Health: ದಿನಸಿ, ಹಣ್ಣು, ಹಂಪಲನ್ನು ಖರೀದಿಸಬೇಕೆಂದು ಹಲವರು ಮಾರ್ಟ್ಗಳಿಗೆ ಹೋಗುತ್ತಾರೆ. ಆಗ ಅವರು ಮಾಡುವ ಕೆಲವು ತಪ್ಪುಗಳೇ, ಪರಿಸರಕ್ಕೂ ಮತ್ತು ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಹಾಗಾದ್ರೆ ನಾವು ಮಾರ್ಟ್ಗೆ ಹೋದಾಗ, ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಮಾರ್ಟ್ನಲ್ಲಿ ಎಲ್ಲ ಪುಡ್ ಸೆಕ್ಷನ್ ಹತ್ತಿರ ಹೆಚ್ಚಾಗಿ ಹೋಗುವುದು. ಕೆಲವರು ಬರೀ 4 ಸಾವಿರ ರೂಪಾಯಿಯ ದಿನಸಿ, ಹಣ್ಣು, ತರಕಾರಿ ತೆಗೆದುಕೊಂಡು ಬರಬೇಕು ಎಂದು ಮಾರ್ಟ್ಗೆ ಹೋಗುತ್ತಾರೆ. ಆದರೆ ಅಲ್ಲಿ 6 ಸಾವಿರ ರೂಪಾಯಿ ಬಿಲ್ ಆಗುತ್ತದೆ. ಇದಕ್ಕೆ ಕಾರಣವೇನಂದ್ರೆ, ಕಂಡದ್ದೆಲ್ಲಾ ಕೊಂಡುಕೊಳ್ಳಬೇಕು ಅಂತಾ ಅನ್ನಿಸುವುದು. ಅದರಲ್ಲೂ ಫುಡ್ ಸೆಕ್ಷನ್ ಹತ್ತಿರ ಹೋದಾಗ, ಹಲವರಿಗೆ ಅದರ ಪ್ಯಾಕೇಜ್ ನೋಡಿಯೇ ಅದನ್ನ ಕೊಂಡು ತಿನ್ನಬೇಕು ಎನ್ನಿಸುತ್ತದೆ. ಮತ್ತು ಇಂಥ ತಿನಿಸೆಲ್ಲ ಆರೋಗ್ಯಕ್ಕೆ ಹಾನಿಕಾರಕ. ಅಲ್ಲದೇ, ಇದಕ್ಕೆ ಬಳಸಿದ ಪ್ಯಾಕೇಟ್ಗಳು, ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ.
ಎರಡನೇಯ ತಪ್ಪು ಕಟ್ ಮಾಡಿ, ಪ್ಲಾಸ್ಟಿಕ್ನಲ್ಲಿ ಸುತ್ತಿಟ್ಟ ತರಕಾರಿ, ಹಣ್ಣು ಹಂಪಲನ್ನ ಕೊಂಡು ಕೊಳ್ಳುವುದು. ಸಿಟಿಗಳಲ್ಲಿ, ಹೆಚ್ಚಿನ ಜನ ಈ ರೀತಿ ಕಟ್ ಮಾಡಿಟ್ಟ ತರಕಾರಿಗಳನ್ನ ಕೊಂಡುಕೊಂಡು, ಬಳಸುತ್ತಾರೆ. ಆದರೆ ಇದು ತಪ್ಪು. ಮೊದಲನೇಯದಾಗಿ, ಕಟ್ ಮಾಡಿದಾಗ, ಹಣ್ಣು, ತರಕಾರಿಗಳ ಫ್ರೆಶ್ನೆಸ್ ಹಾಳಾಗಿ ಹೋಗುತ್ತದೆ. ಅದರಲ್ಲಿ ಯಾವುದೇ ಆರೋಗ್ಯಕರ ಅಂಶವಿರುವುದಿಲ್ಲ. ಎರಡನೇಯದಾಗಿ, ಅದನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿಟ್ಟ ಕಾರಣ, ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ.
ಮೂರನೇಯ ತಪ್ಪು ಇಂಪೋರ್ಟೆಡ್ ಹಣ್ಣು, ತರಕಾರಿಗಳನ್ನ ಕೊಂಡುಕೊಳ್ಳುವುದು. ಇಂಪೋರ್ಟೆಡ್ ಅಂದ್ರೆ, ಅದು ಹೊರದೇಶದಿಂದ ಬಂದಿರುತ್ತದೆ. ಅದು ಹೊರದೇಶದಿಂದ ಪ್ಯಾಕ್ ಆಗಿ, ಇಂಡಿಯಾಗೆ ಬಂದು ತಲುಪಲು ಕೆಲ ದಿನಗಳು, ಮಾರ್ಟ್ನಲ್ಲಿ ನಿಮ್ಮ ಕೈ ತಲುಪಲು ಇನ್ನಷ್ಟು ದಿನಗಳು ತೆಗೆದುಕೊಳ್ಳುತ್ತದೆ. ಹಾಗಾಗಿ ಅದು ಅಲ್ಲಿಯವರೆಗೂ ಫ್ರೆಶ್ ಆಗಿರಲು, ಅದಕ್ಕೆ ಕೆಮಿಕಲನ್ನು ಇಂಜೆಕ್ಟ್ ಮಾಡಲಾಗುತ್ತದೆ. ಅಂಥ ಹಣ್ಣು, ತರಕಾರಿಗಳನ್ನು ಬಳಸಿದರೆ, ನಮ್ಮ ಆರೋಗ್ಯ ಹಾಳಾಗಿ ಹೋಗುತ್ತದೆ.
ನಾಲ್ಕನೇಯ ತಪ್ಪು, ನೀವು ಹಣ್ಣು, ತರಕಾರಿ ಖರೀದಿಸುವಾಗ, ಪ್ಲಾಸ್ಟಿಕ್ ಬ್ಯಾಗ್ ಬಳಸಬೇಡಿ. ನೀವು ಮಾರ್ಟ್ಗೆ ಹೋಗುವಾಗ, ನಿಮ್ಮದೇ ಬ್ಯಾಗ್ ತೆಗೆದುಕೊಂಡು ಹೋಗಬೇಕು. ಅದರಲ್ಲೂ ಬಟ್ಟೆ ಬ್ಯಾಗ್ ಖರೀದಿಸಬೇಕು. ಬಟ್ಟೆ ಬ್ಯಾಗ್ನಲ್ಲಿ ಹಣ್ಣು, ತರಕಾರಿ, ದಿನಸಿ ಹಾಕಿದರೆ, ಅದು ಆರೋಗ್ಯವಾಗಿರುತ್ತದೆ.