Spiritual: ನಾವು ಪ್ರಾಣಿಗಳನ್ನು ಸಾಕುವಾಗ, ಅದನ್ನು ಮನೆ ಮಗುವಂತೆ ಸಾಕಿರುತ್ತೇವೆ. ಹಾಗಾಗಿ ಅದರ ಅಗಲುವಿಕೆ ನಮ್ಮ ಮನಸ್ಸನ್ನು ಘಾಸಿ ಗೊಳಿಸುತ್ತದೆ. ಪ್ರಾಣಿಗಳನ್ನು ಸಾಕದವರಿಗೆ, ಪ್ರಾಣಿಪ್ರಿಯರ ಮನಸ್ಸು ಎಂದಿಗೂ ಅರ್ಥವಾಗುವುದಿಲ್ಲ. ಏನಪ್ಪಾ ಒಂದು ನಾಯಿ ಸತ್ತಿದ್ದಕ್ಕೆ ಇಷ್ಟು ಅಳುತ್ತಾರಲ್ಲಾ, ಇವರಿಗೇನು ಹುಚ್ಚಾ..? ಅಂತಾ ಕೆಲವರು ಹೇಳುತ್ತಾರೆ. ಇನ್ನು ಪ್ರಾಣಿಗಳ ಅಂತ್ಯಸಂಸ್ಕಾರ ಮಾಡಿದರೆ, ತಮಾಷೆ ಮಾಡುವವರೂ ಇದ್ದಾರೆ. ಆದರೆ ಸಾಕು ಪ್ರಾಣಿಗಳ ಅಂತ್ಯಕ್ರಿಯೆ ಮಾಡುವುದು ಮುಖ್ಯವೆಂದು ಹೇಳಲಾಗುತ್ತದೆ. ಹಾಗಾದ್ರೆ ಯಾಕೆ ಪ್ರಾಣಿಗಳ ಅಂತ್ಯಕ್ರಿಯೆ ಮಾಡಬೇಕಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಬೆಕ್ಕು, ನಾಯಿ, ಹಸುವನ್ನು ಜನ ಹೆಚ್ಚಾಗಿ ಸಾಕುತ್ತಾರೆ. ಏಕೆಂದರೆ, ಈ ಪ್ರಾಣಿಗಳು ಮಾನಸಿಕ ನೆಮ್ಮದಿ ಕೊಡುತ್ತದೆ. ಇವುಗಳ ಆಟ ಮನಸ್ಸಿಗೆ ಮುದ ನೀಡುತ್ತದೆ. ಅದಕ್ಕಾಗಿ ಇಂಥ ಮುದ್ದಾದ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ನಾವು ಸಾಕುವ ಯಾವುದೇ ಪ್ರಾಣಿ ಹೆಚ್ಚು ಕಾಲ ಬದುಕುವುದಿಲ್ಲ. ಹೆಚ್ಚೆಂದರೆ 10 ವರ್ಷವಷ್ಟೇ ಬಳಿಕ, ರೋಗ ಬಂದು ಸತ್ತು ಹೋಗುತ್ತದೆ.
ಬೆಕ್ಕಿನ ಅಂತ್ಯ ಸಂಸ್ಕಾರ ಮಾಡದಿದ್ದರೂ, ಕೆಲವರು ನಾಯಿಯ ಮತ್ತು ಹಸುವಿನ ಅಂತ್ಯಸಂಸ್ಕಾರ ಮಾಡುತ್ತಾರೆ. ಏಕೆಂದರೆ, ಹಸುವನ್ನು ಗೋಮಾತೆ ಎನ್ನಲಾಗುತ್ತದೆ. ಅದು ದೇವರಿಗೆ ಸಮವಾಗಿದೆ. ಹಾಗಾಗಿ ಗೋವಿನ ಅಂತ್ಯಸಂಸ್ಕಾರ ಹಲವೆಡೆ ಮಾಡುತ್ತಾರೆ. ಇನ್ನು ನಾಯಿಯನ್ನು ಭೈರವನೆಂದು ಹೇಳಲಾಗುತ್ತದೆ., ಭೈರವನ ವಾಹನ ನಾಯಿಯಾದ ಕಾರಣ, ನಾಯಿಗಳ ಅಂತ್ಯಸಂಸ್ಕಾರವೂ ಮಾಡಲಾಗುತ್ತದೆ. ಇನ್ನು ಮನುಷ್ಯನ ಜಾತಕದಲ್ಲಿ ಯಾವುದಾದರೂ ದೋಷವಿದ್ದರೆ, ಗೋವಿಗೆ ಮತ್ತು ನಾಯಿಗೆ ಆಹಾರ ಹಾಕಿದ್ದಲ್ಲಿ, ಆ ದೋಷದ ಪ್ರಭಾವ ಕಡಿಮೆಯಾಗುತ್ತದೆ ಅನ್ನೋ ನಂಬಿಕೆ ಇದೆ.