Wednesday, June 18, 2025

Latest Posts

ಜೀವನದಲ್ಲಿ ಈ 8 ಗುಣಗಳನ್ನು ಮೈಗೂಡಿಸಿಕೊಂಡು ಬಿಡಿ, ನಿಮಗೇ ಒಳ್ಳೆಯದು.. ಭಾಗ 1

- Advertisement -

ಜೀವನದಲ್ಲಿ ನಾವು ಕೆಲವು ಗುಣಗಳನ್ನು ಮೈಗೂಡಿಸಿಕೊಂಡಲ್ಲಿ, ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಅದು ಉತ್ತಮ ಗುಣವಾದರೆ, ಉತ್ತಮ ರೀತಿಯಲ್ಲಿ ಮತ್ತು ಉತ್ತಮವಲ್ಲದ ಗುಣವಾದರೆ, ಕೆಟ್ಟ ರೀತಿಯಲ್ಲಿ. ಹಾಗಾಗಿ ಇಂದು ನಾವು ಯಾವ ಗುಣಗಳನ್ನು ಮೈಗೂಡಿಸಿಕೊಂಡರೆ, ಸತ್ಯವನ್ನು ಅರಿತರೆ, ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ ಅನ್ನೋ ಬಗ್ಗೆ ಹಂತ ಹಂತವಾಗಿ ತಿಳಿಯೋಣ ಬನ್ನಿ..

ಮೊದಲನೆಯ ಸತ್ಯ. ಭಯ ಬರೀ ತಲೆಯಲ್ಲಿರುತ್ತದೆ. ಒಮ್ಮೆಓರ್ವ ಅಜ್ಜ ತನ್ನ ಮೊಮ್ಮಗನಿಗೆ ಒಂದು ಕಥೆ ಹೇಳಿದ. ಏನಂದ್ರೆ, ನಮ್ಮ ತಲೆಯಲ್ಲಿ ಎರಡು ತೋಳಗಳಿರುತ್ತದೆ. ಒಂದು ಭಯ ಎನ್ನುವ ತೋಳ. ಇನ್ನೊಂದು ವಾಸ್ತವ ಅನ್ನುವ ತೋಳ. ಈ ಎರಡೂ ತೋಳಗಳ ಮಧ್ಯೆ ಯಾವಾಗಲೂ ಯುದ್ಧ ನಡೆಯುತ್ತಲೇ ಇರುತ್ತದೆ ಅಂತ. ಅದಕ್ಕೆ ಮೊಮ್ಮಗ ಕೇಳುತ್ತಾನೆ, ಹಾಗಾದ್ರೆ ಯಾವ ತೋಳ ಗೆಲ್ಲುತ್ತದೆ. ಆಗ ಅಜ್ಜ ಹೇಳುತ್ತಾರೆ, ನಾವು ಯಾವ ತೋಳಕ್ಕೆ ಹೆಚ್ಚು ತಿನ್ನಿಸುತ್ತೇವೋ, ಆ ತೋಳ ಗೆಲ್ಲುತ್ತದೆ ಎಂದು.

ಇದರ ಅರ್ಥ, ನೀವು ನಿಮ್ಮ ತಲೆಯಲ್ಲಿರುವ ಭಯವೆಂಬ ತೋಳಕ್ಕೆ ಹೆಚ್ಚು ತಿನ್ನಿಸುವ ಬದಲು, ವಾಸ್ತವವೆನ್ನುವ ತೋಳಕ್ಕೆ ತಿನ್ನಿಸಿ. ವಾಸ್ತವವನ್ನು ಅರಿತು, ಧೈರ್ಯ ಮೈಗೂಡಿಸಿಕೊಂಡರೆ, ಭಯವೆಂಬ ತೋಳ ಸೋಲುತ್ತದೆ.

