Sunday, June 1, 2025

Latest Posts

ಬುದ್ಧ ಹೇಳಿದ ಈ 3 ವಿಷಯವನ್ನು ನೆನಪಿಟ್ಟರೆ, ನಿಮ್ಮ ದುಃಖಕ್ಕೆ ಅಂತ್ಯ ಸಿಗುತ್ತದೆ..

- Advertisement -

Spiritual: ಮನುಷ್ಯನಿಗೆ ಸಂಪತ್ತು, ಗೌರವ, ಆರೋಗ್ಯ, ಬಾಂಧವ್ಯ, ಪ್ರೀತಿ ಇವೆಲ್ಲವೂ ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚು ನೆಮ್ಮದಿ ಮುಖ್ಯ. ಹಲವರ ಬಳಿ ಶ್ರೀಮಂತಿಕೆ ಇರುತ್ತದೆ, ಪ್ರೀತಿ, ಕಾಳಜಿ ಮಾಡುವವರು ಇರುತ್ತಾರೆ. ಆದರೆ ನೆಮ್ಮದಿಯೇ ಇರುವುದಿಲ್ಲ. ಹಾಗಾದರೆ ನಮ್ಮ ದುಃಖ ಅಂತ್ಯವಾಗಬೇಕಾದರೆ ನಾವೇನು ಮಾಡಬೇಕು ಎಂದು ಬುದ್ಧ ಹೇಳಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ. ನಮಗೆ ದುಃಖ ಯಾವಾಗ ಆಗುತ್ತದೆ…? ನಾವು ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ. ಅಥವಾ ಇಷ್ಟವಾದ ವಸ್ತುವನ್ನು ಕಳೆದುಕೊಂಡಾಗ. ಅಥವಾ ನಾವು ಯಾರಿಂದ ಪ್ರೀತಿ, ಕಾಳಜಿ ಬಯಸಿರುತ್ತೇವೋ ಅವರು ನಮ್ಮನ್ನು ಪ್ರೀತಿಸಿದೇ, ನಿರ್ಲಕ್ಷ್ಯ ಮಾಡಿದಾಗ. ಈ ಸಮಯದಲ್ಲಿ ದುಃಖವಾಗುತ್ತದೆ. ಅಂದರೆ ನಮ್ಮ ದುಃಖಕ್ಕೆ ಮೂಲಕ ಕಾರಣವೇ ಬಯಕೆ.

ಎರಡನೇಯ ವಿಷಯ, ದುಃಖವನ್ನು ತೊಡೆದು ಹಾಕುವುದು ಹೇಗೆ..? ಯಾರನ್ನೇ ಆಗಲಿ ಹೆಚ್ಚು ಇಷ್ಟಪಡಬೇಡಿ. ವಸ್ತುಗಳ ಬಗ್ಗೆ ಹೆಚ್ಚು ಮೋಹವಿರಬಾರದು. ಇನ್ನು ಯಾರಿಂದಲೂ ಪ್ರೀತಿ, ಕಾಳಜಿ ಬಯಸಬೇಡಿ. ಏಕೆಂದರೆ ಬಯಸದೇ ನಿಮಗೆ ಏನಾದರೂ ಸಿಕ್ಕಾಗ, ಅದರಿಂದಾಗುವ ಖುಷಿಯೇ ಬೇರೆ. ಅದೇ ನೀವು ಬಯಸದೇ, ಅದು ಸಿಗದೇ ಹೋದರೆ, ಅದರಿಂದ ನಿಮಗೇನೂ ವ್ಯತ್ಯಾಸವಾಗದು.

ಮೂರನೇಯ ವಿಷಯ, ನಿಮ್ಮ ದುಃಖವನ್ನು ಯಾರಲ್ಲಿಯೂ ಹಂಚಿಕೊಳ್ಳಬೇಡಿ. ಮತ್ತು ಅವರಿಂದ ಸಮಾಧಾನದ ಮಾತನ್ನು ನಿರೀಕ್ಷಿಸಬೇಡಿ. ಅವರು ನಿಮಗೆ ಸಮಾಧಾನ ಮಾಡಿದ ಹಾಗೆ ಮಾಡಿ, ಕೊನೆಗೆ ನಿಮ್ಮ ದುಃಖದ ಬಗ್ಗೆ ಬೇರೆಯವರಲ್ಲಿ ತಮಾಷೆ ಮಾಡುತ್ತಾರೆ. ಆಗ ನಿಮ್ಮ ಮನಸ್ಸಿಗೆ ನೋವಾಗುತ್ತದೆ. ಹಾಗಾಗಿ ದುಃಖವಾದಾಗ, ಅದನ್ನು ಎದುರಿಸುವ ಅಥವಾ ಮನೆಯುವ ಶಕ್ತಿ ಇರಬೇಕೇ ಹೊರತು, ಅದನ್ನ ಇನ್ನೊಬ್ಬರ ಬಳಿ ಹೇಳಿಕೊಳ್ಳಬಾರದು.

ಮಂಗಳಮುಖಿಯರ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು..

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 1

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 2

- Advertisement -

Latest Posts

Don't Miss