Spiritual: ಕೋರ್ಟ್ ಕಟಕಟೆಯಲ್ಲಿ ನಿಂತಾಗ, ಅವರ ಎದುರು ಭಗವದ್ಗೀತೆಯ ಪುಸ್ತಕ ತಂದಿಡಲಾಗುತ್ತದೆ. ಮತ್ತು ಅದರ ಮೇಲೆ ಪ್ರಮಾಣ ಮಾಡಿ, ನಾನು ಏನು ಹೇಳುತ್ತೇನೋ ಅದೆಲ್ಲವೂ ಸತ್ಯ ಎಂದು ಹೇಳಿಸಲಾಗುತ್ತದೆ. ಹಾಗಾದರೆ ಯಾಕೆ ಹೀಗೆ ಮಾಡಲಾಗುತ್ತದೆ.. ಇದರ ಹಿಂದಿನ ಸತ್ಯವೇನು ಎಂದು ತಿಳಿಯೋಣ ಬನ್ನಿ..
ಭಗವದ್ಗೀತೆಯಲ್ಲಿ ಶ್ರೀವಿಷ್ಣುವಿನ ಅಂಗಗಳ ವರ್ಣನೆ ಇದೆ. ಒಂದರಿಂದ ಐದನೇಯ ಅಧ್ಯಾಯದವರೆಗೆ ವಿಷ್ಣುವಿನ ಮುಖದ ವರ್ಣನೆ ಇದೆ. ಆರರಿಂದ 15ರವರೆಗೆ ನನ್ನ 10 ಭುಜಗಳ ವರ್ಣನೆ ಇದೆ. 16ನೇ ಅಧ್ಯಾಯದಲ್ಲಿ ವಿಷ್ಣುವಿನ ಉದರದ ವರ್ಣನೆ, 17 ಮತ್ತು 18ನೇ ಅಧ್ಯಾಯದಲ್ಲಿ ಶ್ರೀವಿಷ್ಣುವಿನ ಎರಡು ಚರಣ ಕಮಲಗಳ ವರ್ಣನೆ ಇದೆ. ಹಾಗಾಗಿ ಯಾರು ಭಗವದ್ಗೀತೆಯ ಶ್ಲೋಕಗಳನ್ನು ಪಠಣೆ ಮಾಡುತ್ತಾರೋ, ಅವರಿಗೆ ಸಕಲ ಪುಣ್ಯ ಲಭ್ಯವಾಗುತ್ತದೆ. ಅವನು ಜೀವನ ಪಾಠವನ್ನು ಕಲಿಯುತ್ತಾನೆ. ಮತ್ತು ಅತ್ಯದ್ಭುತ ಜೀವನ ನಡೆಸುತ್ತಾನೆ.
ಈ ಬಗ್ಗೆ ಒಂದು ಕಥೆ ಇದೆ. ಈ ಕಥೆಯನ್ನು ಶ್ರೀವಿಷ್ಣು ಲಕ್ಷ್ಮೀ ದೇವಿಗೆ ಹೇಳುತ್ತಾನೆ. ಒಂದೂರಿನಲ್ಲಿ ಸುಶರ್ಮನೆಂಬ ಘೋರ ಪಾಪಿ ಇದ್ದ. ಅವನು ಹಾವು ಕಚ್ಚಿ ಸಾವನ್ನಪ್ಪಿದ. ಅವನಿಗೆ ನರಕ ಪ್ರಾಪ್ತಿಯಾಯಿತು. ನರಕದಲ್ಲಿ ಅವನಿಗೆ ಕಠಿಣ ಶಿಕ್ಷೆ ನೀಡಲಾಗುತ್ತಿತ್ತು. ಬಳಿಕ ಎತ್ತಿನ ಜನ್ಮ ಸಿಕ್ಕಿತು. ಎತ್ತಾಗಿ ಸುಶರ್ಮ ತನ್ನ ಒಡೆಯನ ಸೇವೆ ಮಾಡುತ್ತಿದ್ದ. ಆದರೆ ಎತ್ತಿಗೆ ಕಡಿಮೆ ಊಟ ಸಿಗುತ್ತಿತ್ತು. ಹೆಚ್ಚು ಕೆಲಸ ಮಾಡಿಸಲಾಗುತ್ತಿತ್ತು. ಒಂದು ದಿನ ಸರಿಯಾಗಿ ಆಹಾರ ಸಿಗದೇ, ಎತ್ತು ಸತ್ತು ಹೋಯಿತು.
