ದೇವರಾಜ ಇಂದ್ರನನ್ನು ದೇವತೆಗಳ ಅಧಿಪತಿ ಎಂದು ಕರೆಯಲಾಗುತ್ತದೆ. ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ವಾಯು ಎಲ್ಲವನ್ನೂ ನಾವು ಪೂಜಿಸುತ್ತೇವೆ. ಆದ್ರೆ ಇಂದ್ರನನ್ನು ಕಲಿಯುಗದಲ್ಲಿ ಪೂಜಿಸಲಾಗುವುದಿಲ್ಲ. ಹಾಗಾದ್ರೆ ಯಾಕೆ ಇಂದ್ರದೇವನನ್ನು ಪೂಜಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬ್ರಹ್ಮನನ್ನು ಏಕೆ ಪೂಜಿಸಲಾಗುವುದಿಲ್ಲ..? ಮತ್ತು ಪ್ರಪಂಚದಲ್ಲಿ ಏಕೈಕ ದೇವಸ್ಥಾನದಲ್ಲಷ್ಟೇ ಬ್ರಹ್ಮನನ್ನು ಪೂಜಿಸುತ್ತಾರೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಬ್ರಹ್ಮನಿಗೆ ಭಾರತದಲ್ಲಿ ಒಂದಾದರೂ ದೇವಸ್ಥಾನವಿದೆ. ಆದ್ರೆ ಇಂದ್ರನಿಗೆ ಇಡೀ ಪ್ರಪಂಚದಲ್ಲೇ ಒಂದೂ ದೇವಸ್ಥಾನವಿಲ್ಲ. ಮತ್ತು ಇಂದ್ರನನ್ನು ಯಾರೂ ಪೂಜಿಸುವುದಿಲ್ಲ.
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!
ಇಂದ್ರನೆಂದರೆ ಯಾರದ್ದೂ ಹೆಸರಲ್ಲ, ಬದಲಾಗಿ ಸ್ವರ್ಗಲೋಕದ ಅಧಿಪತಿಯನ್ನೇ ಇಂದ್ರನೆಂದು ಹೇಳುತ್ತಿದ್ದರು. ಸ್ವರ್ಗದ ಅಧಿಪತಿಯಾಗಲು ಹಲವು ಯಾಗ, ಹೋಮ ಹವನ, ಅತ್ಯುತ್ತಮ ಕೆಲಸಗಳನ್ನ ಮಾಡಬೇಕು. ಇಂಥ ಕೆಲಸಗಳನ್ನು ಮಾಡಿ, ಇಂದ್ರಪ್ರಸ್ತದಲ್ಲಿ ಕುಳಿತವನೇ ಇಂದ್ರ. ಈ ಸ್ವರ್ಗಲೋಕದ ಅಧಿಪತಿಯ ಪಟ್ಟ ದಕ್ಕಿದವರಿಗೇ ಯಾವಾಗಲೂ ತನ್ನ ಪಟ್ಟ ಯಾವಾಗ ಕಳಚಿ ಬೀಳುತ್ತದೆ. ನಾನು ಕುರ್ಚಿಯಿಂದ ಕೆಳಗಿಳಿದರೆ ಏನು ಗತಿ ಅನ್ನೋ ಆಲೋಚನೆ ಕಾಡುತ್ತಿರುತ್ತದೆಯಂತೆ.
ಹಾಗಾಗಿ ಇಂದ್ರ ಎಷ್ಟೋ ರಾಜರು ಪುಣ್ಯದ ಕೆಲಸ ಮಾಡುವಾಗ, ಎಲ್ಲಿ ಅವರು ತನ್ನ ಪಟ್ಟಕ್ಕೆ ಧಕ್ಕೆ ತರುತ್ತಾರೋ ಎಂದು, ಅವರ ಕೆಲಸಗಳನ್ನು, ಪುಣ್ಯಕಾರ್ಯಗಳನ್ನು ಹಾಳುಗೆಡುವುತ್ತಿದ್ದ. ಮೇನಕೆ ಊರ್ವಷಿಯನ್ನು ಕಳುಹಿಸಿ, ತಪಸ್ವಿಗಳ ತಪಸ್ಸು ಭಂಗ ಮಾಡುವುದು. ರಾಜರ ಅಶ್ವಮೇಧ ಯಾಗದ ಕುದುರೆಯನ್ನು ಕದಿಯುವುದು ಮಾಡುತ್ತಿದ್ದ. ಹಾಗಾಗಿ ಕೊನೆಯತನಕವೂ ಇಂದ್ರನೇ ಸ್ವರ್ಗದ ಅಧಿಪತಿಯಾಗಿ ಉಳಿದ.
ಹಬ್ಬ ಒಂದೇ ಆದರೆ ಪದ್ದತಿಗಳು ಹಲವು.. ಅದೇ ಸಂಕ್ರಾಂತಿ.. ಅದರ ವಿಶೇಷತೆಗಳನ್ನು ತಿಳಿಯೋಣ..!
ಆದರೆ ಇವನಿಗಿಂತ ಮುಂಚೆಯೇ 14 ಇಂದ್ರರು ಆಗಿ ಹೋಗಿದ್ದರು. ಯಜ್, ವಿಪಿಷ್ಚಿತ್, ಶಿಬಿ, ವಿಧು, ಮನೋಜವ, ಪುರಂದರ, ಬಾಲಿ, ಅದ್ಭುತ್, ಶಾಂತಿ, ವಿಶ್, ರಿತುಧಾಮ್, ದೇವಾಸ್ಪತಿ ಮತ್ತು ಸೂಚಿ. ಇವರಿಷ್ಟು ಜನ ಇಂದ್ರನಿಗಿಂತ ಮುನ್ನವೇ ಸ್ವರ್ಗಲೋಕದ ಅಧಿಪತಿಯ ಪಟ್ಟ ಗಿಟ್ಟಿಸಿಕೊಂಡಿದ್ದರು. ಆದರೆ ಇಂದ್ರ ಸ್ವರ್ಗಾಧಿಪತಿಯಾದ ಬಳಿಕ, ಕೆಲವು ಕಡೆ ಇಂದ್ರನನ್ನು ಪೂಜಿಸಲಾಗುತ್ತಿತ್ತು. ಹಾಗಾದ್ರೆ ಯಾಕೆ ಇಂದ್ರನನ್ನು ಪೂಜಿಸುವುದನ್ನು ಜನ ನಿಲ್ಲಿಸಿದರು ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..