Tuesday, June 3, 2025

Latest Posts

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

- Advertisement -

Chanakya Neeti: ಚಾಣಕ್ಯರು ಮನುಷ್ಯ ಬದುಕಬೇಕಾದ ರೀತಿಯ ಬಗ್ಗೆ ಹೇಳಿದ್ದಾರೆ. ಅವನು ಗೌರವದಿಂದ ಇರಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಿದ್ದಾರೆ. ಅಲ್ಲದೇ ಹೆಣ್ಣನ್ನ ಅಥವಾ ಗಂಡನಾಗುವವನನ್ನ ಸೆಲೆಕ್ಟ್ ಮಾಡುವಾಗ, ಅವನಲ್ಲಿ ಅಥವಾ ಅವಳಲ್ಲಿ ಎಂಥೆಂಥ ಗುಣಗಳನ್ನ ನೋಡಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಮನುಷ್ಯ ಶ್ರೀಮಂತನಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

  1. ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡುವವರಿಗೆ ಸದಾ ದುಡ್ಡಿನ ಸಮಸ್ಯೆ ಇರುತ್ತದೆ. ಹಾಗಾಗಿ ದುಡ್ಡು ಖರ್ಚು ಮಾಡುವಾಗ ಯೋಚಿಸಿ, ಹಣ ಖರ್ಚು ಮಾಡಬೇಕು. ಅವಶ್ಯಕತೆ ಇರುವ ವಸ್ತು ಕೊಂಡುಕೊಳ್ಳಲು ಮಾತ್ರ ದುಡ್ಡು ಖರ್ಚು ಮಾಡಿ. ದುಡ್ಡಿದೆ ಎಂದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದ್ದಲ್ಲಿ, ಭವಿಷ್ಯದಲ್ಲಿ ಸಾಲ ಮಾಡುವ ಸಂದರ್ಭ ಬರುತ್ತದೆ.
  2. ಮನುಷ್ಯ ದುಡ್ಡಿನ ವಿಷಯದಲ್ಲಿ ಸದಾ ಚುರುಕಾಗಿರಬೇಕು. ನಿಮ್ಮ ಬಳಿ ರಾಶಿ ರಾಶಿ ಸಂಪತ್ತಿದೆಯೆಂದು ಬೇಕಾದ ಹಾಗೆ ಅದನ್ನು ವ್ಯಯಿಸಬಾರದು. ಕೆಲ ವರ್ಷದ ಹಿಂದೆ 10 ಸಾವಿರ ಕೋಟಿ ರೂಪಾಯಿ ಕಂಪನಿ ನಡೆಸುತ್ತಿದ್ದ ಉದ್ಯಮಿ, ಕೊನೆಗೆ ಬಾಡಿಗೆ ಮನೆಯಲ್ಲಿರುವ ಪರಿಸ್ಥಿತಿ ಬರುತ್ತದೆ. ಏಕೆಂದರೆ, ಅವರು ತಮ್ಮ ಮಗನ ಮೇಲೆ ನಂಬಿಕೆ ಇಟ್ಟು, ತನ್ನೆಲ್ಲ ಆಸ್ತಿಯನ್ನು ಅವನ ಹೆಸರಿಗೆ ಬರೆದಿದ್ದರು. ಆದರೆ ಅವನು ಅವರನ್ನೇ ಮನೆಯಿಂದ ಹೊರಗೆಹಾಕಿದ್ದ. ಆದ್ದರಿಂದ ನಿಮ್ಮ ಸಂಪತ್ತಿನ ಮೇಲೆ ನಿಮಗೆ ಗಮನವಿರಬೇಕು ಎನ್ನುತ್ತಾರೆ ಚಾಣಕ್ಯರು.
  3. ಚಾಣಕ್ಯರ ಮೂರನೇಯ ನಿಯಮ ಹೇಳುವುದೇನೆಂದರೆ, ಯಾವಾಗಲೂ ಹಣವನ್ನು ಕೂಡಿಡುವುದನ್ನು ಕಲಿಯಿರಿ. ನಿಮಗೆ ಯಾವುದೇ ಕಷ್ಟ ಬಂದರೂ, ಅದಕ್ಕೆ ಬೇಕಾಗಿರುವುದು ಹಣವೇ ಆಗಿರುತ್ತದೆ. ಶ್ರೀಮಂತಿಕೆ ನೆಮ್ಮದಿ ತಂದುಕೊಡುವುದಿಲ್ಲವೆಂಬ ಮಾತಿದೆ. ಆದರೆ ಅದೇ ಹಣ ನೆಮ್ಮದಿ ಹಾಳಾಗಲೂ ಕೂಡ ಕಾರಣವಾಗುತ್ತದೆ. ಹಾಗಾಗಿ ಹಣ ಉಳಿಸುವುದನ್ನು ಕಲಿಯಿರಿ.

ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?

ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..

ಕೇರಳ ಸ್ಟೈಲ್ ಅವಿಲ್ ರೆಸಿಪಿ..

- Advertisement -

Latest Posts

Don't Miss