Movie News: ನಿನ್ನೆಯಷ್ಟೇ ದರ್ಶನ್ ಫ್ಯಾನ್ ಪೇಜ್ ಅಂತಾ ಹೇಳಿಕೊಂಡಿದ್ದ ಗಜಪಡೆ ಎಂಬ ಟ್ವೀಟರ್ ಅಕೌಂಟ್ನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಕೀಳಾಗಿ ಪೋಸ್ಟ್ ಹಾಕಲಾಗಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್ ಆರ್ಸಿಬಿ ಅನ್ಬಾಕ್ಸಿಂಗ್ ಇವೆಂಟ್ಗೆ ತೆರಳಿದ್ದರು. ಪತಿ ಇಲ್ಲದ ಮಹಿಳೆಯನ್ನು ಶುಭಕಾರ್ಯಕ್ಕೆ ಕರೆದಿದ್ದಕ್ಕೆ, ಆರ್ಸಿಬಿ ಸೋಲುತ್ತಿದೆ ಎಂದು ಗಜಪಡೆ ಎಂಬ ದರ್ಶನ್ ಫ್ಯಾನ್ಸ್ ಟ್ವೀಟ್ ಪೇಜ್ ಟ್ವೀಟ್ ಮಾಡಿದೆ. ಇಂಥ ಕೀಳು ಮಟ್ಟದ ಟ್ವೀಟ್ಗೆ ನೆಟ್ಟಿಗರು ಆಕ್ರೋಶ ಮತ್ತು ಬೇಸರ ಹೊರಹಾಕಿದ್ದಾರೆ.
ಇನ್ನು ಈ ಘಟನೆಯನ್ನು ಪ್ರಸ್ತಾಪಿಸದೇ, ಜೀವನದಲ್ಲಿ ಪಾಸಿಟಿವ್ ನೆಗೆಟಿವ್ ಸಿಚುವೇಶನ್ ಬಂದರೆ, ಎರಡನ್ನೂ ಸಮನಾಗಿ ಕಂಡು ಮುಂದೆ ಸಾಗುವೆ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
ಆದರೆ ಈ ರೀತಿ ಟ್ವೀಟ್ ಮಾಡಿದ್ದು, ನಿಜವಾಗ್ಲೂ ದರ್ಶನ್ ಅಭಿಮಾನಿಗಳೇ ಅಥವಾ ಗಜಪಡೆ ಎಂಬ ಫೇಕ್ ಅಕೌಂಟ್ ಮಾಡಿ, ದರ್ಶನ್ ಫ್ಯಾನ್ಸ್ ಅಂತಾ ಹೇಳಿಕೊಂಡು ಯಾರಾದ್ರೂ ಈ ರೀತಿ ಮಾಡಿದ್ದಾರೋ ಅಂತಾ ತನಿಖೆ ಬಳಿಕ ಗೊತ್ತಾಗಬೇಕಿದೆ. ಅಪ್ಪು ಅಭಿಮಾನಿಗಳು ಕೂಡ, ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನನ್ನ ಮಕ್ಕಳು ರಾಹುಲ್ ಗಾಂಧಿಯಂತಾಗಬೇಕು, ಮೋದಿಯಂತೆ ಸುಳ್ಳು ಹೇಳಬಾರದು: ಸಚಿವ ಸಂತೋಷ್ ಲಾಡ್
ರಾಹುಲ್ ಗಾಂಧಿ ಕೆಟ್ಟು ನಿಂತ ಗ್ರಾಮಾಫೋನ್ ಇದ್ದಂತೆ. ಹೇಳಿದ್ದನ್ನೇ ಹೇಳುತ್ತಾರೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..
ಇದು ಕಾಂಟ್ರ್ಯಾಕ್ಟ್ ಮದುವೆಯಲ್ಲ, ಧೀರ್ಘಕಾಲದ ಸಂಬಂಧ: ಮೈತ್ರಿ ಬಗ್ಗೆ ರಾಧಾಮೋಹನ್ ಹೇಳಿಕೆ