Political News: ಇಂದು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದ ಸಮಿತಿ ಸಮನ್ವಯ ಸಭೆಯ ಬಳಿಕ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ಗೌಡ, ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ್ದಾರೆ.
ರಾಜಕೀಯ ಅಂದಮೇಲೆ ಸಣ್ಣ ಪುಟ್ಟ ಗೊಂದಲಗಳು ಇದ್ದೇ ಇರುತ್ತದೆ. ಆದರೆ ಈ ಸಭೆ ಮುಖಾಂತರ ಒೊಂದು ಸ್ಟ್ರಾಂಗ್ ಮೆಸೇಜ್ ಕೊಡುವ ಕೆಲಸಮ ಮಾಡಿದ್ದೇವೆ. ಭೂತ್ ಮಟ್ಟ, ಕಾರ್ಯಕರ್ತರ ಮಟ್ಟ, ಲೀಡಲ್ ಲೆವಲ್ನಲ್ಲಿ ಇರುವ ಗೊಂದಲಗಳನ್ನು ನಾವು ಶಮನ ಮಾಡುವಂಥ ಕೆಲಸ ನಾವು ಮಾಡಿ. ಮುಂದಿನ ದಿನಗಳಲ್ಲಿ 28ಕ್ಕೆ 28 ಕ್ಷೇತ್ರಗಳನ್ನು್ ನಾವು ಗೆಲ್ಲುವಂತೆ ಮಾಡಿ, ಪ್ರಧಾನಿ ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ನಾವೆಲ್ಲ ಇದು ನಮ್ಮ ಚುನಾವಣೆ ಅನ್ನೋ ರೀತಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಎಲ್ಲ ಹೊಂದಾಣಿಕೆಯಾಗಿದೆ. ಅಲ್ಲದೇ ಇವತ್ತೊಂದು ಸ್ಟ್ರಾಂಗ್ ಮೆಸೇಜ್ ಹೋಗಿರುವುದು ಬಹಳ ಸಂತೋಷವಾದ ವಿಚಾರ. ಇನ್ನು ಹಾಸನದಲ್ಲಿ ಟಿಕೇಟ್ ಅನೌನ್ಸ್ ಆಗುವ ಮುನ್ನ ಗೊಂದಲಗಳಿತ್ತು. ಆದರೆ ಟಿಕೇಟ್ ಅನೌನ್ಸ್ ಆದ ಮೇಲೆ, ಅವರ್ಯಾರೂ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ಪ್ರಜ್ವಲ್ ಹೇಳಿದ್ದಾರೆ. ಪೂರ್ತಿ ವೀಡಿಯೋ ಇಲ್ಲಿದೆ ನೋಡಿ..
ಸಂಸದೆ ಸುಮಲತಾ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಿಷ್ಟು..
ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮತ್ತೆ ಹಾಸನಕ್ಕೆ ಎಂಟ್ರಿ ಕೊಟ್ಟ ಕಾಡಾನೆ: ಕಾಡು ಸಿಗದೆ ರಸ್ತೆಯಲ್ಲೇ ವಾಕಿಂಗ್