Saturday, July 27, 2024

Latest Posts

‘ಚುನಾವಣೆಗೆ ಜೆಡಿಎಸ್ ಕಾರ್ಯಕರ್ತರು ರೆಡಿಯಾಗಿರಿ’- ನಿಖಿಲ್ ಕುಮಾರ್ ಕರೆ

- Advertisement -

ಮಂಡ್ಯ: ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ ಏನೂ ಆಗಲ್ಲ, ಇನ್ನು 4 ವರ್ಷ ಕುಮಾರಸ್ವಾಮಿಯವರೇ ಸಿಎಂ ಅಂತ ಮೈತ್ರಿ ನಾಯಕರು ಹೇಳಿಕೊಂಡು ಓಡಾಡ್ತಿದ್ದಾರೆ. ಆದ್ರೆ ಸ್ವತಃ ಸಿಎಂ ಪುತ್ರ ನಿಖಿಲ್ ಕುಮಾರ್ ಚುನಾವಣೆ ಯಾವಾಗ ಬೇಕಾದ್ರೂ ಎದುರಾಗಬಹುದು ನೀವು ರೆಡಿಯಾಗಿರಿ ಅಂತ ಕಾರ್ಯಕರ್ತರಿಗೆ ಸುಳಿವು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಮಂಡ್ಯದಲ್ಲಿ ಕಾರ್ಯಕರ್ತರೊಂದಿಗೆ ಚರ್ಚೆ ವೇಳೆ ನಿಖಿಲ್ ಕುಮಾರ್, ಚುನಾವಣೆ ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ ಅಂತ ಗೊತ್ತಿಲ್ಲ. ಚುನಾವಣೆಗೆ ಜೆಡಿಎಸ್ ಕಾರ್ಯಕರ್ತರು ರೆಡಿ ಆಗಿರಿ. ತಕ್ಷಣವೇ, ಮುಂದಿನ ತಿಂಗಳೊಳಗೇ ಕೆಲಸ ಶುರುಮಾಡಿ ಅಂತ ನಿಖಿಲ್ ಕುಮಾರ್ ಮತ್ತೆ ಚುನಾವಣೆ ಎದುರಿಸೋ ಬಗ್ಗೆ ಕಾರ್ಯಕರ್ತರಿಗೆ ಸುಳಿವು ನೀಡಿದ್ದಾರೆ.

ಇನ್ನೊಮ್ಮೆ, ಸರ್ಕಾರ ಇನ್ನು 4 ವರ್ಷ ಸುಭದ್ರವಾಗಿರುತ್ತೆ, ಕುಮಾರಣ್ಣ ಸರ್ಕಾರ ನಡೆಸ್ತಾರೆ ಅಂತ ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸರ್ಕಾರದ ಅಸ್ಥಿತ್ವದ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ.

ಆದ್ರೆ ನಿಖಿಲ್ ಕುಮಾರ್ ಈ ಮಾತು ಮಾತ್ರ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯುತ್ತೆ ಅನ್ನೋದನ್ನ ಸಾರಿ ಹೇಳುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ನಿಖಿಲ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಸರ್ಕಾರ ಉಳಿಯುತ್ತೋ, ಉರುಳುತ್ತೋ…?? ತಪ್ಪದೇ ಈ ವಿಡಿಯೋ ನೋಡಿ

https://www.youtube.com/watch?v=nZbaKm5vxYU


- Advertisement -

Latest Posts

Don't Miss