Friday, June 20, 2025

Latest Posts

Raichur : ಸಾವಿರ ವಿದ್ಯಾರ್ಥಿಗಳು ಇದ್ದರೂ ಶಾಲೆಗೆ ಕೊಠಡಿಗಳ ಕೊರತೆ

- Advertisement -

ರಾಯಚೂರು : ರಾಜ್ಯದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ವೈರಸ್ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದ ಬೆಂಗಳೂರಿನ ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಬಿಸಿಲುನಾಡು ರಾಯಚೂರು ಜಿಲ್ಲೆಯ ಶಾಲಾ ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ನಿತ್ಯವೂ ಕೊರೊನಾ ಆತಂಕದಲ್ಲಿಯೇ ಶಾಲೆಗೆ ಬಂದು ಹೋಗುತ್ತಿದ್ದಾರೆ. ಗ್ರಾಮದ ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಎಲ್ಲವೂ ಒಂದೇ ಆವರಣದಲ್ಲಿ ನಡೆಯುತ್ತಿದ್ದು. 1 ರಿಂದ 10ನೇ ತರಗತಿವರೆಗೆ 1053 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಮಕ್ಕಳು ಶಾಲೆಯ ಕೋಣೆಯಲ್ಲಿ ಕುಳಿತುಕೊಂಡು ಪಾಠ ಕೇಳಬೇಕಾದರೆ ತಮ್ಮ ಬ್ಯಾಗ್ಗಳನ್ನ ಹೊರಗಡೆ ಇಟ್ಟು ಕುಳಿತುಕೊಳ್ಳಬೇಕು. ಇನ್ನೂ ಚಿಕ್ಕ ಮಕ್ಕಳಿಗೆ ಶಾಲೆಯ ಮರದ ಕೆಳಗಡೆಯೇ ಪಾಠ ಮಾಡುತ್ತಿದ್ದಾರೆ.

ಒಂದೇ ಕೊಠಡಿಯಲ್ಲಿ 120 ರಿಂದ 150  ಮಕ್ಕಳು ಒಬ್ಬರನ್ನು ಒಬ್ಬರು ಅಂಟಿಕೊಂಡು ಕುಳಿತ್ತು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ .  ಅದರಲ್ಲೂ ಬಿಸಿಯೂಟದ ವೇಳೆ ಅಂತೂ ಮಕ್ಕಳು ಒಬ್ಬರಿಗೆ ಒಬ್ಬರೂ ತಾಳಾಡಿಕೊಂಡು, ಮುಗಿಬಿದ್ದು , ಊಟ ಮಾಡುವ ಪರಿಸ್ಥಿತಿಯಿದೆ. ಮತ್ತೊಂದು ದುರಂತದ ಸಂಗತಿ ಅಂದ್ರೆ 1053 ಮಕ್ಕಳಿಗೆ ಕೇವಲ ಒಂದೇ ಒಂದು ಶೌಚಾಲಯವಿದ್ದು ಮಕ್ಕಳು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ. ಅದರಲ್ಲಿ ಒಂದು ಮಗುವಿಗೆ ಕರೋನ ಸೋಂಕು ಕಾಣಿಸಿಕೊಂಡರೆ ಮಾತ್ರ ಎಲ್ಲಾ ಮಕ್ಕಳಿಗೆ ಬರುವುದು ಅನುಮಾನವೇ ಇಲ್ಲ . ಈ ಎಲ್ಲದರ ನಡುವೆ ಪ್ರೌಢ ಶಾಲೆಗೆ ಸ್ಥಳ ನಿಗದಿ ಆದರೂ ಇಲ್ಲಿಯವರೆಗೆ ಕಟ್ಟಡ ಇಲ್ಲ. ಇದು ರಾಯಚೂರಿನ ಶಾಲೆಗಳ ಸ್ಥಿತಿಯಾಗಿದೆ. ಇದರಿಂದ ಅಂಗನವಾಡಿ, ಪ್ರಾಥಮಿಕ ಹಾಗೂ  ಪ್ರೌಢ ಶಾಲೆಯ ಒಟ್ಟು  1053 ಮಕ್ಕಳಿಗೆ ನಿತ್ಯ ಒಂದೇ ಆವರಣದಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

ಇನ್ನಾದರು ಸರ್ಕಾರ ಇತ್ತ ಕಡೆ ಗಮನಹರಿಸಿ ಮಕ್ಕಳಿಗೆ ಸುಸಜ್ಜಿತ ಕೊಠಡಿಗಳು ಮಾಡಬೇಕೆಂದು ಒತ್ತಾಯಿಸಿದರು.

- Advertisement -

Latest Posts

Don't Miss