- Advertisement -
ಕರ್ನಾಟಕ ಟಿವಿ : ಜನ ಲಾಕ್ ಡೌನ್ ಇದ್ದಾಗಲೇ ಸರಿಯಾಗಿ ಮಾತು ಕೇಳ್ತಿರಲಿಲ್ಲ. ಇನ್ನು ಲಾಕ್ ಡೌನ್ ತೆಗೆದ್ರೆ ಅವರನ್ನ ಕಂಟ್ರೋಲ್ ಮಾಡೋಕೆ ಆಗಲ್ಲ. ಹೀಗಾಗಿ ಲಾಕ್ ಡೌನ್ ಮುಂದುವರೆಸಿ ವಿನಾಯ್ತಿಗಳನ್ನ ಘೋಷಣೆ ಮಾಡುವಂತೆ ದೆಹಲಿ, ಒಡಿಶಾ, ಗುಜರಾತ್, ಕರ್ನಾಟಕ ಸಿಎಂಗಳು ಈ ಅಭಿಪ್ರಾಯವನ್ನ ಮಂಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಿಗಿ ಹಿಡಿತದ ಲಾಕ್ ಡೌನ್ ಜಾರಿ ಮಾಡಿ ಉಳಿದೆಡೆ ಮೊದಲಿನಂತೆ ಜನಸಾಮಾನ್ಯರಿಗೆ ಮಾಸ್ಕ್ ಕಡ್ಡಾಯ, ಸೋಷಿಯಲ್ ಡಿಸ್ಟೆನ್ಸಿಂಗ್ ಸೇರಿದಂತೆ ಸಭೆ. ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಏರಿ ಲಾಖ್ ಡೌನ್ ಮುಮದುವರೆಸಿದ್ರೆ ಆರ್ಥಿಕತೆಗೂ ಸಹಾಯವಾಗುತ್ತೆ, ಜನರಿಗೂ ಅನುಕೂಲವಾಗಗುತ್ತೆ ಅಂತ ಅಭಿಪ್ರಾಯ ತಿಳಿಸಿದ್ದಾರೆ.
- Advertisement -