ನಮ್ಮ ದೇಶದಲ್ಲಿ 11 ದಿನಗಳ ಕಾಲ ಗಣೇಶ ಹಬ್ಬವನ್ನ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹೀಗೆ 11ನೇ ದಿನಕ್ಕೆಸಾರ್ವಜನಿಕ ಗಣಪತಿ ವಿಸರ್ಜನೆ ಮಾಡುವ ವೇಳೆಗೆ, ಅಲ್ಲಿದ್ದ ಕೆಲ ವಸ್ತುಗಳನ್ನ ಹರಾಜಿಗೆ ಹಾಕಲಾಗುತ್ತದೆ. ಹೀಗೆ ಹರಾಜಿಗೆ ಸಿಕ್ಕ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ತೆಂಗಿನಕಾಯಿ, ಹಣ್ಣು ಹಂಪಲು, ಬಟ್ಟೆ, ನೈವೇದ್ಯ ಹೀಗೆ ಹಲವು ವಸ್ತುಗಳನ್ನು ಹರಾಜು ಹಾಕಲಾಗುತ್ತದೆ.
ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..?
ಹೈದರಾಬಾದ್ನ ಸಾರ್ವಜನಿಕ ಗಣಪತಿ ವಿಸರ್ಜನೆ ವೇಳೆ ಇದೇ ರೀತಿ 12ಕೆಜಿ ಲಡ್ಡುವನ್ನು ಹರಾಜಿಗೆ ಹಾಕಲಾಗಿದೆ. ಇಲ್ಲಿನ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 12 ಕೆಜಿ ಲಡ್ಡು 60 ಲಕ್ಷ ರೂಪಾಯಿಗೆ ಹರಾಜು ಹಾಕಲಾಗಿದೆ. ಮೊನ್ನೆಯಷ್ಟೇ ಇಲ್ಲಿನ ಬಾಲಾಪುರಿ ಲಡ್ಡು ಪ್ರಸಾದ 24 ಲಕ್ಷಕ್ಕೆ ಸೇಲ್ ಆಗಿತ್ತು. ಆದ್ರೆ ನಿನ್ನೆ ಇದಕ್ಕೂ ಹೆಚ್ಚಿನ ಮೊತ್ತಕ್ಕೆ ರಿಚ್ಮಂಡ್ ವಿಲ್ಲಾ ಸನ್ ಸಿಟಿ ಲಡ್ಡು ಪ್ರಸಾದ ಹರಾಜಾಗಿದೆ.
ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..
ಕೊರೊನಾ ಸಮಯದಲ್ಲಿ ಅದ್ಧೂರಿ ಗಣೇಶೋತ್ಸವ ಮಾಡದ ಕಾರಣ, ಇಲ್ಲಿ ಪ್ರಸಾದವನ್ನು ಹರಾಜು ಮಾಡಿರಲಿಲ್ಲ. ಕಳೆದ ವರ್ಷವೂ ಲಡ್ಡು ಪ್ರಸಾದ 18 ಲಕ್ಷಕ್ಕೆ ಹಾಜರಾಗಿತ್ತು. ಆದ್ರೆ ಈ ವರ್ಷ ಮಾತ್ರ ಭರ್ಜರಿ ಮೊತ್ತಕ್ಕೆ ಹರಾಜಾಗಿದೆ. ನೈವೇದ್ಯಕ್ಕೆ ಇಡಲಾದ ಪ್ರಸಾದವನ್ನು ಹರಾಜು ಮಾಡುವ ಪದ್ಧತಿಯನ್ನ 5 ವರ್ಷದಿಂದ ನಡೆಸಲಾಗುತ್ತಿದೆಯಂತೆ.