ಸ್ವಪ್ನ ಶಾಸ್ತ್ರದಲ್ಲಿ ನಮಗೆ ಬೀಳುವ ಎಲ್ಲ ರೀತಿಯ ಕನಸುಗಳ ಬಗ್ಗೆ ವಿವರಣೆ ನೀಡಲಾಗದೆ. ಅದರಲ್ಲಿ ಕೆಲ ಕನಸುಗಳು ಬಿದ್ದಾಗ, ಅದನ್ನ ಇತರರ ಬಳಿ ಹೇಳಿಕೊಳ್ಳಬಾರದು ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥ ಕನಸು ಬಿದ್ದಾಗ, ನಾವು ಅದನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕೆಲವು ಕನಸುಗಳು ನಮ್ಮ ಲಕ್ ಖುಲಾಯಿಸುವ ರೀತಿ ಇರುತ್ತದೆ. ಅಂಥ ಕನಸು ಬಿದ್ದಾಗ, ನಿಮಗೆ ಧನಲಾಭವಾಗಬಹುದು. ನೀವು ಹಲವು ದಿನಗಳಿಂದ ಕೆಲಸಕ್ಕಾಗಿ ಅಲೆದಾಡುತ್ತಿದ್ದರೆ, ನಿಮಗೆ ಹೊಸ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ಹಲವು ದಿನಗಳಿಂದ ನಡೆಯಬೇಕಿದ್ದ ಕೆಲಸ ಕಾರಣಾಂತರದಿಂದ ನಿಂತಿದ್ದರೆ, ಅದು ಕೂಡ ಪರಿಪೂರ್ಣಗೊಳ್ಳುತ್ತದೆ.
ಕನಸಿನಲ್ಲಿ ಲಕ್ಷ್ಮೀದೇವಿ ಕಾಣಿಸಿಕೊಳ್ಳುವುದು. ನೀವು ಗೋವಿನ ಸಗಣಿಯಿಂದ ಬೆರಣಿ ತಟ್ಟುವುದು. ಗಜಾನನ ವಾಹನ ಇಲಿ ಕಾಣಿಸಿಕೊಳ್ಳುವುದು. ಖಾಲಿ ಪಾತ್ರೆ ಕಾಣಿಸುವುದು. ಮತ್ತು ಕನಸ್ಸಿನಲ್ಲಿ ಕಸಬರಿಗೆ ಕಾಣಿಸುವುದೆಲ್ಲ, ನಿಮಗೆ ಅದೃಷ್ಟ ಒಲಿಯಲಿದೆ ಎಂಬುದರ ಸಂಕೇತವಾಗಿದೆ. ಆದ್ರೆ ನಿಮಗೆ ಹೀಗೆ ಕನಸ್ಸು ಬಿದ್ದಿತ್ತು ಅನ್ನುವ ವಿಚಾರವನ್ನ ನೀವು ಯಾರಲ್ಲಿಯೂ ಹೇಳಬಾರದು. ಬದಲಾಗಿ, ಬೇಗ ಎದ್ದು, ಸ್ನಾನ ಮಾಡಿ, ಪೂಜೆ ಮಾಡಿ. ನಿಮ್ಮ ಕೆಲಸಗಳ ಬಗ್ಗೆ ಗಮನ ಕೊಡಿ.
ಯಾಕಂದ್ರೆ ನೀವು ನನಗೆ ಇವತ್ತು ಕನಸ್ಸಿನಲ್ಲಿ ಲಕ್ಷ್ಮೀ ಕಾಣಿಸಿಕೊಂಡಳು, ಕಸಬರಿಗೆ ಕಾಣಿಸಿತ್ತು, ಇಲಿ ಬಂದಿತ್ತು ಇತ್ಯಾದಿ ಹೇಳಿದ್ರಿ ಅಂದ್ರೆ, ನಿಮಗೆ ಅದೃಷ್ಟ ಸಂಪೂರ್ಣವಾಗಿ ಒಲಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ನೀವು ಯಾರ ಬಳಿಯೂ ನಿಮಗೆ ಬಿದ್ದ ಕನಸಿನ ಬಗ್ಗೆ ಹೇಳಬಾರದು.