ಎರಡನೇಯ ಸ್ವಯಂವರ ಲಕ್ಷ್ಮಣಾಳ ಸ್ವಯಂವರ : ಬ್ರಹಸೇನ ರಾಜನ ಮಗಳೇ ಲಕ್ಷ್ಮಣಾ. ಈಕೆ ಶ್ರೀಕೃಷ್ಣನ ಭಕ್ತೆಯಾಗಿದ್ದಳು. ಅಲ್ಲದೇ, ಅವನನ್ನೇ ವರಿಸಲು ಇಚ್ಛಿಸಿದ್ದಳು. ಹಾಗಾಗಿ ತನ್ನ ಪುತ್ರಿಯ ಆಸೆಯಂತೆ ಆಕೆಗೆ ಶ್ರೀಕೃಷ್ಣ ಸಿಗಲೆಂದು, ದ್ರೌಪದಿಯ ಸ್ವಯಂವರ ಆದಂತೆ, ತನ್ನ ಮಗಳ ಸ್ವಯಂವರ ಆಗಬೇಕೆಂದು ನಿರ್ಧರಿಸಿದ. ಅತೀ ಎತ್ತರದಲ್ಲಿ ಮೀನನ್ನಿರಿಸಿ. ಅದರ ಚಿತ್ರ ಕೆಳಗಿರುವ ಕನ್ನಡಿಯಲ್ಲಿ ಕಾಣುವಂತೆ ಮಾಡಿ, ಮೀನನ್ನು ನೋಡದೇ, ಮೀನಿಗೆ ಬಾಣ ಬಿಡುವಂತೆ ಸ್ಪರ್ಧೆ ಏರ್ಪಡಿಸಿದ.
ಎಷ್ಟೋ ಜನ, ಈ ಕಠಿಣ ಸ್ಪರ್ಧೆಯಲ್ಲಿ ಗೆಲ್ಲಲಾಗದೇ, ಲಕ್ಷ್ಮಣಾಳನ್ನು ಪಡೆಯುವ ಆಸೆಯನ್ನೇ ಬಿಟ್ಟರು. ಆದರೆ ಶ್ರೀಕೃಷ್ಣ ಬಂದು ಬಾಣವನ್ನು ಸುಲಭವಾಗಿ ಎತ್ತಿ ಹಿಡಿದು, ಮೀನನ್ನು ನೋಡದೇ, ಮೀನಿಗೆ ಬಾಣ ಬಿಟ್ಟು ಸ್ಪರ್ಧೆಯಲ್ಲಿ ವಿಜೇತನಾದ. ನಂತರ ಲಕ್ಷ್ಮಣಾಳನ್ನು ವರಿಸಿದ.
ಮೂರನೇಯ ಸ್ವಯಂವರ: ದ್ರೌಪದಿ ಸ್ವಯಂವರ. ದ್ರುಪದ ರಾಜ ದ್ರೌಪದಿಯ ಸ್ವಯಂವರ ರಚಿಸಿದ್ದ. ಇದು ಕೂಡ ಮೀನಿಗೆ ಬಾಣ ಬಿಡುವ ಸ್ವಯಂವರವಾಗಿತ್ತು. ಮೇಲೆ ತಿರುಗುತ್ತಿರುವ ಮೀನನ್ನು ನೋಡದೇ, ಕೆಳಗಿರುವ ನೀರಿನಲ್ಲಿ ಆ ಮೀನನ್ನು ನೋಡುತ್ತ, ಅದರ ಕಣ್ಣಿಗೆ ಬಾಣ ಬಿಡಬೇಕು. ಕೌರವರು ಪಾಂಡವರೆಲ್ಲರೂ ಈ ಸ್ವಯಂವರದಲ್ಲಿ ಪಾಲ್ಗೊಂಡು, ಸ್ಪರ್ಧೆಯಲ್ಲಿ ಭಾಗವಹಿಸಿದರು. ಆದರೂ ಅವರ್ಯಾರಿಗೂ ಇಷ್ಟು ಕಠಿಣವಾದ ಸ್ಪರ್ಧೆಯಲ್ಲಿ ಗೆಲ್ಲಲಾಗಲಿಲ್ಲ. ಆದರೆ ಮಹಾ ಧನುರ್ಧಾರಿ ಅರ್ಜುನ ಈ ಸ್ಪರ್ಧೆಯಲ್ಲಿ ಗೆದ್ದು, ದ್ರೌಪದಿಯನ್ನು ವಿವಾಹವಾದ. ಆದರೆ ಕುಂತಿಯ ಮಾತಿನಿಂದಾಗಿ, ದ್ರೌಪದಿ ಪಾಂಡವರೊಂದಿಗೆ ಜೀವನ ಮಾಡಬೇಕಾಯಿತು.
ನಾಲ್ಕನೇಯ ಸ್ವಯಂವರ: ಸೀತಾ ಸ್ವಯಂವರ. ಸೀತಾ ಸ್ವಯಂವರದ ಬಗ್ಗೆ ಹಲವರಿಗೆ ಗೊತ್ತು. ಶ್ರೀರಾಮ ಧನುಷನ್ನು ಮುರಿದು ಹಾಕಿ, ಸೀತೆಯನ್ನು ವಿವಾಹವಾದ. ಮಿಥಿಲೆಯಲ್ಲಿ ಜನಕರಾಜ ಸೀತೆಯ ಸ್ವಯಂವರ ಸಿದ್ಧಪಡಿಸಿದ್ದ. ಈ ವೇಳೆ ಶಿವಧನಸ್ಸನ್ನ ಮುರಿಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಅತ್ಯುತ್ತಮ ರಾಜರುಗಳೆಲ್ಲ ಬಂದು ಶಿವ ಧನಸ್ಸನ್ನು ಮುರಿಯುವುದು ದೂರದ ಮಾತು. ಅದನ್ನು ಎತ್ತಲೂ ಅವರಿಂದ ಸಾಧ್ಯವಾಗಿರಲಿಲ್ಲ. ಆಗ ಜನಕ ರಾಜನಿಗೆ ಬೇಸರವಾಯಿತು. ಈ ವೇಳೆ ಶ್ರೀರಾಮ ಬಂದು, ಸುಲಭವಾಗಿ ಧನಸ್ಸನ್ನು ಎತ್ತಿ, ಅದನ್ನು ಮುರಿದು ಹಾಕಿದ. ಈ ರೀತಿ ಸೀತೆಯನ್ನು ಶ್ರೀರಾಮ ವಿವಾಹವಾದ.
ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?