ಕೆಲವರಿಗೆ ಸುಮ್ಮ ಸುಮ್ಮನೆ ಸುಳ್ಳು ಹೇಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಸುಳ್ಳು ಹೇಳದಿದ್ರೆ ನಿದ್ದೆನೇ ಬರಲ್ಲ. ಮತ್ತೆ ಕೆಲವರು ಬಿಲ್ಡಪ್ ತೆಗೆದುಕೊಳ್ಳಲು ಸುಳ್ಳು ಹೇಳುತ್ತಾರೆ. ಮತ್ತೆ ಕೆಲವರು ಕಷ್ಟದಿಂದ ಪಾರಾಗಲು ಮತ್ತು ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಸುಳ್ಳು ಹೇಳುತ್ತಾರೆ. ಇಂದು ನಾವು ಬಿಲ್ಡಪ್ ತೆಗೆದುಕೊಳ್ಳಲು ಹೇಳಿದ ಸುಳ್ಳು ಹೇಗೆ ಅವನ ಜೀವನಕ್ಕೆ ಮುಳ್ಳಾಯಿತು ಎಂಬ ಕಥೆಯೊಂದನ್ನ ಹೇಳಲಿದ್ದೇವೆ.
ಒಂದೂರಲ್ಲಿ ಓರ್ವ ಶಕ್ತಿ ಶಾಲಿ ವ್ಯಕ್ತಿ ಇದ್ದ. ಅವನ ಹೆಸರು ಪರಮ ಗುರೂಜಿ. ಅವನ ಬಳಿ ಜಾದೂವಿನ ಮಂತ್ರವಿತ್ತು. ಅದನ್ನು ಹೇಳಿದ ತಕ್ಷಣ, ಅವನು ಏನಂದುಕೊಂಡಿರುತ್ತಾನೆ ಅದು ನೆರವೇರುತ್ತಿತ್ತು. ಅದೇ ಮಂತ್ರವನ್ನು ಉಪಯೋಗಿಸಿ ಅವನು ಬದುಕುತ್ತಿದ್ದ. ಅವನು ಅವನ ಮನೆಯ ಬಳಿ ಮಾವಿನ ಮರವೊಂದನ್ನು ನೆಟ್ಟಿದ್ದ. ಬೇಸಿಗೆ ಸಮಯದಲ್ಲಿ 4 ತಿಂಗಳು ಅದರಲ್ಲಿ ಬೆಳೆಯುತ್ತಿದ್ದ ಮಾವಿನ ಹಣ್ಣನ್ನು ಮಾರಿ ಜೀವನ ಸಾಗಿರುತ್ತಿದ್ದ.
ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 1
ಮಾವಿನ ಹಣ್ಣಿನ ಸೀಸನ್ ಮುಗಿದ ಬಳಿಕ ಮಂತ್ರೋಚ್ಛಾರಣೆ ಮಾಡಿ, ಅದರಲ್ಲಿ ಹಣ್ಣಾಗುವಂತೆ ಮಾಡುತ್ತಿದ್ದ. ಅವನು ಸೀಸನ್ ಮುಗಿದ ಮೇಲೂ ಹೇಗೆ ಹಣ್ಣು ಮಾರುತ್ತಾನೆ. ಮತ್ತು ಆ ಹಣ್ಣು ಇಷ್ಟು ಸ್ವಾದಿಷ್ಟವಾಗಿರಲು ಕಾರಣವೇನು ಎಂದು ಅದೇ ಊರಿನ ಯುವಕನೋರ್ವನಿಗೆ ಆಶ್ಚರ್ಯವಾಗುತ್ತದೆ. ಇದರ ಗುಟ್ಟು ತಿಳಿಯಲು ಅವನು ಪರಮ ಗುರೂಜಿಯ ಮನೆಗೆ ಹೋಗುತ್ತಾನೆ. ಅವನ ಮಮತ್ತು ಅವನ ಪತ್ನಿಯ ಸೇವೆ ಮಾಡುತ್ತಾನೆ. ಕೊನೆಗೆ ಹಣ್ಣಿನ ರಹಸ್ಯ ಕೇಳುತ್ತಾನೆ.
