Somavarapete News: ತೆಗೆದುಕ“ಂಡಿದ್ದ ಸಾಲವನ್ನು ವಾಪಸ್ ಕೇಳಿದ್ದಕ್ಕೆ, ಸಾಲ ನೀಡುವುದಾಗಿ ಹೇಳಿ, ಕರೆಯಿಸಿಕ“ಂಡು ಹತ್ಯೆ ಮಾಡಿದ ಘಟನೆ ಮಡಿಕೇರಿಯ ಸೋಮವಾಾರಪೇಟೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸಂಪತ್ ನಾಯರ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈ ಹಿನ್ನೆಲೆ ಮೂವರನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾನಗಲ್ ಗ್ರಾಮದ ಬಿ.ಎಂ.ಕಿರಣ್ (44), ಅವನ ಪತ್ನಿ ಸಂಗೀತಾ (35), ಮತ್ತು ಚೌಡ್ಲು ಗ್ರಾಮದ ಗಣಪತಿ(43) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು..? ಆಗಿದ್ದೇನು..?
ಕಿರಣ್ ಪತ್ನಿಯಾಗಿದ್ದ ಸಂಗೀತಾ, ಕಿರಣ್ ಜತೆ ಜಗಳವಾಡಿ ಅವನನ್ನು ಬಿಟ್ಟು, ಹತ್ಯೆಯಾಗಿರುವ ಸಂಪತ್ ಜತೆ ಕೆಲ ತಿಂಗಳುಗಳ ಕಾಲ ಇದ್ದಳು. ಈ ವೇಳೆ ಸಂಗೀತಾ ಮತ್ತು ಸಂಪತ್ ನಡುವೆ ಸಲುಗೆ ಬೆಳೆದು, ಸಂಪತ್ ಬಳಿ ಸಂಗೀತಾ 20 ಲಕ್ಷ ರೂಪಾಯಿ ಸಾಲ ಪಡೆದಿದ್ದಳು.
ಇದಾದ ಬಳಿಕ ಸಂಗೀತಾ ಮತ್ತು ಕಿರಣ್ ಜಗಳ ಮರೆತು ಮತ್ತೆ ಒಂದಾಗಿದ್ದು, ಸಂಪತ್ ಜತೆ ಬ್ರೇಕಪ್ ಮಾಡಿಕ“ಂಡಿದ್ದಳು. ಹೀಗಾಗಿ ಸಂಪತ್ ತಾನು ನೀಡಿದ್ದ 20 ಲಕ್ಷ ಸಾಲ ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದ. ಅಲ್ಲದೇ, ಸಾಲ ವಾಪಸ್ ಕೋಡದೇ ಇದ್ದಲ್ಲಿ, ತಮ್ಮಿಬ್ಬರ ಖಾಸಗಿ ಕ್ಷಣಗಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
ಈ ಬೆದರಿಕೆಗೆ ಹೆದರಿದ ಸಂಗೀತಾ ತನ್ನ ಪತಿ ಕಿರಣ್ ಜತೆ ಸೇರಿ, ಸಂಪತ್ನನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ. ಅದರಂತೆ ಮೇ 9ರಂದು ತಾನು ಸಾಲ ವಾಪಸ್ ನೀಡುವುದಾಗಿ, ಮನೆಗೆ ಬಾ ಎಂದು ಸಂಪತ್ಗೆ ಸಂಗೀತಾ ಕರೆ ಮಾಡಿ ತಿಳಿಸಿದ್ದಾಳೆ. ಸಂಪತ್ ಮನೆಗೆ ಬಂದ ತಕ್ಷಣ, ಕಿರಣ್ ಮತ್ತು ಆತನ ಸ್ನೇಹಿತ ಗಣಪತಿ ಸೇರಿ ಸಂಪತ್ ತಲೆಗೆ ದ“ಣ್ಣೆಯಿಂದ ಬಡಿದು, ಕತ್ತಿಯಿಂದ ಕಡಿದು ಸಾಯಿಸಿದ್ದಾರೆ.
ಬಳಿಕ ಸಂಪತ್ ಮೃತದೇಹವನ್ನು ಕಾರಿನಲ್ಲಿ ಕ“ಂಡ“ಯ್ದು, ಸಕಲೇಶಪುರ ಬಳಿ ಅರಣ್ಯ ಪ್ರದೇಶ ~~ಂದರಲ್ಲಿ ಸಂಪತ್ ಮೃತದೇಹವನ್ನು ಬಿಸಾಡಿ ಬಂದಿದ್ದಾರೆ. ಮೇ10 ರಂದು ಸಂಪತ್ ಕಾಣೆಯಾಗಿದ್ದಾನೆ ಎಂದು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಳಿಕ ಕಾರನ್ನು ಬೆಂಗಳೂರಿನ ಕಲ್ಲಹಳ್ಳಿ ಬಳಿ ತಂದು ನಿಲ್ಲಿಸಿ, ಬೆಂಗಳೂರಿನಿಂದ ಬೇರೆ ಕಾರಿನ ಮೂಲಕ ಮೂವರು ಮಡಿಕೇರಿ ತಲುಪಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕ“ಂಡಿದ್ದ ಪೋಲೀಸರು ಈ ಬಗ್ಗೆ ತನಿಖೆ ಕೈಗೋಂಡ ಬಳಿಕ, ಖಚಿತ ಮಾಹಿತಿ ಮೇರೆಗೆ ಕಿರಣ್ನನ್ನು ಮೇ 17ರಂದು ಬೆಂಗಳೂರಿನಲ್ಲಿ, ಸಂಗೀತಾಳನ್ನು ಸೋಮವಾರ ಪೇಟೆಯಲ್ಲಿ ಮತ್ತು ಮೇ 18ರಂದು ಗಣಪತಿಯಲ್ಲಿ ಬೆಳ್ತಂಗಡಿಯಲ್ಲಿ ಬಂಧಿಸಲಾಗಿದೆ. ಬಳಿಕ ವಿಚಾರಿಸಿದಾಗ, ತಾವು ಮಾಡಿದ ತಪ್ಪನ್ನು ಆರೋಪಿಗಳು ಒಪ್ಪಿಕ“ಂಡಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ ದ“ಣ್ಣೆ, ಕತ್ತಿ, ಕಾರ್ ವಶಕ್ಕೆ ಪಡೆಯಲಾಗಿದೆ.
ಕಿರಣ್, ಗಣಪತಿ, ಸಂಪತ್ ಆಪ್ತ ಗೆಳೆಯರಾಗಿದ್ದರು. ಹಣಕಾಸಿನ ವಿಷಯದಲ್ಲಿ ಪಾಲುದಾದರಾಗಿದ್ದರು. ಆದರೆ ಕಿರಣ್ ಜತೆ ಸಂಗೀತ ವಿವಾಹವಾದ ಬಳಿಕ, ಸಂಪತ್ ಸಂಗೀತಾ ಜತೆ ಅಫೇರ್ ಇರಿಸಿಕ“ಂಡಿದ್ದ. ಇದೇ ಅಕ್ರಮ ಸಂಬಂಧವೇ, ಸಂಪತ್ ಹತ್ಯೆಗೆ ಮುನ್ನುಡಿ ಬರೆದಿದ್ದು.