Mandya News: ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅವಳಿ ಮಕ್ಕಳು ಐಸ್ಕ್ರೀಮ್ ತಿಂದು ಸಾವನ್ನಪ್ಪಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಆ ಮಕ್ಕಳು ಐಸ್ಕ್ರೀಮ್ ತಿಂದು ಸಾವನ್ನಪ್ಪಿರಲಿಲ್ಲ. ಬದಲಾಗಿ, ಅವರು ಊಟ ಮಾಡಿದ ಆಹಾರದಲ್ಲಿ ತಾಯಿಯೇ ಜಿರಲೆ ಸಾಯಿಸುವ ವಿಷ ಹಾಕಿದ್ದಳು. ತನ್ನ ಮೂವರು ಮಕ್ಕಳಿಗೂ ವಿಶಪ್ರಾಷನ ಮಾಡಿಸಿ, ತಾನೂ ವಿಷ ಸೇವಿಸಿದ್ದಳು. ಆದರೆ ಆಕೆ ಮತ್ತು ಆಕೆಯ ಮೊದಲ ಮಗಳು ಬದುಕಿ ಉಳಿದಿದ್ದು, ಅವಳಿ ಮಕ್ಕಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಪೂಜಾ ವಿಷ ಹಾಕಿದ ತಾಯಿಯಾಗಿದ್ದು, ತ್ರಿಶಾ, ತ್ರಿಶೂಲ್ ಸಾವನ್ನಪ್ಪಿದ್ದ ಗಂಡು ಹೆಣ್ಣು ಅವಳಿ ಮಕ್ಕಳಾಗಿದ್ದಾರೆ. ಪೂಜೆ ಪತಿ ಪ್ರಸನ್ನ ಜೊತೆ ಪದೇ ಪದೇ ಜಗಳವಾಡುತ್ತಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆ ಮಕ್ಕಳಿಗೆ ವಿಷ ಹಾಕಿ, ತಾನೂ ಸಾಯಬೇಕು ಎಂದು ಪೂಜಾ ನಿರ್ಧರಿಸಿದ್ದಳು. ಹಾಾಗಾಗಿ ಊಟದಲ್ಲಿ ವಿಷ ಹಾಕಿ, ತಾನೂ ಸೇವಿಸಿ, ಮಕ್ಕಳಿಗೂ ತಿನ್ನಿಸಿದ್ದಳು. ಬಳಿಕ ಮಕ್ಕಳು ಐಸ್ಕ್ರೀಮ್ ತಿಂದಿದ್ದವು.
ಒಂದೂವರೆ ವರ್ಷದ ಅವಳಿ ಮಕ್ಕಳು ಮತ್ತು ಪೂಜಾ ಮತ್ತು ಅವಳ ಮೊದಲ ಮಗಳು ಅನಾರೋಗ್ಯಕ್ಕೀಡಾಗಿದ್ದು. ನಾಲ್ವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಾಗಿತ್ತು. ಪೂಜಾ ಮತ್ತು ಮೊದಲ ಮಗಳು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಅವಳಿ ಮಕ್ಕಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗಲೇ, ಸತ್ಯ ಹೊರ ಬಂದಿದೆ.
ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು
ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!
ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..