ಪರಮ ಗುರೂಜಿ ಮೊದ ಮೊದಲು ಆ ಮಂತ್ರ ಹೇಳಿಕೊಡಲು ಒಪ್ಪುವುದಿಲ್ಲ. ಮತ್ತೆ ಹೇಗೋ ಆ ಯುವಕ ಮನವೊಲಿಸಿ, ಮಂತ್ರ ಹೇಳಿಸಿಕೊಳ್ಳುತ್ತಾನೆ. ನಂತರ ಪರಮ ಗುರೂಜಿ ಒಂದು ಮಾತು ಹೇಳುತ್ತಾನೆ. ನೀನು ಈ ಮಂತ್ರ ಉಚ್ಛರಿಸಿ ಮಾವಿನ ಹಣ್ಣನ್ನು ಪಡೆಯಬಹುದು. ನಾನು ನಿನಗೆ ಆ ಗಿಡ ಬೀಜವನ್ನು ನೀಡುತ್ತೇನೆ. ಅದು ಕೆಲವೇ ಕೆಲವು ದಿನಗಳಲ್ಲಿ ಫಲ ನೀಡುತ್ತದೆ. ಆದ್ರೆ ನಿನ್ನ ಬಳಿ ಯಾರಾದ್ರೂ ಇದು ಹೇಗೆ ಸಾಧ್ಯವಾಯಿತು..? ಈ ಮಂತ್ರ ಹೇಳಿಕೊಟ್ಟವರು ಯಾರೆಂದು ಕೇಳಿದರೆ ಪರಮ ಗುರೂಜಿ ಎಂದು ಹೇಳಬೇಕು. ನೀನೇನಾದರೂ ನಾನು ನನ್ನ ಸ್ವಂತ ಶಕ್ತಿಯಿಂದ ಕಲಿತೆ, ಅಥವಾ ಬೇರೆಯವರು ಹೇಳಿಕೊಟ್ಟರು ಎಂದು ಸುಳ್ಳು ಹೇಳಿದ್ದಲ್ಲಿ, ಆ ಶಕ್ತಿ ಎಲ್ಲ ಕುಂದಿಹೋಗುತ್ತದೆ ಎಂದು ಹೇಳುತ್ತಾರೆ.
ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 2
ಯುವಕ ಸರಿ ಹಾಗೇ ಆಗಲಿ ಎಂದು ಹೇಳಿ ಹೊರಡುತ್ತಾನೆ. ಯುವಕ ತನ್ನ ಮನೆಗೆ ಆ ಬೀಜಗಳನ್ನು ತೆಗೆದುಕೊಂಡು ಹೋಗಿ ಗಿಡ ನೆಡುತ್ತಾನೆ. ಫಲ ಬರುತ್ತದೆ. ತಾನೂ ಮಾವಿನ ಹಣ್ಣನ್ನು ಮಾರಲು ಶುರು ಮಾಡುತ್ತಾನೆ. ಒಮ್ಮೆ ರಾಜರಿಗೆ ಹತ್ತಿರವಾಗಿದ್ದ ವ್ಯಕ್ತಿ ಇವನ ಬಳಿ ಹಣ್ಣನ್ನು ಖರೀದಿಸಿ, ರಾಜರಿಗೆ ಮಾವಿನ ಹಣ್ಣನ್ನು ನೀಡುತ್ತಾನೆ. ರಾಜ ಆ ಹಣ್ಣನ್ನು ತಿಂದು, ಈ ಹಣ್ಣು ಎಷ್ಟು ಸ್ವಾದಿಷ್ಟವಾಗಿದೆ. ನನಗೆ ಪ್ರತಿದಿನ ಈ ಹಣ್ಣು ಬೇಕು ಎಂದು ಹೇಳುತ್ತಾನೆ. ಆ ವ್ಯಕ್ತಿ ಯುವಕನ ಬಳಿ ಹೋಗಿ, ರಾಜರಿಗೆ ಪ್ರತಿದಿನ ಹಣ್ಣಿನ ಬುಟ್ಟಿ ಕಳುಹಿಸು ಎಂದು ಹೇಳುತ್ತಾನೆ. ಹಾಗಾದ್ರೆ ಮುಂದೇನಾಗತ್ತಾ..? ಯುವಕ ರಾಜನಿಗೆ ಹಣ್ಣು ಮಾರಿ ಶ್ರೀಮಂತನಾಗುತ್ತಾನಾ..? ಇಲ್ಲಿ ಯಾರು ಸುಳ್ಳು ಹೇಳಿ, ಜೀವನ ಹಾಳು ಮಾಡಿಕೊಳ್ಳುತ್ತಾರೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..