Tuesday, June 3, 2025

Latest Posts

ಎಲ್ಲಿ ಹೋದರೂ ಇಂಥ ಜನರಿಗೆ ಗೌರವ ಸಿಗುವುದಿಲ್ಲ ಅಂತಾರೆ ಚಾಣಕ್ಯರು

- Advertisement -

Horoscope: ಚಾಣಕ್ಯ ನೀತಿ ಅನ್ನೋದು ಭಾರತೀಯರಿಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಅಂತಲೇ ಹೇಳಬಹುದು. ಮನುಷ್ಯ ಹೇಗೆ ಬದುಕಬೇಕು..? ಅವನ ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯೆ, ವಿವಾಹ, ಜೀವನ, ಉದ್ಯಮ ಸೇರಿ ಎಲ್ಲ ವಿಷಯಗಳ ಬಗ್ಗೆ ಚಾಣಕ್ಯರು ವಿವರವಾಗಿ, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಎಂಥ ಜನರಿಗೆ ಎಲ್ಲಿ ಹೋದರೂ ಗೌರವ ಸಿಗುವುದಿಲ್ಲ ಅಂತಲೂ ಹೇಳಿದ್ದಾರೆ. ಚಾಣಕ್ಯರು ಹೇಳಿದ ಗುಣ ನಿಮ್ಮಲ್ಲಿದ್ದರೆ, ಇಂದೇ ಆ ಗುಣವನ್ನು ಬಿಡಲು ಪ್ರಯತ್ನಿಸಿ.

ಮೊದಲನೇಯ ಗುಣ: ಎಲ್ಲರನ್ನೂ ಹೀಯಾಳಿಸುವವರು, ಎಲ್ಲರನ್ನೂ ಆಳಿನ ರೀತಿಯಲ್ಲಿ ನೋಡುವವರು, ಯೋಗ್ಯತೆ ಮೀರಿ, ಆದೇಶ ಮಾಡುವವರಿಗೆ ಎಲ್ಲಿಯೂ ಗೌರವ ಸಿಗುವುದಿಲ್ಲ. ತಾನೇ ಉಚ್ಛ, ತಾನೇ ಜಾಣ, ತಾನೇ ಬುದ್ಧಿವಂತ ಎಂಬ ಅಹಂನಲ್ಲೋ ಅಥವಾ ಭ್ರಮೆಯಲ್ಲೋ ಇರುವವರು, ಇನ್ನೊಬ್ಬರನ್ನು ಕಾಣುವ ರೀತಿಯೆ ಬೇರೆಯದ್ದಾಗಿರುತ್ತದೆ. ಅಂಥವರು ಬೇರೆಯವರನ್ನು ದಡ್ಡರು ಅಂತಲೇ ಹೇಳುತ್ತಾರೆ. ಅಲ್ಲದೇ, ಎಲ್‌ಲರನ್ನೂ ಹೀಯಾಳಿಸಿಕೊಂಡು, ದಬ್ಬಾಳಿಕೆ ಮಾಡಿಕೊಂಡು ಇರುತ್ತಾರೆ. ಇಂಥವರಿಗೆ ಬರೀ ಬೇರೆಯವರಲ್ಲ, ಅವರ ಮನೆಯವರೇ ಸಹಿಸುವುದಿಲ್ಲ. ಮತ್ತು ಗೌರವ ಕೊಡುವುದಿಲ್ಲ.

ಎರಡನೇಯ ಗುಣ: ನಿಯತ್ತು, ಪ್ರಾಮಾಣಿಕತೆ ಇಲ್ಲದೇ ಬದುಕುವ ಜನರಿಗೆ ಎಲ್ಲಿಯೂ ಗೌರವ ಸಿಗುವುದಿಲ್ಲ. ಈ ಜಗತ್ತು ಇರುವುದು ವಿಶ್ವಾಸದ ಮೇಲೆ. ಒಬ್ಬರ ಮೇಲೊಬ್ಬರು ನಂಬಿಕೆ ಇಟ್ಟು, ಜೀವನ ನಡೆಸಬೇಕಾಗಿದೆ. ಆದರೆ, ಮನೆಯಲ್ಲೇ ಇರುವವರು ಅಥನಾ ಸ್ನೇಹಿತರು, ಸಂಬಂಧಿಕರೇ ನಂಬಿಕೆ ದ್ರೋಹ ಮಾಡಿದರೆ, ಅಂಥವರನ್ನು ಯಾರೂ ಮತ್ತೊಮ್ಮೆ ನಂಬುವುದಿಲ್ಲ ಮತ್ತು ಗೌರವಿಸುವುದಿಲ್ಲ. ಅಲ್ಲದೇ, ಅಂಥ ಅಪ್ರಾಮಾಣಿಕರನ್ನು ನೋಡುವ ರೀತಿಯೇ ಬದಲಾಗುತ್ತದೆ.

ಮೂರನೇಯ ಗುಣ: ಅಜ್ಞಾನ. ಅಜ್ಞಾನಿಗಳ ಸಂಗ ಮಾಡಿದವರಿಗೆ ಸಮಸ್ಯೆ ತಪ್ಪಿದ್ದಲ್ಲ. ಏಕೆಂದರೆ, ಅಜ್ಞಾನಿಗಳು ಮಾಡುವುದೇ ಎಡವಟ್ಟು. ಅಲ್ಲದೇ, ಮಾಡಿದ ಎಡವಟ್ಟನ್ನು ಸರಿಪಡಿಸಿಕೊಂಡರೆ ಉತ್ತಮ. ಆದರೆ ಅಜ್ಞಾನಿಗಳು ಎಂದಿಗೂ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಿಲ್ಲ. ಬದಲಾಗಿ ತಾನು ಮಾಡಿದ ತಪ್ಪೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಹಾಾಗಾಗಿ ಇಂಥವರಿಗೆ ಎಲ್ಲಿಯೂ ಗೌರವ ಸಿಗುವುದಿಲ್ಲ.

ನಿಮ್ಮ ಪತ್ನಿಯಲ್ಲಿ ಇಂಥ ಗುಣವಿದ್ದರೆ ನೀವೇ ಅದೃಷ್ಟವಂತರು ಅಂತಾರೆ ಚಾಣಕ್ಯರು..

ಆಚಾರ್ಯ ಚಾಣಕ್ಯರ ಪ್ರಕಾರ ಈ 5 ಜನರ ಸಹಾಯ ಎಂದಿಗೂ ಮಾಡಬೇಡಿ..

ಶ್ರೀ ರಾಮನವಮಿಯನ್ನು ಏಕೆ ಆಚರಿಸುತ್ತಾರೆ..? ಇದರ ಹಿನ್ನೆಲೆ ಏನು..?

- Advertisement -

Latest Posts

Don't Miss