Sandalwood News: ಸರಿಗಮಪ ಕನ್ನಡ ರಿಯಾಲಿಟಿ ಶೋನಿಂದ ಮನೆ ಮಾತಾಗಿದ್ದ, ಮತ್ತು ಹಲವು ಸಿನಿಮಾ, ಸಿರಿಯಲ್ ಹಾಡಿಗೆ ದನಿಯಾಗಿದ್ದ ಗಾಯಕಿ ಪ್ರಥ್ವಿ ಭಟ್ ವಿವಾಹವಾಗಿದ್ದಾರೆ. ಆದರೆ ಇದಕ್ಕೆ ಅವರ ಮನೆಯವರು ವಿರೋಧಿಸಿದ್ದಾರೆ.
ಯಾಕಂದ್ರೆ ಇದೊಂದು ಪ್ರೇಮ ವಿವಾಹವಾಗಿದ್ದು, ಈ ವಿವಾಹಕ್ಕೆ ಸರಿಗಮಪ ಜ್ಯೂರಿ ನರಹರಿ ದೀಕ್ಷಿತ್ ಎಂಬುವವರು ಸಪೋರ್ಟ್ ಮಾಡಿದ್ದು, ಇದಕ್ಕೆ ಪ್ರಥ್ವಿ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಜೀ ಕನ್ನಡದಲ್ಲೇ ಕೆಲಸ ಮಾಡುತ್ತಿದ್ದ ಅಭಿಷೇಕ ಎಂಬಾತನೊಂದಿಗೆ ಪ್ರಥ್ವಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಪ್ರಥ್ವಿಯನ್ನು ನರಹರಿ ದೀಕ್ಷಿತ್ ಧಾರೆ ಎರೆದುಕೊಟ್ಟಿದ್ದಾರೆಂದು ಪ್ರಥ್ವಿ ತಂದೆ ಆರೋಪಿಸಿದ್ದಾರೆ.
ಅಲ್ಲದೇ ಪ್ರಥ್ವಿಯನ್ನು ವಶೀಕರಣ ಮಾಡಲಾಗಿದೆ. ಈ ಮೊದಲು ಆಕೆಯನ್ನು ಹವ್ಯಕ ಹುಡುಗನಿಗೇ ಕೊಟ್ಟು ವಿವಾಹ ಮಾಡಬೇಕು ಎಂದಿದ್ದೆ. ಆದರೆ ಇದರ ಬಗ್ಗೆ ಅರಿವಿದ್ದರೂ ಕೂಡ ಜ್ಯೂರಿಯಾಗಿದ್ದ ನರಹರಿ ದೀಕ್ಷಿತ್ ಈ ಪ್ರೇಮ ವಿವಾಹಕ್ಕೆ ಸಪೋರ್ಟ್ ಮಾಡಿದ್ದಾರೆ. ಇಂಥವರಿಗೆ ನಮ್ಮ ಹವ್ಯಕ ಒಕ್ಕೂಟ ಎಂದಿಗೂ ಬೆಂಬಲಿಸಬಾರದು ಎಂದು ಪ್ರಥ್ವಿ ಆಕ್ರೋಶ ಹೊರಹಾಕಿದ್ದಾರೆ.
ಆಕೆ ಪ್ರೀತಿ ಮಾಡುತ್ತಿರುವ ಬಗ್ಗೆ ನರಹರಿಯವರೇ ನಮಗೆ ಹೇಳಿದ್ದರು. ನಾವು ಪ್ರಥ್ವಿಯ ಬಳಿ ಈ ವಿಷಯ ಕೇಳಿದಾಗ, ಆಕೆ ನಮ್ಮ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಿ, ನಾನು ಪ್ರೀತಿಸುತ್ತಿರುವುದು ನಿಜ. ಆದರೆ ನೀವು ಒಪ್ಪಿದರಷ್ಟೇ ಮದುವೆಯಾಗುತ್ತೇನೆ. ಇಲ್ಲದಿದ್ದರೆ, ನೀವು ನೋಡಿದ ಹುಡುಗನನ್ನೇ ವಿವಾಹವಾಗುತ್ತೇನೆ ಎಂದು ಹೇಳಿದ್ದಳು. ಆದರೆ ಹೀಗೆ ಅಚಾನಕ್ ಆಗಿ, ಓಡಿ ಹೋಗಿ, ದೇವಸ್ಥಾನದಲ್ಲಿ ತಾನಿಷ್ಟಪಟ್ಟವನನ್ನು ವಿವಾಹವಾಗಿದ್ದಾಳೆ ಎಂದು ಪ್ರಥ್ವಿ ತಂದೆ ಬೇಸರ ಹೊರಹಾಕಿದ್ದಾರೆ.