Saturday, July 27, 2024

Latest Posts

ಮೋದಿ‌ ಸ್ವರ್ಗ ತೋರಿಸುತ್ತೇನೆ ಎಂದು ನರಕ ತೋರಿಸಿದ್ದಾರೆ: ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್

- Advertisement -

Dharwad News: ಧಾರವಾಡ : ಇಂದು ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್ ಕೂಡ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಲೀಂ ಅಹ್ಮದ್, ಕ್ಷೇತ್ರದಲ್ಲಿ ವಿನೋದ ಅಸೂಟಿ ಹೆಚ್ಚಿನ ಮತಗಳಿಂದ ಜಯ ಸಾಧಿಸುತ್ತಾರೆ. ಬಿಜೆಪಿ ಅವರು ಮತ ಕೇಳುವ ನೈತಿಕತೆಯ ಕಳೆದುಕೊಂಡಿದ್ದಾರೆ. ಸುಳ್ಳು ಹೇಳಿ ಅಧಿಕಾರಕ್ಕೆ‌ ಬರುತ್ತಾರೆ, ಬೆಲೆ ಏರಿಕೆ ,ರೈತರ ಪರವಾಗಿ ಕೆಲಸ ಮಾಡಲಿಲ್ಲ. ಮೋದಿ‌ ಸ್ವರ್ಗ ತೋರಿಸುತ್ತೆನೆ ಎಂದು ನರಕ ತೋರಿಸಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಗ‌್ಯಾರಂಟಿ ಕೈ ಹಿಡಿಯುತ್ತೆ ಎಂದು ಸಲೀಂ ಅಹಮದ್ ಹೇಳಿದ್ದಾರೆ.

ರಾಜ್ಯದಲ್ಲಿ 25 ಸಂಸದರು ಇದ್ದರು, ರಾಜ್ಯಕ್ಕೆ‌ ಬರುವ ಹಣವನ್ನ ತರಲು ಆಗಲಿಲ್ಲ. 18,000 ಕೋಟಿ ಬಿಡುಗಡೆ ಮಾಡಲಿಲ್ಲ ಕೇಂದ್ರದಿಂದ. ಮಲತಾಯಿ ಧೋರಣೆ ತೋರಿದೆ ಬಿಜೆಪಿ. ಮಹದಾಯಿ ಎನ್ವಿರಾಲ್ಮೆಂಟ್ ಕೊಡಿಸಲು ಆಗಲಿಲ್ಲ. ಮತ ಹೇಗೆ ಕೇಳ್ತಿರಿ ಜೋಶಿ ಅವರೆ, ನಾವು ನುಡಿದಂತೆ ನಡೆಯುತ್ತಿದ್ದೆವೆ. ಸುಳ್ಳಿನ ಆಸ್ಕಾರ ಅವಾರ್ಡ ಮೋದಿ ಗೆ ಕೊಡಬೇಕು. ಜೋಶಿ ಅವರಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಸಲೀಂ ಅಹಮದ್ ಹೇಳಿದ್ದಾರೆ.

ಈ ಮೊದಲು ನನಗೆ ಇಷ್ಟೆಲ್ಲ ಜನರ ಬೆಂಬಲ ಸಿಕ್ಕಿರಲೇ ಇಲ್ಲ: ಜಗದೀಶ್ ಶೆಟ್ಟರ್

ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಕುಮಾರಸ್ವಾಮಿ ಸಚಿವರಾದರೆ ಅಸ್ತಿತ್ವವೇ ಇರುವುದಿಲ್ಲವೆಂಬ ಭಯ ಡಿಕೆಶಿಗೆ ಕಾಡುತ್ತಿದೆ: ವಿಜಯೇಂದ್ರ

- Advertisement -

Latest Posts

Don't Miss