Friday, June 20, 2025

Latest Posts

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

- Advertisement -

Spiritual: ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಚಾರ್‌ಧಾಮ್ ಕೂಡ ಇದೆ. ಚಾರ್‌ಧಾಮ್ ಅಂತಾ ಹೇಳುವುದು ಯಾಕೆ ಅಂದ್ರೆ, ಇವು ನಾಲ್ಕು ದಿಕ್ಕಿಗಿರುವ ಬೇರೆ ಬೇರೆ ದೇವಸ್ಥಾನಗಳು. ಈ ನಾಲ್ಕು ದಿಕ್ಕಿಗೆ ಹೋಗಿ, ನಾಲ್ಕು ದೇವಸ್ಥಾನದ ದೇವರ ದರ್ಶನ ಮಾಡಿದಾಗ, ಚಾರ್‌ಧಾಮ್ ದರ್ಶನವಾದಂತೆ. ಹಾಗಾದರೆ ಹಿಂದೂಗಳು ಚಾರ್‌ಧಾಮ್ ದರ್ಶನ ಮಾಡಬೇಕು ಅಂತಾ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಧಾಮ ಭದ್ರಿನಾಥ್. ಶ್ರೀವಿಷ್ಣುವನ್ನು ಪೂಜಿಸುವ ಈ ಸ್ಥಳವನ್ನು ಭದ್ರಿನಾಥ ಧಾಮವೆನ್ನುತ್ತಾರೆ. ಉತ್ತರಾಖಂಡದ ಅಲಖ್‌ನಾಥ್ ನದಿಯ ತೀರದಲ್ಲಿ ಈ ದೇವಸ್ಥಾನವಿದೆ. ಭದರಿಯ ದರ್ಶನ ಮಾಡಿದವರಿಗೆ ಉದರಿಯ ಅಗತ್ಯವಿಲ್ಲವೆಂಬ ಮಾತಿದೆ. ಅಂದರೆ, ಭದ್ರಿನಾಥನ ದರ್ಶನ ಮಾಡಿದವರು ಮತ್ತೆ ಜನ್ಮ ತಾಳುವ ಅವಶ್ಯಕತೆ ಇಲ್ಲ. ಅವರಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಏಪ್ರಿಲ್‌ ಮತ್ತು ಮೇ ತಿಂಗಳ ಮಧ್ಯದಲ್ಲಿ ಬದರಿನಾಥ ಮತ್ತು ಕೇದಾರನಾಥ ದೇವಸ್ಥಾನವನ್ನು ತೆರೆಯಲಾಗುತ್ತದೆ. ದೀಪಾವಳಿ ಪಾಡ್ಯದ ದಿನ ಬಾಗಿಲು ಮುಚ್ಚಲಾಗುತ್ತದೆ. ಮತ್ತೆ 6 ತಿಂಗಳ ಬಳಿಕವೇ ಈ ಬಾಗಿಲನ್ನು ತೆಗೆಯಲಾಗುತ್ತದೆ.

ಎರಡನೇಯ ಧಾಮ ಪುರಿ ಜಗನ್ನಾಥ್. ಓಡಿಸ್ಸಾದ ಪುರಿ ಎಂಬಲ್ಲಿರುವ ಜಗನ್ನಾಥನ ಸನ್ನಿಧಿಯೇ ಪುರಿ ಜಗನ್ನಾಥ್. ಇಲ್ಲಿ ಶ್ರೀಕೃಷ್ಣನೊಂದಿಗೆ, ಬಲರಾಮ, ಸುಭದ್ರೆಯನ್ನ ಪೂಜಿಸಲಾಗುತ್ತದೆ. ಇಲ್ಲಿ ಪ್ರತೀವರ್ಷ ಆಷಾಢ ಮಾಸದಲ್ಲಿ ಜಗನ್ನಾಥನ ಯಾತ್ರೆ ನಡೆಯುತ್ತದೆ. ವಿಶ್ವಪ್ರಸಿದ್ಧವಾದ ಈ ಯಾತ್ರೆಗೆ, ದೇಶ ವಿದೇಶಗಳಲ್ಲಿ ಭಕ್ತರು ಬರುತ್ತಾರೆ.

ಮೂರನೇಯದಾಗಿ ರಾಮೇಶ್ವರಂ. ತಮಿಳುನಾಡಿನಲ್ಲಿರುವ ಈ ಸ್ಥಳ ಚಾರ್‌ಧಾಮ್‌ಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ರಾಮ ಶಿವನ ಪೂಜೆ ಮಾಡಿದ್ದನಂತೆ. ಶಿವಲಿಂಗವನ್ನು ಮಾಡಿ, ರಾಮ ಶಿವನ ಪೂಜೆ ಮಾಡಿದ್ದಕ್ಕೆ, ಈ ಸ್ಥಳಕ್ಕೆ ರಾಮೇಶ್ವರಂ ಎಂಬ ಹೆಸರು ಬಂತು. ಉತ್ತರದಲ್ಲಿ ಕಾಶಿ ಎಷ್ಟು ಪವಿತ್ರ ಸ್ಥಳವೆಂದು ಹೆಸರುವಾಸಿಯಾಗಿದೆಯೋ, ಅದೇ ರೀತಿ, ದಕ್ಷಿಣದಲ್ಲಿ ರಾಮೇಶ್ವರಂ ಪವಿತ್ರ ಸ್ಥಾನವಾಗಿದೆ.

ನಾಲ್ಕನೇಯ ಧಾಮವೆಂದರೆ, ದ್ವಾರಕಾ. ಗುಜರಾತ್‌ ರಾಜ್ಯದಲ್ಲಿರುವ ದ್ವಾರಕಾದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಇಲ್ಲಿ ಕೃಷ್ಣನಿಗೆ ದ್ವಾರಕಾಧೀಶನೆಂದು ಕರೆಯಲಾಗುತ್ತದೆ. ದ್ವಾರಕೆ ಶ್ರೀಕೃಷ್ಣನ ವಾಸಸ್ಥಳವಾಗಿದ್ದು, ಇದೇ ಜಾಗದಲ್ಲಿ ಶ್ರೀಕೃಷ್ಣ ತನ್ನ ಬಾಲ ಲೀಲೆಗಳನ್ನು ತೋರಿಸಿದ್ದ. ಬಾಲ್ಯ ಕಳೆದಿದ್ದ ಎನ್ನಲಾಗುತ್ತದೆ. ಇನ್ನು ಚಾರ್‌ಧಾಮ್ ಯಾತ್ರೆ ಮಾಡಿದರೆ, ವೈಕುಂಠ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಏಕೆಂದರೆ, ಭದ್ರಿನಾಥದಲ್ಲಿ ಶ್ರೀವಿಷ್ಣು, ಪುರಿ ಜಗನ್ನಾಥ್‌ದಲ್ಲಿ ಮತ್ತು ದ್ವಾರಕಾದಲ್ಲಿ ಶ್ರೀಕೃಷ್ಣನನ್ನು ಮತ್ತು ರಾಮೇಶ್ವರಂನಲ್ಲಿ ರಾಮ ಮತ್ತು ಶಿವನನ್ನು ಪೂಜಿಸಲಾಗುತ್ತದೆ. ಹಾಗಾಗಿ ಎಲ್ಲ ದೇವರನ್ನೂ ಪೂಜಿಸಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ.

ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..

ಉತ್ತಮ ಸಂತಾನಕ್ಕಾಗಿ ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು..

ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..

- Advertisement -

Latest Posts

Don't Miss