ್ರೆ ಚಾಣಕ್ಯರ ನೀತಿಯೇ ಅಂಥದ್ದು. ತಾಳ್ಮೆ, ಶ್ರಮ, ಪ್ರಯತ್ನ, ಬುದ್ಧಿವಂತಿಕೆ, ಇವೆಲ್ಲವೂ ಇದ್ದರೆ ಜೀವನ ಅತ್ಯುತ್ತಮವಾಗಿರುತ್ತೆ ಅನ್ನೋದೇ ಚಾಣಕ್ಯರ ಮೊದಲ ಮಾತು. ಇಂದು ನಾವು ನಿಮ್ಮಯಲ್ಲಿ ಯಾವ ಗುಣವಿದ್ದರೆ, ನೀವು ಲೀಡರ್ ಆಗಬಲ್ಲಿರಿ ಅಂತಾ ತಿಳಿಸಲಿದ್ದೇವೆ.
ಡಿ.30ಕ್ಕೆ ಯೋಗರಾಜ ಭಟ್ಟರ ಪದವಿ ಪೂರ್ವ ತೆರೆಗೆ..!
ಅನ್ಯಾಯದ ಮಾರ್ಗದಲ್ಲಿ ಹೋಗಬೇಡಿ. ನೀವು ಮಾಡುವ ಕೆಲಸವನ್ನು ನಿಯತ್ತಾಗಿ ಮಾಡಿ. ನಿಮ್ಮಿಂದ ತಪ್ಪಾಗಿದ್ದರೆ, ಅದನ್ನು ಒಪ್ಪಿಕೊಂಡು, ಅದನ್ನು ಸರಿಪಡಿಸಿಕೊಳ್ಳಲು ನೋಡಿ. ಅದನ್ನು ಬಿಟ್ಟು ನನಗೆಲ್ಲ ಬರುತ್ತದೆಂಬ ಅಹಂನಲ್ಲಿರಬೇಡಿ. ಇದರಿಂದ ನೀವು ಸರಿಯಾಗಿ ಕೆಲಸ ಕಲಿಯಲು ಸಾಧ್ಯವಾಗಲ್ಲ. ಇನ್ನು ಯಾವುದೇ ಕಾರಣಕ್ಕೂ ಅನ್ಯಾದ ಮಾರ್ಗದಲ್ಲಿ ಹೋಗಬೇಡಿ. ನಿಮ್ಮ ಕೆಲಸ ನ್ಯಾಯಯುತವಾಗಿರಲಿ.
ನಿಮ್ಮ ಸಹೋದ್ಯೋಗಿಗಳ ಜೊತೆ ಸೊಕ್ಕಿನಿಂದಿರಬೇಡಿ. ನೀವು ನಾಯಕರಾಗಬೇಕು ಅಂದ್ರೆ ನಿಮಗೆ ನಿಮ್ಮ ಸಹೋದ್ಯೋಗಿಗಳ ಸಹಕಾರ ಬೇಕು. ನೀವು ನಿಮ್ಮ ಸಹೋದ್ಯೋಗಿಗಳ ಜೊತೆ ಸರಿಯಾಗಿ ಇದ್ದರೆ, ಅವರೇ ನಿಮಗೆ ನಾಯಕರಾಗಲು ಸಹಾಯ ಮಾಡುತ್ತಾರೆ. ಆದ್ರೆ ನೀವು ಸಹೋದ್ಯೋಗಿಗಳ ಜೊತೆ ಸೊಕ್ಕಿನಿಂದಿದ್ದರೆ, ಅವರೇ ನಿಮ್ಮ ಗುರಿಗೆ ಅಡ್ಡಗಾಲಾಗುತ್ತಾರೆ.
ತಿಮ್ಮನ ಮೊಟ್ಟೆಗಳು ಚಿತ್ರೀಕರಣ ಮುಕ್ತಾಯ..
ಸಮಯ ಪಾಲನೆ ಮಾಡಿ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗುವುದು. ಸರಿಯಾದ ಸಮಯಕ್ಕೆ ಕೆಲಸ ಮುಗಿಸುವುದು. ಹೀಗೆ ಸಮಯಕ್ಕೆ ಬೆಲೆ ಕೊಡಿ. ನೀವು ಸಮಯಕ್ಕೆ ಬೆಲೆ ಕೊಟ್ಟರೆ, ಕಡಿಮೆ ಸಮಯದಲ್ಲೇ ನೀವು ನಿಮ್ಮ ಗುರಿಯನ್ನು ಸಾಧಿಸಬಹುದು.
ನಿಮ್ಮ ಗುರಿಯೆಡೆಗೆ ನಿಮ್ಮ ಗಮನವಿರಲಿ. ನೀವು ಏನು ಸಾಧಿಸಲು ಹೊರಟಿದ್ದೀರಿ. ಯಾವ ಕೆಲಸವನ್ನು ಕರೆಕ್ಟ್ ಆಗಿ ಮಾಡಿದರೆ, ನಿಮಗೆ ಪ್ರಮೋಷನ್, ನಾಯಕತ್ವ ಸಿಗುತ್ತದೆ ಅನ್ನೋ ಬಗ್ಗೆ ಗಮನವಿರಲಿ. ನಿಮ್ಮ ಗುರಿಗೆ ಯಾರದ್ದೊ ಜೊತೆಗಿನ ಜಗಳ, ಪ್ರೀತಿ, ಪ್ರೇಮ, ಕುಟುಂಬ ಸಮಸ್ಯೆ ಯಾವುದು ಅಡ್ಡ ಬರದಂತೆ ನೋಡಿಕೊಳ್ಳಿ.