Thursday, June 19, 2025

Latest Posts

ಮಂಗಳಮುಖಿಯರ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು..

- Advertisement -

Spiritual: ಈ ಪ್ರಪಂಚದಲ್ಲಿ ಪುರುಷ ಮತ್ತು ಮಹಿಳೆಯ ಜೊತೆ ನಪುಂಸಕರು ಇದ್ದಾರೆ. ಅವರನ್ನು ನಾವು ಮಂಗಳಮುಖಿಯರು ಎಂದು ಕರೆಯುತ್ತೇವೆ. ಹೆಣ್ಣು ಗರ್ಭಿಣಿಯಾಗಿದ್ದಾಗ, 3 ತಿಂಗಳ ಬಳಿಕ, ಮಗುವಿನ ಬೆಳವಣಿಗೆ ಆಗುತ್ತದೆ. ಈ ವೇಳೆ ಹೆಣ್ಣು ಸರಿಯಾದ ಕಾಳಜಿ ವಹಿಸಲೇಬೇಕು. ಹಾಗೆ ಕಾಳಜಿ ವಹಿಸದೇ, ಕೆಮ್ಮು, ಜ್ವರ, ಅಪಘಾತದಂಥ ಸಮಸ್ಯೆ ಮಾಡಿಕೊಂಡಾಗ, ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಅದರ ಜನನಾಂಗದ ಬೆಳವಣಿಗೆ ಕೂಡ ಕುಂಠಿತವಾಗುತ್ತದೆ. ಆಗಲೇ ನಪುಂಸಕ ಮಕ್ಕಳು ಜನಿಸುವುದು.

ಮಂಗಳಮುಖಿಯರ ಬಗ್ಗೆ ನಾವಿಂದು 5 ವಿಷಯಗಳನ್ನ ಹೇಳಲಿದ್ದೇವೆ. ಈ 5 ವಿಷಯಗಳು ಕುತೂಹಲಕಾರಿಯಾಗಿದ್ದು, ಸಾಮಾನ್ಯ ಜನ ಮಾಡದ ಕೆಲಸ, ಪದ್ಧತಿಗಳನ್ನು ಇವರು ಅನುಸರಿಸುತ್ತಾರೆ. ಹಾಗಾದರೆ ಅದು ಯಾವ ಪದ್ಧತಿ, ಮಂಗಳಮುಖಿಯರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ..

ಮಂಗಳಮುಖಿಯರಿಗೆ ವಿವಾಹವಾಗುವುದಿಲ್ಲವೆಂದು ನೀವು ತಿಳಿದುಕೊಂಡಿರಬಹುದು. ಆದರೆ ಮಂಗಳಮುಖಿಯರಿಗೂ ಮದುವೆಯಾಗುತ್ತದೆ. ಇವರು ತಮಿಳುನಾಡಿನ ದೇವಸ್ಥಾನವೊಂದರಲ್ಲಿ ವಿವಾಹವಾಗುತ್ತಾರೆ. ವಿಚಿತ್ರವೆಂದರೆ, ಮದುವೆಯಾದ ದಿನ ರಾತ್ರಿಯೇ ಇವರು ವಿಧವೆಯರಾಗುತ್ತಾರೆ. ಅರ್ಜುನ ಮತ್ತು ನಾಗಕನ್ಯೆ ಉಲೂಪಿಯ ಪುತ್ರನಾದ ಅರಾವಣ ಮಂಗಳಮುಖಿಯರ ಆರಾಧ್ಯ ದೈವ. ಇವರ ಮುಂದೆಯೇ ಮಂಗಳಮುಖಿಯರು ಮದುವೆಯಾಗುವುದು. ಬಳಿಕ ಸಂಜೆ ಹೊತ್ತಿಗೆ ಅರಾವಣನ ಮೆರವಣಿಗೆ ಮಾಡಿ, ಅರಾವಣನ ಮೂರ್ತಿಯನ್ನು ಮುರಿದು ಹಾಕಲಾಗುತ್ತದೆ. ಬಳಿಕ ಮಂಗಳಮುಖಿಯರ ಮಂಗಳಸೂತ್ರವನ್ನು ಹರಿದು, ಶೃಂಗಾರವನ್ನು ತೆಗೆದು ಅವರು ವಿಧವೆಯರಂತೆ ಬಿಳಿ ಸೀರೆ ಉಟ್ಟು, ದುಃಖ ಪಡುತ್ತಾರೆ.

