Saturday, July 27, 2024

Latest Posts

ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್‌

- Advertisement -

Hubli Political News: ಹುಬ್ಬಳ್ಳಿ: ಬಿಜೆಪಿಯವರು ಮಿಡಿಯಾದಿಂದಲೇ ಪ್ರಾಪ್ಯೂಲರ್ ಆಗಿದ್ದಾರೆ. ಮಿಡಿಯಾಯಿಂದಲೇ ಅವರ ಪ್ರಾಪ್ಯೂಲರಿಟಿ ಹೋಗುತ್ತೆ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಮೊದಲು ಟಿವಿ ಬಂದು ಮಾಡ್ಲಿ. ಎರಡನೆಯದ್ದು ಮೋದಿಯವರು ಪ್ರಚಾರಕ್ಕೆ ಬರೋದು ಬೇಡ, ನಾವು ಸಹ ಪ್ರಚಾರ ಮಾಡೋದನ್ನ ನಿಲ್ಲಿಸಿ ಬಿಡ್ತೇವಿ. ಯಾರಿಗೆ ಮತ ಹಾಕಬೇಕೆಂದು ಜನರೇ ಡಿಸೈಡ್ ಮಾಡ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ, ಸಚಿವ ಸಂತೋಷ್ ಲಾಡ್‌ ಸವಾಲ್ ಹಾಕಿದ್ದಾರೆ.

ಈ ಬಾರಿಗೆ ಬಿಜೆಪಿ ಭದ್ರಕೋಟೆಯನ್ನ ಜನರೇ ಮಾಡ್ತಾರೆ. ಬಿಜೆಪಿ ಸರ್ಕಾರ, ಮೋದಿ ಸಾಹೇಬರ ಸುಳ್ಳಿನಿಂದ ಜನ ಬೇಸತ್ತು ಹೋಗಿದ್ದಾರೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ, ಯುವಕರಿಗೆ ಅನುಕೂಲ ಆಗುವಂತಹ ಒಂದೇ ಒಂದು ಕಾರ್ಯಕ್ರಮವನ್ನ ಮೋದಿ ಸರ್ಕಾರ ಕೊಟ್ಟಿಲ್ಲ‌. ಜೋಶಿಯವರಾಗಲಿ, ಬಿಜೆಪಿ ಮುಖಂಡರಾಗಲಿ ಏನೂ ಮಾಡಿದ್ದೇವೆ ಎಂದು ಒಂದನ್ನ ಹೇಳುವುದಿಲ್ಲ.

ಜನರಿಗೆ ಅನುಕೂಲ ಆಗುವಂತಹ ಒಂದೇ ಒಂದು ಕೆಲಸ ಮಾಡಿಲ್ಲ, ಇದು ನಮಗೆ ಚುನಾವಣೆಯಲ್ಲಿ ಶಸ್ತ್ರ ಆಗಿದೆ. ಗ್ಯಾರಂಟಿಗಳನ್ನ ಕೊಟ್ಟು ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ಮೋದಿಯವರು ಅಭಿವೃದ್ಧಿ ಮಾಡಿದ್ದರೆ ಪ್ರಚಾರ ಏಕೆ ಬೇಕು..? ಪ್ರಹ್ಲಾದ ಜೋಶಿಯವರು ಕೆಲಸ ‌ಮಾಡಿದ್ದೇವೆಂದು ಮನೆ ಮನೆಗೆ ಇವತ್ತು ಬುಕ್ ಏಕೆ ಕಳಿಸುತ್ತಿದ್ದಾರೆ. 100 ಸ್ಥಳ ಇದ್ದರೆ, 90 ಜಾಗದಲ್ಲಿ ಮೋದಿ ಏಕೆ ಭಾಷಣ ಮಾಡಬೇಕು, ಇಷ್ಟೊಂದು ಎಪರ್ಟ್ ಯಾಕ ಆಕಬೇಕು. ಗ್ರಾಮ ಪಂಚಾಯತಿಯಿಂದ ಹಿಡಿದು ಪ್ರತಿಯೊಂದು ಚುನಾವಣೆಯಲ್ಲಿ ಮೋದಿ ಭಾವಚಿತ್ರ ಬೇಕು. ಇತಿಹಾಸ ಇರುವಂತಹ ಪಕ್ಷದಲ್ಲಿ ಮೋದಿಯವರನ್ನ ಬಿಟ್ಟು ಬೇರೆ ಒಬ್ಬ ಸ್ಪೀಕರ್ ಸಿಗುತ್ತಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಮೋದಿಯವರೇ ನೀವು ಅಷ್ಟೇನಾದ್ರೂ ಕೆಲಸ ಮಾಡಿದ್ದರೆ TV ಆಫ್ ಮಾಡಿ ಬಿಡಿ. ಬಿಜೆಪಿಯವರು ಟವಿ ಬಂದ್ ಮಾಡಿದ್ರೆ, ನಾವು ಪ್ರಚಾರವನ್ನೇ ನಿಲ್ಲಿಸಿ ಬಿಡುತ್ತೇವೆಂದ ಲಾಡ್. ನಮ್ಮ ಅಭ್ಯರ್ಥಿ ಧಾರವಾಡ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ‌ಗೆ ಬೆಂಬಲ ಸಿಗುತ್ತಿದೆ. ನಾವೆಲ್ಲರೂ ವಿನೋದ ಅಸೂಟಿ‌ ಪರ ಕೆಲಸ ಮಾಡುತ್ತಿದ್ದೇವೆ. ಜನರಲ್ಲಿ ಗೊಂದಲ ಬೇಡ ವಿನೋದ ಅಸೂಟಿ‌ ನಮ್ಮ ಕ್ಯಾಂಡಿಡೇಟ್, ಅವರನ್ನ ಗೆಲ್ಲಿಸಿಕೊಂಡು ಬರ್ತೆವಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ

- Advertisement -

Latest Posts

Don't Miss