Spiritual News: ಮಹಾಭಾರತದಲ್ಲಿ ಧೃತರಾಷ್ಟ್ರದ ಮಂತ್ರಿಯಾಗಿದ್ದ ವಿದುರ, ಕೌರವನಿಗೆ ದಾಸಿಯ ಮೂಲಕ ಜನಿಸಿದ್ದ ಪುತ್ರನಾಗಿದ್ದ. ಮಹಾಭಾರತದಲ್ಲಿ ಏನೇನಾಗುತ್ತಿದೆ ಎಂಬುದನ್ನು, ಧೃತರಾಷ್ಟ್ರನಿಗೆ ವಿವರಿಸಿದ್ದ ವಿದುರ, ದಾಸಿಯ ಮಗನಾಗಿದ್ದರು, ಬುದ್ಧಿವಂತನಾಗಿದ್ದ. ಜೀವನ ಪಾಠವನ್ನು ಅರಿತಿದ್ದ. ವಿದುರ ನೀತಿಯ ಮೂಲಕ, ಆ ಜೀವನ ಪಾಠವನ್ನು ವಿದುರ ಎಲ್ಲರಿಗೂ ತಿಳಿಸಿದ್ದಾರೆ. ಅದರಲ್ಲಿ ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ, ಹೇಗೆ ಬದುಕಬೇಕು ಎಂಬ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಮಾತು, ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ನಮ್ಮ ಮೇಲೆ ದೇವರ ದಯೆ ಇರಬೇಕು. ದೇವರನ್ನು ನೀವು ನಂಬುತ್ತೀರೋ, ಬಿಡುತ್ತೀರೋ. ಆದರೆ ಒಂದು ಶಕ್ತಿ ಅಂತೂ ಸದಾ ನಮ್ಮನ್ನು ಕಾಯುತ್ತಿರುತ್ತದೆ ಅನ್ನೋ ನಂಬಿಕೆ, ಸದಾ ಎಲ್ಲರ ಮನಸ್ಸಿನಲ್ಲೂ ಇರುತ್ತದೆ. ಅಂಥ ನಂಬಿಕೆ ಗಾಢವಾಗಿ ಯಾರ ಮನಸ್ಸಿನಲ್ಲಿ ಇರುತ್ತದೆಯೋ, ಅವನು ಜೀವನದಲ್ಲಿ ತಪ್ಪು ಕೆಲಸಗಳನ್ನು ಮಾಡುವುದಿಲ್ಲ. ಅದೇ ರೀತಿ ನಾವು ಜೀವನದಲ್ಲಿ ಉದ್ಧಾರವಾಗಬೇಕು ಎಂದರೂ ಕೂಡ, ದೇವರ ಮೇಲೆ ನಂಬಿಕೆ ಮತ್ತು ದೇವರ ದಯೆ ನಮ್ಮ ಮೇಲಿರಬೇಕು. ಹಾಗಾಗಬೇಕು ಎಂದರೆ, ದೇವತಾ ಕಾರ್ಯಗಳಲ್ಲಿ ನಾವು ಭಾಗವಹಿಸಬೇಕು. ಪೂಜೆ, ಪ್ರಾರ್ಥನೆ ನಮ್ಮ ದೈನಂದಿಕ ಕಾರ್ಯಗಳಲ್ಲಿ ಒಂದಾಗಿರಬೇಕು.
ಎರಡನೇಯ ಮಾತು. ನಾವು ತಾಳ್ಮೆ ವಹಿಸಿ, ನಮ್ಮ ಕೆಲಸವನ್ನು ಮಾಡಬೇಕು. ಆಗ ನಾವು ಸ್ಥಿತಿವಂತರಾಗಲು ಸಾಧ್ಯವಾಗುತ್ತದೆ. ನಾವು ಶ್ರೀಮಂತರಾಗಬೇಕು ಎಂದು ಅಡ್ಡದಾರಿ ಹಿಡಿದೋ, ಅಥವಾ ಮೋಸ ಮಾಡಿಯೋ ಬದುಕಲು ಪ್ರಾರಂಭಿಸಿದರೆ, ನಾವೆಂದೂ ಉದ್ಧಾರವಾಗಲು ಸಾಧ್ಯವಿಲ್ಲ.
ಮೂರನೇಯ ಮಾತು. ನಾವು ಹೂಡಿಕೆ ಮಾಡುವುದನ್ನು ಕಲಿಯಬೇಕು. ಮೋಸ ಮಾಡದ ಕಡೆ ನಾವು ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ನಮ್ಮ ಕಷ್ಟಕ್ಕೆ ಅಥವಾ ಸುಖಕ್ಕೆ ನಮ್ಮ ಬಳಿ ಹಣ ಉಳಿಯುತ್ತದೆ. ಹಾಗಾಗಿ ಉಳಿತಾಯ ಮತ್ತು ಹೂಡಿಯ ಬಗ್ಗೆ ನಮಗೆ ಗೊತ್ತಿರಬೇಕು. ಕೆಲವರು ಬ್ಯಾಂಕ್ನಲ್ಲಿ ಹಣ ಜಮ ಮಾಡುತ್ತಾರೆ. ಇನ್ನು ಕೆಲವರು ಚಿನ್ನ ತೆಗೆದಿಟ್ಟು, ಹೂಡಿಕೆ ಮಾಡುತ್ತಾರೆ.
ನಾಲ್ಕನೇಯ ಮಾತು. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿದಷ್ಟು, ನಾವು ಆರ್ಥಿಕವಾಗಿ ಸಬಲರಾಗುತ್ತೇವೆ. ನಮಗೆ ಬಂದ ಸಂಬಳವನ್ನು ನಾವು ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದರೆ, ನಾವು ಆರ್ಥಿಕವಾಗಿ ಸಬಲರಾಗಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ ವಿದುರ.