ಮಂಗಳಮುಖಿಯರಿಗೆ ತಮ್ಮ ಸಾವಿನ ಸೂಚನೆ ಮೊದಲೇ ಸಿಗುತ್ತದೆ. ಹಾಗಾಗಿ ಅವರು ಊಟ, ತಿಂಡಿ, ನೀರು ಬಿಟ್ಟು ಉಪವಾಸ ಮಾಡುತ್ತ, ದೇವರ ಮೊರೆ ಹೋಗುತ್ತಾರೆ. ಮತ್ತು ದೇವರಲ್ಲಿ ಈ ಜನ್ಮದಲ್ಲಿ ಕೊಟ್ಟ ಶಿಕ್ಷೆಯನ್ನು ಮುಂದೆ ಯಾವ ಜನ್ಮದಲ್ಲಿಯೂ ಕೊಡಬೇಡ. ನಪುಂಸಕ ಜನ್ಮ ಇಲ್ಲಿಗೆ ಮುಕ್ತಾಯವಾಗಲಿ ಎಂದು ಬೇಡಿಕೊಳ್ಳುತ್ತಾರೆ.

ಇನ್ನು ಮಂಗಳಮುಖಿಯರು ತೀರಿಹೋದಾಗ, ಅವರ ಮೈಮೇಲೆ ಬಿಳಿ ಬಟ್ಟೆ ಹೊದೆಯಲಾಗುತ್ತದೆ. ಆದರೆ ಅದರ ಮೇಲೆ ಹೂವು ಹಾಕುವ ಹಾಗಿಲ್ಲ. ಯಾವ ವಸ್ತು ಕೂಡ ಅದರ ಮೇಲೆ ಇರುವುದಿಲ್ಲ. ಆ ದೇಹದ ಮೇಲೆ ಬರೀ ಬಿಳಿ ಬಟ್ಟೆಯಷ್ಟೇ ಇರುತ್ತದೆ. ಬಳಿಕ ಆ ಜೀವದ ಆತ್ಮಕ್ಕೆ ಶಾಂತಿ ಸಿಗುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇನ್ನು ಮಂಗಳಮುಖಿ ಮೃತ್ಯುವಾದರೆ, ಅವರ ಸಖಿಯರೆಲ್ಲ ಅಳುವುದಿಲ್ಲ. ಬದಲಾಗಿ ಸಂಭ್ರಮಿಸುತ್ತಾರೆ. ಈ ಜನ್ಮದಿಂದ ಮುಕ್ತಿ ಹೊಂದಿ, ಮುಂದಿನ ಜನ್ಮದಲ್ಲಿ ಪುರುಷ ಅಥವಾ ಮಹಿಳೆಯಾಗಿ ಜನಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ದಾನ ಧರ್ಮ ಮಾಡುತ್ತಾರೆ.

ಇನ್ನು ಮಂಗಳಮುಖಿಯ ಶವ ಸಂಸ್ಕಾರವನ್ನು ಯಾರೂ ಕಾಣದ ಜಾಗದಲ್ಲಿ, ರಾತ್ರಿ ಹೊತ್ತು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಸೂರ್ಯಾಸ್ತಕ್ಕೂ ಮುನ್ನವೇ ಶವಸಂಸ್ಕಾರ ಕಾರ್ಯ ಮುಗಿದಿರಬೇಕು. ಆದರೆ, ಮಂಗಳಮುಖಿಯರು ರಾತ್ರಿ ಹೊತ್ತು ಶವಸಂಸ್ಕಾರ ಮಾಡುತ್ತಾರೆ. ಏಕೆಂದರೆ, ಮಂಗಳಮುಖಿಯರ ಶವಸಂಸ್ಕಾರವನ್ನು ಯಾರು ನೋಡುತ್ತಾರೋ, ಅವರು ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತ್ತಾರೆಂಬ ನಂಬಿಕೆ ಇದೆ. ಹಾಗಾಗಿ ತಮಗೆ ಬಂದ ಗತಿ ಯಾರಿಗೂ ಬರುವುದು ಬೇಡವೆಂದು ಮಂಗಳಮುಖಿಯರ ಶವಸಂಸ್ಕಾರ ರಾತ್ರಿ ಮಾಡಲಾಗುತ್ತದೆ.

ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 1

ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು?..

ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 2

- Advertisement -

Latest Posts

Don't Miss