ಆ ಎತ್ತಿನ ಆತ್ಮಕ್ಕೆ ಶಾಂತಿ ಸಿಗಲು, ಅಲ್ಲಿದ್ದ ಜನ ತಮ್ಮ ಪುಣ್ಯವನ್ನು ಅದಕ್ಕೆ ದಾನ ಮಾಡುತ್ತಿದ್ದರು. ಅದರಲ್ಲಿ ಓರ್ವ ವೇಶ್ಯೆಯೂ ತನ್ನ ಪುಣ್ಯ ದಾನ ಮಾಡಿದಳು. ಆ ಎತ್ತು ಯಮಲೋಕಕ್ಕೆ ಹೋದಾಗ, ಅಲ್ಲಿ ಎಲ್ಲರಿಗಿಂತ ಹೆಚ್ಚು ಪುಣ್ಯವನ್ನು ವೇಶ್ಯೆ ಎತ್ತಿಗೆ ದಾನ ಮಾಡಿದ್ದಳು. ಇದರಿಂದ ಆ ಎತ್ತಿಗೆ ನರಕದಿಂದ ಮುಕ್ತಿ ಸಿಕ್ಕಿತು. ಅಲ್ಲದೇ ಮತ್ತೆ ಮನುಷ್ಯ ಜನ್ಮ ಸಿಕ್ಕಿತು. ಆದರೆ ಅದು ಮನುಷ್ಯನಾಗಿ ಜನ್ಮ ತಾಳುವ ಮೊದಲು ಅದರ ಆಸೆ ಏನೆಂದು ಯಮ ಕೇಳಿದ.
ಅದಕ್ಕೆ ಆ ಎತ್ತು, ನನಗೆ ಮನುಷ್ಯ ಜನ್ಮ ಸಿಕ್ಕರೂ, ನನ್ನ ಪೂರ್ವಜನ್ಮದ ಕರ್ಮಗಳೆಲ್ಲ ನನಗೆ ನೆನಪು ಉಳಿಯಬೇಕು ಎಂದು ಕೇಳುತ್ತದೆ. ಅದಕ್ಕೆ ಯಮ ತಥಾಸ್ತು ಎನ್ನುತ್ತಾನೆ. ಬಳಿಕ ಎತ್ತಿಗೆ ಮನುಷ್ಯ ಜನ್ಮ ಸಿಗುತ್ತದೆ. ಅವನು ದೊಡ್ಡವನಾದ ಮೇಲೆ, ಅವನಿಗೆ ಪುಣ್ಯ ನೀಡಿದ್ದ ವೇಶ್ಯೆಯ ಬಳಿ ಹೋದ. ಮತ್ತು ನೀನು ಓರ್ವ ವೇಶ್ಯೆ, ಆದರೆ ನಿನಗೆ ಹೇಗೆ ಅಷ್ಟೊಂದು ಪುಣ್ಯ ಸಿಕ್ಕಿದೆ ಎಂದು ಕೇಳುತ್ತಾನೆ. ಹಾಗಾದರೆ ಆ ವೇಶ್ಯೆಗೆ ಪುಣ್ಯ ಹೇಗೆ ದೊರಕಿತು..? ಆಕೆ ಓದಲು, ಬರೆಯಲು ಬಾರದಿರುವವಳು. ಹಾಗಾಗಿ ಭಗವದ್ಗೀತೆ ಓದುತ್ತಿರಲಿಲ್ಲ. ಹಾಗಾದರೆ ಈಕೆಗೆ ಪುಣ್ಯ ಹೇಗೆ ದೊರಕಿತು ಎನ್ನುವ ಬಗ್ಗೆ ನಾವು ಮುಂದಿನ ಭಾಗದಲ್ಲಿ ತಿಳಿಯೋಣ.
ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?