ನೇಪಾಳದಲ್ಲಿ ಹಲವು ಬಾರಿ ಭೂಕಂಪನ ಸಂಭವಿಸಿದೆ. ಆದ್ರೆ ಪಶುಪತಿನಾಥನಿಗೆ ಮಾತ್ರ ಯಾವುದೇ ಹಾನಿಯಾಗಿಲ್ಲ. ಯಾಕಂದ್ರೆ ಆ ದೇವಸ್ಥಾನದಲ್ಲಿ ಅಂಥ ಶಕ್ತಿ ಇದೆ. ಹಾಗಾದ್ರೆ ಪಶುಪತಿನಾಥ ದೇವಸ್ಥಾನ ಹೇಗೆ ನಿರ್ಮಾಣವಾಯಿತು, ಅದರ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ..
ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ ಕೊಂಚ ದೂರದ ದೇವಪಾಟನ ಊರಿನ, ಭಾಗ್ಮತಿ ನದಿ ತೀರದಲ್ಲಿ ಪಶುಪತಿನಾಥ ದೇವಸ್ಥಾನವಿದೆ. ಶಿವನ ಅವತಾರವಾದ ಪಶುಪತಿನಾಥನನ್ನು ಇಲ್ಲಿ ಪೂಜಿಸಲಾಗುತ್ತದೆ. ಪಶುಪತಿನಾಥ ಎಂದರೆ, ಪಶುಗಳ ಅಂದ್ರೆ ಪ್ರಾಣಿಗಳ ಒಡೆಯ ಎಂದರ್ಥ. ಪಾಶುಪಥ ಸಂಪ್ರದಾಯದ ಈ ದೇವಸ್ಥಾನವನ್ನು ಸೋಮದೇವ ರಾಜವಂಶದ ರಾಜ ನಿರ್ಮಿಸಿದನೆಂದು ಹೇಳಲಾಗಿದೆ.
ಈ ದೇವರಿಗೆ ಮದ್ಯಪಾನವನ್ನು ನೈವೇದ್ಯವಾಗಿ ನೀಡಲಾಗುತ್ತದೆ..
ಈ ದೇವಸ್ಥಾನದಲ್ಲಿರುವ ದೇವರ ವಿಗ್ರಹದ ವಿಶೇಷತೆ ಅಂದ್ರೆ ಇದಕ್ಕೆ 5 ಮುಖಗಳಿದೆ. ಪೂರ್ವ ದಿಕ್ಕಿಗಿರುವ ಮುಖಕ್ಕೆ ತತ್ಪುರುಷ ಎಂದು ಕರೆಯಲಾಗುತ್ತದೆ. ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವ ಮೂರ್ತಿಯನ್ನು ಸದ್ಜ್ಯೋತ್ ಎನ್ನಲಾಗುತ್ತದೆ. ಉತ್ತರದ ದಿಕ್ಕಿಗಿರುವ ಮುಖಕ್ಕೆ ಅರ್ಧನಾರೇಶ್ವರ ಎಂದು ಕರೆಯಲಾಗುತ್ತದೆ. ದಕ್ಷಿಣ ದಿಕ್ಕಿಗಿರುವ ಮುಖಕ್ಕೆ ಅಘೋರಾ ಎಂದು ಕರೆಯಲಾಗುತ್ತದೆ. ಇನ್ನು ಮೇಲ್ಗಡೆ ಇರುವ ಮುಖಕ್ಕೆ ಇಶಾನ್ ಮುಖ ಎಂದು ಕರೆಯಲಾಗುತ್ತದೆ.
ಪಶುಪತಿನಾಥನ ದರ್ಶನಕ್ಕೆ ಒಂದು ನಂಬಿಕೆ ಇದೆ. ಅದೇನೆಂದರೆ, ಯಾರು ಪಶುಪತಿನಾಥನ ದರ್ಶನ ಮಾಡುತ್ತಾರೋ, ಅವರಿಗೆ ಪಶುವಿನ ಯೋನಿಯಲ್ಲಿ ಜನ್ಮ ಪಡೆಯುವ ಸಂಭವ ಬರುವುದಿಲ್ಲ. ಮುಂದಿನ ಜನ್ಮವೆಲ್ಲ ಅವನು ಮನುಷ್ಯ ಯೋನಿಯಲ್ಲೇ ಜನ್ಮ ಪಡೆಯುತ್ತಾನಂತೆ. ಆದ್ರೆ ನೀವು ಪಶುಪತಿನಾಥನ ದರ್ಶನಕ್ಕೂ ಮುನ್ನ ಅಲ್ಲೇ ಬೆನ್ನು ಮಾಡಿರುವ ನಂದಿಯ ದರ್ಶನ ಮಾಡಿದ್ರೆ, ಪಶುವಿನ ಯೋನಿಯಲ್ಲಿ ಜನ್ಮ ಪಡೆಯುವ ಸಂಭವವಿರುತ್ತದೆ ಎನ್ನುವ ನಂಬಿಕೆ ಇದೆ.
ನಿಮಗೆ ಇಂಥ ಕನಸು ಬಿದ್ದಲ್ಲಿ ಈ ಬಗ್ಗೆ ಯಾರಲ್ಲಿಯೂ ಹೇಳಬೇಡಿ..
ಈ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿನ ದೇವರ ದರ್ಶನ ಮಾಡುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರವಿದೆ. ಅದೇನೆಂದರೆ, ಪಶುಪತಿನಾಥ ದೇವಸ್ಥಾನದ ಪಕ್ಕದಲ್ಲೇ ಶವ ಸಂಸ್ಕಾರ ಮಾಡಲಾಗುತ್ತದೆ. ಭಾರತದಲ್ಲಿ ಕಾಶಿ ವಿಶ್ವೇಶ್ವರನ ದರ್ಶನ ಮಾಡಿದರೆ, ಸ್ವರ್ಗ ಪ್ರಾಪ್ತಿಯಾಗುತ್ತದೆ, ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇರುವ ಹಾಗೆ, ಇಲ್ಲಿಯೂ ಪಶುಪತಿನಾಥನ ಸನ್ನಿಧಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಲ್ಲಿ, ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ.