Tuesday, April 16, 2024

Latest Posts

ಫಲ ನೀಡಿದ ಅನ್ನದಾತರ ಹೋರಾಟ- ನಾಳೆಯಿಂದ ರೈತರ ಬೆಳೆಗೆ ಕೆಆರ್ ಎಸ್ ನೀರು..!

- Advertisement -

ಮಂಡ್ಯ: ತಮ್ಮ ಬೆಳೆಗಳಿಗೆ ನೀರು ಹರಿಸಿ ಅಂತ ಅಹೋರಾತ್ರಿ ರೈತರು ನಡೆಸಿದ್ದ ಹೋರಾಟಕ್ಕೆ ಫಲ ಸಿಕ್ಕಿದ್ದು, ನಾಳೆಯಿಂದ ರೈತರ ಬೆಳೆಗೆ ಕೆಆರ್ ಎಸ್ ನೀರು ಹರಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು ನಾವು ಸಂಕಷ್ಟದಲ್ಲಿದ್ದೇವೆ. ಹೀಗಾಗಿ ಕೆಆರ್ ಎಸ್ ನಿಂದ ಜಮೀನುಗಳಿಗೆ ನೀರು ಬಿಡಿ ಅಂತ ಒತ್ತಾಯಿಸಿ ರೈತರು ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಡ್ಯಾಂ ನಿಂದ ರೈತರ ಬೆಳೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ನಿರ್ಧಾರ ಮಾಡಿದ್ದು, ನಾಳೆ ಮಧ್ಯರಾತ್ರಿಯಿಂದ ರೈತರ ಬೆಳೆಗಳಿಗೆ ನೀರು ಹರಿಸುವಂತೆ ತೀರ್ಮಾನಿಸಲಾಗಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನಾಲೆಗಳ ಮೂಲಕ ರೈತರ ಬೆಳೆಗಳಿಗೆ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಗಿದ್ದು, ರೈತರ ನಿರಂತರ ಹೋರಾಟಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ಇದು ಸಹಜವಾಗಿಯೇ ಮಂಡ್ಯ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ರನ್ನು ಭೇಟಿ ಮಾಡಿ ಕೆಆರ್ಎಸ್ ನಿಂದ ರೈತರ ಬೆಳೆಹೆ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದ ಸಂಸದೆ ಸುಮಲತಾ

ಇನ್ನು ಕೆಆರ್ ಎಸ್ ನಿಂದ ರೈತರ ಬೆಳೆಗೆ ನೀರು ಹರಿಸಿ ಅಂತ ಕೇಂದ್ರ ಸಚಿವರಿಗೆ ಮಂಡ್ಯ ಸಂಸದೆ ಸುಮಲತಾ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದರು.

ನಿಮ್ಮ ಬಳಿ ವಾಹನ ಇದ್ರೆ ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=hDRhiUfXvnA
- Advertisement -

Latest Posts

Don't Miss