Sunday, June 1, 2025

Latest Posts

ಪೌರ ಕಾರ್ಮಿಕನಿಂದ ಧ್ವಜಾರೋಹಣ ಮಾಡಿಸಿದ ಹಿರಿಯ ನಟ ಮಂಡ್ಯ ರಮೇಶ್…

- Advertisement -

ದೇಶಾದ್ಯಂತ ಇಂದು 72ನೇ ಗಣರಾಜ್ಯೋತ್ಸವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ  ಅಪ್ರತಿಮ ವೀರರನ್ನು ಸ್ಮರಿಸಿ ಧ್ವಜಾ ರೋಹಣವನ್ನು ಮಾಡಲಾಯಿತು. ಅದರಂತೆ ಸ್ಯಾಂಡಲ್ ವುಡ್ ಹಿರಿಯ ನಟ, ಮಜಾ ಟಾಕೀಸ್ ನ ಮುದ್ದೇಶ ಖ್ಯಾತಿಯ ಮಂಡ್ಯ ರಮೇಶ್ ವಿಶೇಷವಾಗಿ ಗಣರಾಜ್ಯೋತ್ಸವನ್ನು ಆಚರಿಸಿದ್ದಾರೆ. ಅದರಲ್ಲಿ ಏನಿದೆ ವಿಶೇಷ ಅಂತೀರಾ..? ಖಂಡಿತ ಇದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕನೊಬ್ಬರಿಗೆ ಧ್ವಜಾರೋಹಣ ಮಾಡಿ ಅವರಿಗೆ ಗೌರವ ನೀಡಿದ್ದಾರೆ. ಈ ಫೋಟೋವನ್ನು ಮಂಡ್ಯ ರಮೇಶ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ರಮೇಶ್, ಇವತ್ತು ‘ನಟನ’ದ ಗಣರಾಜ್ಯೋತ್ಸವ ತುಂಬಾ ಸಂತೋಷಕೊಟ್ಟಿದ್ದು. ನಮ್ಮ ವಾರ್ಡಿನ ಪೌರಕಾರ್ಮಿಕ ಮಣಿ ಬಂದು ಧ್ವಜಾರೋಹಣ ಮಾಡಿದ ಕಾರಣಕ್ಕೆ! ಸುಮಾರು ಸರ್ತಿ ಕರೆದಾಗಲೂ ಅದೇ ಹೊತ್ತಿನಲ್ಲಿ, ರಸ್ತೆಯ ಯಾವುದೋ ಮೂಲೆಯಲ್ಲಿ, ಕೆಲಸದಲ್ಲಿ ನಿರತನಾಗಿರುತ್ತಿದ್ದ ಭಾಗವಹಿಸಲಾಗುತ್ತಿರಲಿಲ್ಲ. ಇವತ್ತೂ ಕೂಡ ಕೆಲಸದ ಮಧ್ಯದಲ್ಲಿ ಬಂದು ಧ್ವಜಾರೋಹಣ ಮಾಡಿಕೊಟ್ಟ. ‘ನಟನ’ದ ವಿದ್ಯಾರ್ಥಿಗಳು, ನಟನ ದ ಅಧ್ಯಕ್ಷರಾದ ಶ್ರೀ ಆನಂದ್ ಬಾಬು, ಹಿತೈಷಿಗಳಾದ ಹರೀಶ್ ಮತ್ತು ಪೂಜಾ ರಾಮನ್ ಐ. ಟಿ.ಯವರು, ಮಕ್ಕಳು, ಎಲ್ಲರೂ ನಮ್ಮ ಈ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸಪಟ್ಟರು.

ವಿದ್ಯಾರ್ಥಿಯೊಬ್ಬ ಕೇಳಿದ “ಯಾಕ್ಸಾರ್, ನೀವಿವತ್ತು ಹಸಿರು ಟವಲ್ ಹಾಕಿದ್ದೀರಿ?” ನಾನಂದೆ “ನಾನೂ ರೈತನಪ್ಪ, ರಂಗರೈತ! ಆದರೆ ಕೋಟ್ಯಂತರ ಅನ್ನ ಕೊಡುವ ರೈತರು ರಸ್ತೆಯಲ್ಲಿದ್ದಾರೆ, ಟ್ರ್ಯಾಕ್ಟರ್ ಗಳಲ್ಲಿದ್ದಾರೆ. ಅವರಿಗೆ ವಿಶ್ವಾಸ, ನಂಬಿಕೆಯ ದ್ಯೋತಕವಾಗಿ ಇದನ್ನು ಹೆಗಲ ಮೇಲಿರಿಸಿದ್ದೇನೆ”! ಅಂದೆ. ಈ ಭೂಮಿ ನಮ್ಮದು, ಈ ಭಾರತ ನಮ್ಮದು, ಈ ಕನ್ನಡ ನಮ್ಮದು, ಈ ರಂಗಭೂಮಿ – ಸಂಸ್ಕೃತಿ ಎಲ್ಲವೂ ನಮ್ಮದು. ಈ ಹೋರಾಟವು ನಮ್ಮದು!

‘ಅವರಿಗೆ ಒಳಿತಾದರೆ ಮಾತ್ರ ನಮ್ಮ ಉಳಿವು ಎಂದು ಬರೆದುಕೊಂಡಿದ್ದಾರೆ.

- Advertisement -

Latest Posts

Don't Miss