Health Tips: ಯಾವುದಾದರೂ ವಿಷಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಾಗ, ಅಗತ್ಯಕ್ಕಿಂತ ಹೆಚ್ಚು ಚಿಂತೆ ಮಾಡಿದಾಗಲೇ, ನಾವು ಖಿನ್ನತೆಗೆ ಒಳಗಾಗುತ್ತೇವೆ. ಮದುವೆ, ಕೆಲಸ, ವಿದ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ವಯಸ್ಸಿಗೆ ಬಂದಾಗ ಚಿಂತೆಗಳು ಕಾಡೋಕ್ಕೆ ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ, ಹಲವರು ಆಫೀಸು ಕೆಲಸದ ಒತ್ತಡ ತಾಳಲಾರದೇ ಡಿಪ್ರೆಶನ್ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾದ್ರೆ ಖಿನ್ನತೆ ಹೋಗಲಾಡಿಸುವುದು ಹೇಗೆ ಎಂದು ಡಾ.ಕಿಶೋರ್ ಅವರೇ ವಿವರಿಸಿದ್ದಾರೆ ನೋಡಿ.
ಸೌಂದರ್ಯದ ವಿಷಯವಾಗಿ, ವಿದ್ಯೆ, ಕೆಲಸ, ಮದುವೆ, ಮಕ್ಕಳು ಎಲ್ಲದರ ವಿಷಯವಾಗಿಯೂ ಮನುಷ್ಯ ಖಿನ್ನತೆಗೆ ಒಳಗಾಗುತ್ತಾನೆ. ವಿದ್ಯೆ ಸರಿಯಾಗಿ ಇರದಿದ್ದಲ್ಲಿ, ಜನ ಅದನ್ನೇ ಇಟ್ಟುಕೊಂಡು ಹಂಗಿಸುತ್ತಾರೆ. ಸರಿಯಾದ ಸಮಯಕ್ಕೆ ಮದುವೆಯಾಗದಿದ್ದರೆ, ಮಕ್ಕಳಾಗದಿದ್ದರೆ, ಒಳ್ಳೆಯ ಸಂಬಳವಿರದ ಕೆಲಸ ಇದ್ದಾಗ, ಹೀಗೆ ಹಲವು ವಿಷಯಗಳಿಂದಾಗಿ ಸಮಾಜ ಓರ್ವ ವ್ಯಕ್ತಿಯ ಬಗ್ಗೆ ಕೀಳಾಗಿ ಮಾತನಾಡಿದಾಗಲೇ, ಮನುಷ್ಯ ಖಿನ್ನತೆಗೆ ಒಳಗಾಗುತ್ತಾನೆ. ಹಾಗಾದ್ರೆ ಖಿನ್ನತೆ ಬರಬಾರದು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. ಸಂಪೂರ್ಣ ವಿವರಣೆಗಾಗಿ ಈ ವೀಡಿಯೋ ನೋಡಿ.