ಜು.7ಕ್ಕೆ ‘ಕುರುಕ್ಷೇತ್ರ’ ಆಡಿಯೋ ಲಾಂಚ್

ಜುಲೈ 7ರಂದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ತ್ರಿಡಿ ಸಿನಿಮಾ ಕುರುಕ್ಷೇತ್ರ ಆಡಿಯೋ ಲಾಂಚ್ ಆಗಲಿದೆ. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ದರ್ಶನ್ ದುರ್ಯೋಧನನಾಗಿ ಬಣ್ಣ ‌ಹಚ್ಚಿದ್ರೆ, ಕೃಷ್ಣನಾಗಿ ರವಿಚಂದ್ರನ್, ಭೀಷ್ಮನಾಗಿ ಅಂಬರೀಶ್, ಕರ್ಣನಾಗಿ ಅರ್ಜುನ್ ಸರ್ಜಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ನಾಲ್ಕು ಹಾಡುಗಳು ಸೇರಿದಂತೆ ಶ್ಲೋಕಗಳು ಕಂದ ಪದ್ಯಗಳು ಚಿತ್ರದಲ್ಲಿವೆ. ನಿರ್ಮಾಪಕ‌ ಮುನಿರತ್ನ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರವನ್ನ ತೆರೆಗೆ ತರೋ ಪ್ರಯತ್ನ ಮಾಡ್ತಿದ್ದಾರೆ.

ನಟ ಯಶ್ ಮನೆಗೆ ಶೀಘ್ರವೇ ಮತ್ತೊಂದು ಪುಟ್ಟ ಅತಿಥಿ ಆಗಮನ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=KrrbN4qOn7w

About The Author