ಯಾವುದೇ ಹಬ್ಬ ಬಂದರೂ ಸ್ಯಾಂಡಲ್ ವುಡ್ ಸ್ಟಾರ್ಸ್ ಆ ಹಬ್ಬವನ್ನ ಸಖತ್ ಆಗೇ ಆಚರಿಸುತ್ತಾರೆ. ಅಂಥವರಲ್ಲಿ ಕೆಲ ನಟ ನಟಿಯರು ಹೇಗೆ ಯುಗಾದಿ ಆಚರಿಸಿದರು ಅಂತಾ ನಾವಿಲ್ಲಿ ಹೇಳಿದ್ದೇವೆ..
ರಾಧಿಕಾ ಪಂಡಿತ್ ತಮ್ಮ ಫ್ಯಾಮಿಲಿ ಜೊತೆ ಯುಗಾದಿ ಹಬ್ಬವನ್ನ ಆಚರಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ರಾಧಿಕಾ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಅಲ್ಲದೇ, ಯುಗಾದಿ, ಗುಡಿ ಪಾಡ್ವಾ, ಚೈತ್ರ ನವರಾತ್ರಿಯ ಶುಭಾಶಯಗಳು ಎಂದು ಹೇಳಿದ್ದಾರೆ. ಅವರ ಸೆಲೆಬ್ರೇಷನ್ ಈ ರೀತಿ ಇತ್ತು..
ರಾಧಿಕಾ ಪಂಡಿತ್ ಯುಗಾದಿ ಸೆಲೆಬ್ರೆಷನ್
ನಟಿ ಅಮೂಲ್ಯಾ ಕೂಡ ಯುಗಾದಿ ಹಬ್ಬವನ್ನ ಆಚರಿಸಿದ್ದಾರೆ.. ಗುಲಾಬಿ ಮತ್ತು ಕೇಸರಿ ಬಣ್ಣದ ಸೀರೆ ತೊಟ್ಟು, ಫೋಟೋಗೆ ಪೋಸ್ ಕೊಟ್ಟಿದ್ದಾರೆ..
ಕಾಂತಾರ ಸಿನಿಮಾ ನಿರ್ದೇಶಕ ಮತ್ತು ಹೀರೋ ರಿಷಭ್ ಶೆಟ್ಟಿ ಕೂಡ, ಕಾಂತಾರ 2 ಕಥೆ ಬರೆಯಲು ಇಂದು ಶುರು ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು, ಕಾಂತಾ ಬರವಣಿಗೆಯ ಆದಿ ಎಂದು ಹೇಳಿದ್ದಾರೆ.
ನಟಿ ರಂಜಿನಿ ರಾಘವನ್ ಹೊಸ ಫೋಟೋ ಶೂಟ್ ಮಾಡಿಸಿದ್ದು, ಎಲ್ಲರಿಗೂ ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು.. ಹೊಸ ವರ್ಷ ಹೊಸ ಹರುಷ ತರಲಿ ಎಂದು ವಿಶ್ ಮಾಡಿದ್ದಾರೆ..
ನಟ ದರ್ಶನ್ ಕೂಡ ಯುಗಾದಿ ಹಬ್ಬದ ಶುಭ ಕೋರಿದ್ದು, ತಮ್ಮ ಮುಂದಿನ ಸಿನಿಮಾವಾದ ಕಾಟೇರ ಸಿನಿಮಾದ ನಟಿಯನ್ನ ಪರಿಚಯ ಮಾಡಿಸಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ಒಳ್ಳೆ ದಿವ್ಸ ನಮ್ ‘ಪ್ರಭಾವತಿ’ ಮೊದುಲ್ನೇ ಪರಿಚಯ ಇಲ್ಲಿದೆ ಎಂದು ದರ್ಶನ್ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
ದರ್ಶನ್ ತೂಗುದೀಪ್ ಯುಗಾದಿ ವಿಶಸ್..
ಇನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಎಲ್ಲರಿಗೂ ಯುಗಾದಿ ವಿಶ್ ಮಾಡಿದ್ದು, ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶಸ್..
ನಟ ಶಿವಣ್ಣ ಯುಗಾದಿ ವಿಶಸ್ ತಿಳಿಸಿದ್ದು, ತಮ್ಮ ಮುಂದಿನ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಘೋಸ್ಟ್ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದು, ಬ್ಲೇಸರ್ ಹಾಕಿ, ಗನ್ ಹಿಡಿದು ಶಿವಣ್ಣ ಪೋಸ್ ಕೊಟ್ಟಿದ್ದಾರೆ.