ಟ್ವೀಟ್ ಮೂಲಕ ನೋವು ಹೊರಹಾಕಿದ್ರಾ ಸಿದ್ದು..??

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ದಿ. ದೇವರಾಜ ಅರಸರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಮಾಡಿರೋ ಟ್ವೀಟ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.

ನಿನ್ನೆ ದೇವರಾಜ ಅರಸುರವರ ಪುಣ್ಯ ಸ್ಮರಣೆಯಂದು ಟ್ವೀಟ್ ಮಾಡಿರೋ ಸಿದ್ದರಾಮಯ್ಯ ‘ಬಡವರು,ಶೋಷಿತರು ಮತ್ತು ದಮನಿತರ ಪರವಾಗಿ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ, ಇತಿಹಾಸ ಮಾತ್ರ ನೆನಪಲ್ಲಿಟ್ಟುಕೊಳ್ಳುತ್ತೆ ಎನ್ನುವ ಮಾತು ಡಿ.ದೇವರಾಜರ ವಿಷಯದಲ್ಲಿ ಮಾತ್ರ‌ ನಿಜ‌ ಅಲ್ಲ, ಅದೊಂದು ಸಾರ್ವಕಾಲಿಕ‌ ಸತ್ಯ ಎನ್ನುವುದು ಮತ್ತೆ ಮತ್ತೆ ಅನುಭವಕ್ಕೆ ಬರುತ್ತಿದೆ’ ಅಂತ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಮಾಡಿರೋ ಈ ಟ್ವೀಟ್ ಸಾಕಷ್ಟು ಜನಪರ ಕೆಲಸ ಮಾಡಿದ್ರೂ ದೇವರಾಜು ಅರಸರನ್ನು ಜನ ಕೈಬಿಟ್ಟಿದ್ದಕ್ಕೆ ಸೂಚ್ಯವಾಗಿದೆಯೋ ಇಲ್ಲಾ ರಾಜಕೀಯ ವಿರೋಧಿಗಳಿಗೋ ಅಥವಾ ಸ್ವಪಕ್ಷೀಯರಿಗೋ ಎಂಬ ಸಣ್ಣದೊಂದು ಪ್ರಶ್ನೆ ಮೂಡಿಸುತ್ತಿದೆ.

ಇನ್ನು ಮುಂದೆ ಕಾಯಿನ್ ಹಾಕಿದ್ರೂ ನೀರು ಬರಲ್ಲ. ಯಾಕೆ ಗೊತ್ತಾ…?ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=Avg3XQ9SwTo

About The Author