ನಾವು ನಿಮಗೆ ಹಲವು ಬಾರಿ ರಾವಣನ ಬಗ್ಗೆ ತಿಳಿಸಿದ್ದೇವೆ. ರಾವಣನಲ್ಲೂ ಹಲವು ಉತ್ತಮ ಗುಣವಿದ್ದಿತು. ಆದರೆ ಕೆಲವೇ ಕೆಲವು ದುರ್ಗಣದ ಕಾರಣ, ರಾವಣನ ಸಂಹಾರವಾಯಿತು. ಆದರೆ ರಾವಣನಿಗಿಂದಲೂ, ಅವನ ಮಗ ಮೇಘರಾಜ ಬಲಶಾಲಿಯಾಗಿದ್ದ. ಹಾಗಾದ್ರೆ ಮೇಘರಾಜ ಯಾರು..? ಯಾಕೆ ಅವನು ರಾವಣನಿಗಿಂತ ಬಲಶಾಲಿ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದೇಕೆ..? ಕುಬೇರ ಅಂಥಾದ್ದೇನು ಮಾಡಿದ್ದ..?
ರಾವಣ ಮತ್ತು ಮಂಡೋದರಿಯ ಮಗನಾಗಿದ್ದ ಮೇಘನಾಥ ಹುಟ್ಟಿದ ವೇಳೆ, ಅವನು ಎಲ್ಲ ಮಕ್ಕಳಂತೆ ಅಳಲಿಲ್ಲ. ಬದಲಾಗಿ ಅವನ ದೇಹದಿಂದ ಮೋಡ ಗುಡುಗಿನ ಶಬ್ದ ಕೇಳಿಸಿತ್ತು. ಈ ಕಾರಣಕ್ಕೆ ರಾವಣ ಅವನಿಗೆ ಮೇಘನಾಥ ಎಂಬ ಹೆಸರನ್ನಿಟ್ಟ. ಮೇಘನಾಥ ದೊಡ್ಡವನಾದ ಮೇಲೆ ಕುಲದೇವಿ ನಿಕುಂಬಲಾಳ ಮುಂದೆ 7 ಯಜ್ಞವನ್ನು ಪೂರ್ಣಗೊಳಿಸಿದ. ಆಗ ಅವನಿಗೆ ಆ ಯಜ್ಞದಿಂದ ಹಲವು ಅಸ್ತ್ರಗಳು ಪ್ರಾಪ್ತಿಯಾದವು.
ಶಿವನಿಗೆ ಮೂರನೇ ಕಣ್ಣು ಬಂದಿದ್ದು ಹೇಗೆ..? ಇದು ಯಾರ ತಪ್ಪಿನಿಂದ ಉದ್ಭವವಾದ ಕಣ್ಣು..?
ಒಂದು ದಿವ್ಯ ರಥ ಸಿಕ್ಕಿತು. ಮೇಘನಾಥ ಅದನ್ನ ಎಲ್ಲಿ ಕೊಂಡೊಯ್ಯಲು ಬಯಸುತ್ತಾನೋ, ಅದು ಅಲ್ಲೆಲ್ಲಾ ತನ್ನಿಂದ ತಾನೇ ಹೋಗುತ್ತಿತ್ತು. ಇದಲ್ಲದೇ, ಒಂದು ಬಿಲ್ಲು ಬಾಣವೂ ಸಿಕ್ಕಿತು. ಅದರಲ್ಲಿನ ಬಾಣ ಎಂದಿಗೂ ಖಾಲಿಯಾಗುತ್ತಿರಲಿಲ್ಲ. ಇದರೊಂದಿಗೆ ಬ್ರಹ್ಮನ ಅಸ್ತ್ರವಾದ ಬ್ರಹ್ಮಾಸ್ತ್ರ, ವಿಷ್ಣುವಿನ ಅಸ್ತ್ರವಾದ ನಾರಾಯಣಾಸ್ತ್ರ ಮತ್ತು ಶಿವನ ಅಸ್ತ್ರವಾದ ಪಾಶುಪಥಾಸ್ತ್ರ ಸಿಕ್ಕಿತು. ಇದರಿಂದ ಮೇಘನಾಥ ರಾವಣನಿಗಿಂತಲೂ ಬಲಶಾಲಿಯಾದ.
ಭ್ರೂಣಹತ್ಯೆ ಮಾಡುವವರಿಗೆ ನರಕದಲ್ಲಿ ಎಂಥ ಶಿಕ್ಷೆ ಸಿಗುತ್ತದೆ ಗೊತ್ತಾ..?
ಇದಾದ ಬಳಿಕ ಮೇಘನಾಥ ದೇವಲೋಕದ ಮೇಲೆ ದಾಳಿ ಮಾಡಿ, ಎಲ್ಲ ದೇವತೆಗಳು ಅಲ್ಲಿಂದ ಹೆದರಿ ಓಡಿದರು, ಕೊನೆಗೆ ಇಂದ್ರನನ್ನು ಬಂಧಿಸಿ, ಮೇಘನಾಥ ಲಂಕೆಗೆ ಕರೆದೊಯ್ದು. ಈ ವಿಷಯ ತಿಳಿದ ಬ್ರಹ್ಮದೇವ, ತಾನೇ ಇಂದ್ರನನ್ನು ಕರೆತರುತ್ತೇನೆಂದು ಹೊರಟರು. ಆಗ ಬ್ರಹ್ಮ ಮೇಥನಾಥನಿಗೆ ಇಂದ್ರಜಿತು ಎಂದು ಹೆಸರನ್ನಿಟ್ಟರು. ಇಂದ್ರಜಿತು ಅಪ್ಪನಾದ ರಾವಣನ ಆಜ್ಞೆಯನ್ನು ಸದಾ ಪರಿಪಾಲಿಸುತ್ತಿದ್ದ.