ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಹಾಗೂ ಮೈಸೂರಿನ-ಕೊಡಗು ಸಂಸದರಾದ ತೇಜಸ್ವಿ, ಪ್ರತಾಪ್ ಸಿಂಹ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ರು. ತೇಜಸ್ವಿ, ಪ್ರತಾಪ್ ಸಿಂಹ ಜಂಟಿಯಾಗಿ 25 ಲಕ್ಷದ ಪ್ರಶ್ನೆಯನ್ನ ಫೇಸ್ ಮಾಡಿದ್ರು.. ಈ ಪ್ರಶ್ನೆಗೆ ಸರಿಆಗಿ ಉತ್ತರ ಕೊಟ್ರೆ 25 ಲಕ್ಷ ಗೆಲ್ತಿದ್ರು.. ಒಂದು ವೇಳೆ ತಪ್ಪು ಉತ್ತರ ನೀಡಿದ್ರೆ 3.5 ಲಕ್ಷ ಸಿಗ್ತಿತ್ತು. ಆದ್ರೆ, ಇಬ್ಬರು ಯುವ ಸಂಸದರು ರಿಸ್ಕ್ ತೆಗೆದುಕೊಳ್ಳೋದು ಬೇಡ ದು ಜನರಿಗಾಗಿ ಕೊಡುವ ಹಣತೀರ್ಮಾನಿಸಿ ಆಟ ಕ್ವಿಟ್ ಮಾಡಿದ್ರು.. ಹೀಗಾಗಿ 12.5 ಹಣದ ಚೆಕ್ ಅನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿ ಹೆಸರಿನಲ್ಲಿ ತೆಗೆದುಕೊಂಡ್ರು..
25 ಲಕ್ಷದ ಪ್ರಶ್ನೆ ಈ ರೀತಿ ಇತ್ತು
1498ರಲ್ಲಿ ವಾಸ್ಕೋಡಿ ಗಾಮಾ ಭಾರತಕ್ಕೆ ಬಂದ ಹಡಗಿನ ಹೆಸರೇನು..?
ಎ. ಸಾವೋ ಗೇಬ್ರಿಯಲ್
ಬಿ. ಸಂತ ಮರಿಯಾ
ಸಿ. ಸಾವೋ ರಫಾಯಲ್
ಡಿ. ನೀನಾ
ಸರಿಯಾದ ಉತ್ತರ.. ಎ. ಸಾವೋ ಗೇಬ್ರಿಯಲ್