ಎರಡನೇಯ ಸತ್ಯ. ಜೀವನ ಸುಂದರವಲ್ಲ. ಜೀವನ ಬರೀ ಜೀವನ ಅಷ್ಟೆ. ಈ ಮಾತು ಯಾಕೆ ಹೇಳುತ್ತಿದ್ದೇವೆಂದರೆ, ಕೆಲವರು ಹಲವು ಆಸೆಗಳನ್ನು ಇಟ್ಟುಕೊಂಡು, ನಮ್ಮ ಜೀವನ ಸುಂದರ ಅನ್ನುವ ಭ್ರಮೆಯಲ್ಲಿರುತ್ತಾರೆ. ಅವರಿಗೆ ವಾಸ್ತವವಾಗಿ ಜೀವನ ಬರೀ ಜೀವನ ಅನ್ನುವ ಸತ್ಯದ ಬಗ್ಗೆ ಅರಿವಿರುವುದಿಲ್ಲ. ಅದು ಒಂದಲ್ಲ ಒಂದು ದಿನ ಮುಗಿಯುತ್ತದೆ ಅನ್ನೋದು ಗೊತ್ತಿದ್ದರೂ, ಆಸೆ ಇಟ್ಟುಕೊಂಡು ಬದುಕುತ್ತೇವೆ. ಆಸೆ ಇರಲಿ ಆದ್ರೆ, ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡು ಎಂದಿಗೂ ಬದುಕಬೇಡಿ. ಬಂದಿದ್ದನ್ನು ಎದುರಿಸುತ್ತ ಹೋಗುತ್ತೇನೆಂಬ ವಿಶ್ವಾಸದಲ್ಲಿರಿ.

ಮೂರನೆಯ ಸತ್ಯ. ಸಮಯಕ್ಕಿಂತ ದುಡ್ಡು ಮುಖ್ಯವಲ್ಲ. ಹೆಚ್ಚು ದುಡ್ಡು ಕೊಟ್ಟು ನೀವು ಗಡಿಯಾರವನ್ನು ಕೊಂಡುಕೊಳ್ಳಬಹುದು. ಆದರೆ ಸಮಯವನ್ನಲ್ಲ ಅಂತಾ ಹಿರಿಯರು ಹೇಳಿದ್ದನ್ನ ನಾವು ಕೇಳಿರುತ್ತೇವೆ. ಹಾಗಾಗಿ ದುಡ್ಡು ಗಳಿಸುವ ಭರದಲ್ಲಿ ಸಮಯದ ಬೆಲೆಯನ್ನು ಮರೆಯಬೇಡಿ.

ನಾಲ್ಕನೇಯ ಸತ್ಯ. ಯಾವುದೇ ಕೆಲಸಕ್ಕೂ ಹೆಚ್ಚು ಹೊತ್ತು ವ್ಯಯಿಸಬೇಡಿ. ಯಾವುದಾದರೂ ಕೆಲಸ ಪರ್ಫೆಕ್ಟ್ ಆಗಬೇಕು. ನನ್ನಿಂದ ಇತರರು ಇಂಪ್ರೆಸ್ ಆಗಬೇಕು ಅನ್ನೋ ಗುಂಗಲ್ಲಿ, ಕೆಲಸವನ್ನು ನಿಧಾನವಾಗಿ ಮಾಡಿ, ಸಮಯ ವ್ಯರ್ಥ ಮಾಡಬೇಡಿ. ಕೆಲಸ ಮುಗಿಸಬೇಕಷ್ಟೇ, ಅದು ಅತೀ ಪರ್ಫೆಕ್ಟ್ ಇಲ್ಲದಿದ್ದರೂ, ಸರಿ ಇದ್ದರೆ ಸಾಕು ಅನ್ನೋ ಮನೋ ಭಾವವನ್ನು ಹೊಂದಿರಿ. ದೊಡ್ಡ ದೊಡ್ಡ ಉದ್ಯಮಿಗಳು ಹೀಗೆ ಯೋಚನೆ ಮಾಡುವುದು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss