Saturday, June 21, 2025

Latest Posts

ತುರಿಕೆ, ಗಜಕರ್ಣ ಸಮಸ್ಯೆಗೆ ಪವರ್ಫುಲ್ ಮನೆಮದ್ದುಗಳು..

- Advertisement -

ಗಜಕರ್ಣ, ತುರಿಕೆ ಸಮಸ್ಯೆಗಳು ಸಡನ್ ಆಗಿ ಸಂಭವಿಸುತ್ತದೆ. ಸಣ್ಣ ಗುಳ್ಳೆ, ಮುಂದೆ ಕಲೆಯಾಗುವಷ್ಟು ಕಿರಿಕಿರಿ ತಂದಿಡುತ್ತದೆ. ಸರಿಯಾಗಿ ಸ್ನಾನ ಮಾಡದಿದ್ದಾಗ, ಅಥವಾ ನಾವು ಬಳಸುವ ಸೋಪ್ ನಿಂದ ನಮಗೆ ಅಲರ್ಜಿಯಾಗುತ್ತಿದೆ ಎಂದಾಗ, ಅಥವಾ ನಾವು ಮಲಗುವ ಜಾಗ ಕ್ಲೀನ್ ಇಲ್ಲದಿದ್ದಾಗ, ಈ ಕಜ್ಜಿ, ತುರಿಕೆಗಳು ಆರಂಭವಾಗುತ್ತದೆ. ಹಾಗಾಗಿ ನಾವಿಂದು ಗಜಕರ್ಣ, ತುರಿಕೆ ಹೋಗಲಾಡಿಸಲು, ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಲಿದ್ದೇವೆ.

ತೆಂಗಿನ ಎಣ್ಣೆ: ಸಣ್ಣ ಪುಟ್ಟ ತುರಿಕೆಯಾದಾಗ, ತೆಂಗಿನ ಎಣ್ಣೆ ಬಳಸೋದು ಕಾಮನ್. ಇತ್ತೀಚೆಗೆ ಮಾರುಕಟ್ಟೆಯಲ್ಲಿ ತರಹೇವಾರಿ ಕ್ರೀಮ್‌ಗಳು ಬಂದಿದೆ. ಆದರೆ ಹಿಂದಿನ ಕಾಲದಲ್ಲಿ, ಗುಳ್ಳೆ, ಕಜ್ಜಿ, ತುರಿಕೆ ಇವೆಲ್ಲದಕ್ಕೂ ಹೆಚ್ಚಾಗಿ ಬಳಸುವ ಮನೆಮದ್ದು ಅಂದ್ರೆ ತೆಂಗಿನ ಎಣ್ಣೆಯೇ ಆಗಿತ್ತು. ಒಂದೇ ದಿನದಲ್ಲಿ ತುರಿಕೆಯನ್ನ ಮಾಯ ಮಾಡುವ ತಾಕತ್ತು ತೆಂಗಿನ ಎಣ್ಣೆಗಿದೆ.

ಅರಿಶಿನ: ಈಗೆಲ್ಲ ಗಾಯವಾದರೆ, ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಪೌಡರ್ ಬಳಸುತ್ತಾರೆ. ಆದರೆ ಮೊದಲಿನವರು ಗಾಯವಾದಾಗ, ತುರಿಕೆಯಾದಾಗ ಬಳಸುತ್ತಿದ್ದುದ್ದೇ ಅರಿಶಿನ ಪುಡಿ. ಗಾಯವಾದ ಜಾಗದಲ್ಲಿ, ಅರಿಶಿನ ಹಚ್ಚಿದ್ರೆ, ಒಂದೇ ದಿನದಲ್ಲಿ ಗಾಯ ಮಾಸಿಹೋಗುತ್ತದೆ. ನಂಜಾಗುವ ರೀತಿ ಗಾಯವಾದಾಗ, ಅರಿಶಿನ ಹಾಲು ಕುಡಿಯುತ್ತಿದ್ದರು. ಅದೇ ರೀತಿ ನಿಮಗೆ ಕಜ್ಜಿ, ತುರಿಕೆ ಉಂಟಾಗಿದ್ದರೆ ಆ ಜಾಗದಲ್ಲಿ ಅರಿಶಿನ ಮತ್ತು ತೆಂಗಿನ ಎಣ್ಣೆ, ಅರಿಶಿನ ಮತ್ತು ತುಳಸಿ ರಸ ಅಥವಾ, ಅರಿಶಿನ ಮತ್ತು ಬೇವಿನ ರಸ ಹಚ್ಚಿ. ಇಲ್ಲವಾದಲ್ಲಿ, ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಬಳಸಿ.

ತುಳಸಿ: ತುಳಸಿಯಲ್ಲಿರುವ ಆಯುರ್ವೇದಿಕ್ ಗುಣ, ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುರಿಕೆ, ಹುಳುಕಡ್ಡಿ ಇರುವ ಜಾಗದಲ್ಲಿ ತುಳಸಿ, ರಸವನ್ನು ಹಚ್ಚಿ.

ಬೇವಿನ ಎಲೆ, ಬೇವಿನ ಎಲೆಯ ಸೋಪ್: ಕೆಲವರಿಗೆ ಬೇವಿನ ಎಲೆಯ ಆಯುರ್ವೇದಿಕ್ ಸೋಪ್ ಬಳಸಿದರೆ, ದೇಹದಲ್ಲಿ ತುರಿಕೆ, ಕಜ್ಜಿ ಮಾಯವಾಗುತ್ತದೆ. ನೀವೂ ಕೂಡ ಈ ಪ್ರಯೋಗ ಮಾಡಿ ನೋಡಬಹುದು. ಇಲ್ಲವಾದಲ್ಲಿ ಬೇವಿನ ರಸವನ್ನ ಕೂಡ ಹಚ್ಚಬಹುದು. ಬೇವಿನ ಎಲೆಯಲ್ಲಿ ತುರಿಕೆ, ಕಜ್ಜಿ ಮಾಯಮಾಡುವ ಅಂಶವಿದ್ದು, ಇದು ಹಲವು ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಿದೆ.

ಬಾಯಿ ಹುಣ್ಣಾಗಿದ್ದರೆ ಈ ರೀತಿ ಮನೆಮದ್ದು ಮಾಡಿ, ಪರಿಹಾರ ಕಂಡುಕೊಳ್ಳಿ..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಇದನ್ನ ಸೇವಿಸಿ..

- Advertisement -

Latest Posts

Don't Miss