Sunday, September 8, 2024

Latest Posts

ಅಪ್ಪು ಇಷ್ಟಪಟ್ಟಿದ್ದ ಆನೆ ಮರಿಗೆ ಪುನೀತ್ ಹೆಸರು : ಅರಣ್ಯ ಇಲಾಖೆಯಿಂದ ಅಪ್ಪುವಿಗೆ ವಿಶೇಷ ಗೌರವ .

- Advertisement -

www.karnatakatv.net:

ಕನ್ನಡದ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ಹಿನ್ನಲೆ ಅರಣ್ಯ ಇಲಾಖೆ ಇವರಿಗೆ ಗೌರವ ಸಲ್ಲಿಸಿದ್ದು , ಪುನೀತ್ ಮುದ್ದಾಡಿದ್ದ ಆನೆಮರಿಯೊಂದಕ್ಕೆ ಪುನೀತ್ ಹೆಸರನ್ನು ಇಡಲಾಗಿದೆ .
ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರದ ನೇತ್ರಾ ಆನೆ ಕಳೆದ ಎರಡು ವರ್ಷದ ಹಿಂದೆ ಗಂಡು ಮರಿಯಾನೆಗೆ ಜನ್ಮ ನೀಡಿತ್ತು .
ಇನ್ನು ಪವರ್ ಸ್ಟಾರ್ ಅವರು ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ವಿಷೇಷವಾದ ಕಾಳಜಿಯನ್ನು ಹೊಂದಿದ್ದರು .ಕೆಲವೊಂದು ಸಲ ವನ್ಯಜೀವಿ ಸಂಭoದಿತ ಸಾಕ್ಷಚಿತ್ರೀಕರಣಕ್ಕೆ ಸಕ್ರೆಬೈಲಿಗೆ ಆಗಮಿಸಿದ್ದರು , ಆ ಸಂದರ್ಭದಲ್ಲಿ ಒಂದು ಆನೆ ಮರಿಯನ್ನು ಕಂಡು ಇಷ್ಟಪಟ್ಟು ಮುದ್ದಾಡಿದ್ದರು.
ಈಗ ನೇತ್ರಾ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಬಿಡಾರದ ಸಿಬ್ಬಂದಿ ಮಾಡುತ್ತಿದ್ದು , ಈ ವೇಳೆ ಆನೆ ಮರಿಗೆ ಹೆಸರನ್ನು ಇಡಲು ಮುಂದಾಗಿದ್ದಾರೆ . ಈ ಹಿನ್ನಲೆಯಲ್ಲಿ ಅಧಿಕಾರಿಗಳು ಆನೆಮರಿಗೆ ಸಾರ್ವಜನಿಕರಿಂದ ಹೆಸರು ಸೂಚಿಸಲು ತಿಳಿಸಿದ್ದು , ಒಂದು
ವಾರದಿಂದ ಪ್ರಚಾರ ನಡೆಸಿದ ಬಳಿಕ ಎಲ್ಲರೂ ಪುನೀತ್ ರಾಜ್ ಕುಮಾರ್ ಹೆಸರು ಇಡಲು ಸೂಚಿಸಿದ್ದರು .
ಈಗಾಗಿ ಅರಣ್ಯ ಇಲಾಕೆಯವರು ಪನೀತ್ ರಾಜ್ ಕುಮಾರ್ ಹೆಸರನ್ನು ಇಟ್ಟು ಸಿಹಿ ಹಂಚಿಕೆ ಮಾಡಿದ್ದಾರೆ . ಇನ್ನೂ ಮಾಧ್ಯಮದವರ ಜೊತೆ ಮಾಹಿತಿ ಹಂಚಿಕೊoಡಿರುವ ಡಿಸಿಎಫ್ ನಾಗರಾಜ್ ಅವರು .. ಈ ಶಿಭಿರದಲ್ಲಿ ಆನೆ ಮರಿ ಹಾಕಿದ ನಂತರ ಅದಕ್ಕೆ ಆ ಮರಿಗೆ ಹೆಸರಿಡುವುದು ಸಂಪ್ರದಾಯ. ಪುನೀತ್ ರವರು ನಿಧನಕ್ಕೂ ಮುಂಚೆ ಶಿಬಿರಕ್ಕೆ ಬೇಟಿ ನೀಡಿದ್ದರು , ಹೀಗಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಆನೆ ಮರಿಗೆ ಪುನೀತ್ ಎಂದು ನಾಮಕರಣ ಮಾಡಿದ್ದೇವೆ ಎಂದು ತಿಳಿಸಿದ್ದಾರೆ .

- Advertisement -

Latest Posts

Don't Miss