Saturday, July 27, 2024

Latest Posts

Uttarpradeshದಲ್ಲಿ “ಭೈರವ”ಚಿತ್ರದ ಮುಹೂರ್ತ..!

- Advertisement -

ಸುಗ್ಗಿ ಹಬ್ಬದ ಸುಸಂದರ್ಭದಲ್ಲಿ “ಭೈರವ”(bhairava)  ಚಿತ್ರದ ಮುಹೂರ್ತ ಸಮಾರಂಭ ಉತ್ತರ ಪ್ರದೇಶದ(Uttar Pradesh)ಗೋವಿಂದ ಪುರದ ಹನುಮಂತನ ಸನ್ನಿಧಿಯಲ್ಲಿ ನೆರವೇರಿದೆ. ಇತ್ತೀಚೆಗೆ ಮುಂಬೈನಲ್ಲಿ “ಭೈರವ” ಚಿತ್ರದ ಶೀರ್ಷಿಕೆ ಅನಾವರಣ ನಡೆದಿತ್ತು.

ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ ಕುಲಕರ್ಣಿ(Chidambara Kulkarni)ಆರಂಭ ಫಲಕ ತೋರಿದರು.  ವೈಭವ್ ಬಜಾಜ್(Vaibhav Bajaj) ಹಾಗೂ ಹನಿ‌ ಚೌಧರಿ (Hani Chowdhury)(ವಿಸಿಕಾ ಫಿಲಂ ಸಂಸ್ಥೆ) ಸೇರಿ ಕ್ಯಾಮೆರಾ ಚಾಲನೆ‌ ಮಾಡಿದರು. ಉತ್ತರ ಪ್ರದೇಶದ ಬಿಜೆಪಿ ಮುಖಂಡರಾದ ಡಾ.ಮಂಜು ಶಿವಾಜ್(BJP leader Dr Manju Shivaj)ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಮರೊಟ್ಟು ಚೆಕ್ ಪೋಸ್ಟ್  ಖ್ಯಾತಿಯ  ಸನತ್(Sanat)ಈ ಚಿತ್ರದ ನಾಯಕ. ನಾಯಕಿಯಾಗಿ ಒಂದು ಮೊಟ್ಟೆ ಖ್ಯಾತಿಯ ಶೈಲಶ್ರೀ ಮುಲ್ಕಿ(Shyashree Mulki)ಹಾಗೂ ಖಳನಾಯಕನಾಗಿ ಉಮೇಶ ಸಕ್ಕರೆನಾಡು ಅಭಿನಯಿಸುತ್ತಿದ್ದಾರೆ. 

ಸಂದೀಪ್ ಫ್ರೇಡ್ರಿಕ್ ಛಾಯಾಗ್ರಹಣ(Photography by Sandeep Frederick), ಕಪಿಲ್ ದೀಕ್ಷಿತ್ ಕ್ರಿಯಾಶೀಲ ನಿರ್ದೇಶನ ಹಾಗೂ ಕರಣ್ ಕ್ಷಿತಿ ಸುವರ್ಣ ಸಹ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರತಂಡದ ಸದಸ್ಯರು ಹಾಗೂ ಮೀರತ್ ನಗರದ ಖ್ಯಾತ ವಕೀಲರಾದ ರಾಜಕುಮಾರ ಗುಪ್ತ ಮತ್ತು ಡಾ.ಸಂಜೀವ ಚೌಧರಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು

- Advertisement -

Latest Posts

Don't Miss