Saturday, June 21, 2025

Latest Posts

ಶಿವನಿಗೆ ಮೂರನೇ ಕಣ್ಣು ಬಂದಿದ್ದು ಹೇಗೆ..? ಇದು ಯಾರ ತಪ್ಪಿನಿಂದ ಉದ್ಭವವಾದ ಕಣ್ಣು..?

- Advertisement -

ಮುಕ್ಕಣ್ಣ ಅಂದ್ರೆ ಶಿವ ಅಂತಾ ಎಲ್ಲರಿಗೂ ಗೊತ್ತು. ಶಿವನಿಗೆ ಹಣೆಯ ಮೇಲೆ ಮೂರನೇ ಕಣ್ಣಿರುವ ಕಾರಣ, ಆತನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತದೆ. ಆದ್ರೆ ಶಿವನಿಗೆ ಮೂರನೇ ಕಣ್ಣು ಬಂದಿದ್ದ ಹೇಗೆ..? ಯಾರ ತಪ್ಪಿನಿಂದ ಇದು ಉದ್ಭವವಾಗಿದ್ದು, ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಭ್ರೂಣಹತ್ಯೆ ಮಾಡುವವರಿಗೆ ನರಕದಲ್ಲಿ ಎಂಥ ಶಿಕ್ಷೆ ಸಿಗುತ್ತದೆ ಗೊತ್ತಾ..?

ಒಮ್ಮೆ ಹಿಮಾಲಯ ಪರ್ವತದಲ್ಲಿ ಶಿವ, ದೇವತೆಗಳು, ಋಷಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಪಾರ್ವತಿ ಎಷ್ಟೇ ಹುಡುಕಿದರೂ ಶಿವ ಕಾಣದ ಕಾರಣ, ಹಿಮಾಲಯಕ್ಕೆ ಬಂದ ಪಾರ್ವತಿಗೆ ಶಿವ ಕಂಡ. ಆಗ ಪಾರ್ವತಿ ಸಭೆಯ ಮಧ್ಯೆ ಹೋಗಿ, ತಮಾಷೆ ಮಾಡೋಣ ಎಂದುಕೊಂಡಳು. ಆಗ ಪಾರ್ವತಿ, ಶಿವನ ಹಿಂದಿನಿಂದ ಬಂದು, ತನ್ನ ಕೈಯಿಂದ ಶಿವನ ಎರಡೂ ಕಣ್ಣನ್ನ ಮುಚ್ಚುತ್ತಾಳೆ. ಪುರಾಣ ಕಥೆಗಳ ಪ್ರಕಾರ, ಶಿವನ ಒಂದು ಕಣ್ಣು ಸೂರ್ಯ ಮತ್ತು ಇನ್ನೊಂದು ಕಣ್ಣು ಚಂದ್ರನೆಂದು ಹೇಳಲಾಗಿದೆ.

ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದೇಕೆ..? ಕುಬೇರ ಅಂಥಾದ್ದೇನು ಮಾಡಿದ್ದ..?

ಪಾರ್ವತಿ ಶಿವನ ಕಣ್ಣು ಮುಚ್ಚಿದಾಗ, ಲೋಕದಲ್ಲಿ ಕತ್ತಲು ಆವರಿಸಿತು. ಪ್ರಾಣಿ- ಪಕ್ಷಿಗಳು ಹೆದರಿ ಗೂಡು ಸೇರಿದವು. ಇದನ್ನು ಅರಿತ ಶಿವ, ತನ್ನ ಹಣೆಯ ಮಧ್ಯೆ ಬೆಳಕಿನ ಪುಂಜವನ್ನು ಸೃಷ್ಟಿಸಿ, ಮೂರನೇ ಕಣ್ಣು ತೆರೆದು, ಲೋಕಕ್ಕೆ ಬೆಳಕು ನೀಡಿದ. ಹೀಗೆ ಶಿವನ ಮೂರನೇ ಕಣ್ಣು ಉದ್ಭವವಾಯಿತು. ಆಗ ಪಾಾರ್ವತಿಗೆ ತನ್ನ ತಪ್ಪಿನ ಅರಿವಾಯಿತು. ಆಕೆ ಶಿವನಲ್ಲಿ ಕ್ಷಮೆ ಕೇಳಿದಳು. ಶಿವ ಪಾರ್ವತಿಯನ್ನು ಕ್ಷಮಿಸಿದ.
ಇದಾದ ಬಳಿಕ ಶಿವನನ್ನು ಮುಕ್ಕಣ್ಣ, ತ್ರಿಲೋಚನ ಇತ್ಯಾದಿ ಹೆಸರುಗಳಿಂದ ಕರೆಯಲಾರಂಭಿಸಿದರು. ಶಿವ ತನ್ನ ಮೂರನೇ ಕಣ್ಣನ್ನು ಕ್ರೋಧಿತನಾದಾಗ ಮಾತ್ರ ತೆಗೆಯುತ್ತಾನೆಂಬ ನಂಬಿಕೆ ಇದೆ. ಮುಕ್ಕಣ್ಣನ ಮೂರನೇಯ ಕಣ್ಣು ತೆರೆದಾಗ, ಲೋಕದ ವಿನಾಶವಾಗುತ್ತದೆ ಎಂದು ಹೇಳಲಾಗಿದೆ.

- Advertisement -

Latest Posts

Don't Miss