ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ಮನುಷ್ಯ ಯಾವ ಚಟವನ್ನು ಹೊಂದಿರಬಾರದು ಅಂತಾ ಹೇಳಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಮತ್ತೊಂದಿಷ್ಟು ವಿಚಾರಗಳನ್ನ ಹೇಳಲಿದ್ದೇವೆ.
ಏಳನೇಯ ಅಭ್ಯಾಸ ಮನೆಗೆ ಬಂದವರಿಗೆ ಸರಿಯಾಗಿ ಸತ್ಕರಿಸದೇ ಇರುವುದು. ಮನೆಗೆ ಬಂದ ಅತಿಥಿ ನಿಮಗಾಗಿ ಏನನ್ನಾದರೂ ತರಲಿ, ಬಿಡಲಿ, ಅವರು ಶ್ರೀಮಂತರಾಗಲಿ, ಅಥವಾ ಬಡವರೇ ಆಗಲಿ, ಎಲ್ಲರನ್ನ ಸಮವಾಗಿ ಸತ್ಕರಿಸಬೇಕು. ರುಚಿ ರುಚಿಯಾದ ಊಟ, ತಿಂಡಿ ಕೊಡಲಾಗದಿದ್ದರೂ, ಉತ್ತಮ ಮಾತುಗಳನ್ನಾಡಬೇಕು. ಇದ್ದುದರಲೇ ಅವರೊಂದಿಗೆ ಹಂಚಿ ತಿನ್ನುವ ಮನಸ್ಸಿರಬೇಕು. ಅಲ್ಲದೇ, ಬಡವರಿಗೆ ದಾನ ಮಾಡುವ ಗುಣವಿದ್ದರೆ, ಲಕ್ಷ್ಮೀ ತಾನಾಗೇ ಒಲಿಯುತ್ತಾಳೆ.
ಎಂಟನೇಯ ಅಭ್ಯಾಸ ಬಟ್ಟೆಯನ್ನು ಸರಿಯಾಗಿ ಮಡಿಚಿಡದಿರುವುದು. ಮನೆತುಂಬ ಅಗತ್ಯಕ್ಕಿಂತ ಹೆಚ್ಚು ಬಟ್ಟೆ, ಚಪ್ಪಲಿ, ಕಟ್ಟಿಗೆ ಇದ್ದರೆ, ಅದು ದರಿದ್ರಕ್ಕೆ ಆಮಂತ್ರಣ ಸಿಕ್ಕಂತೆ. ಹಾಗಾಗಿ ಮನೆಯಲ್ಲಿ ಹೆಚ್ಚು ಚಪ್ಪಲಿ, ಕಟ್ಟಿಗೆ, ಮತ್ತು ಬಟ್ಟೆ ಇರಕೂಡದು. ಅದರಲ್ಲೂ ಬಟ್ಟೆಗಳನ್ನ ಸರಿಯಾಗಿ ಮಡಚಿಡಬೇಕು. ಅವು ಎಲ್ಲೆಂದರಲ್ಲಿ ಹರಡಿಕೊಂಡಿದ್ದರೆ, ಆ ಜಾಗದಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮವೇ ಹೆಚ್ಚಾಗಿರುತ್ತದೆ. ಹಾಗಾಗಿ, ಬಟ್ಟೆಯನ್ನ ನೀಟಾಗಿ ಇರಿಸಿ.
ಒಂಭತ್ತನೇಯ ಅಭ್ಯಾಸ ಸ್ವಚ್ಛತೆ ಇಲ್ಲದಿರುವುದು. ಯಾವ ಮನುಷ್ಯ ಸ್ವಚ್ಛವಾಗಿರುವುದಿಲ್ಲವೋ, ಅಂಥವನ ಮನೆಯಲ್ಲಿ ಲಕ್ಷ್ಮೀ ನೆಲೆಸಲು ಸಾಧ್ಯವೇ ಇಲ್ಲ. ಪ್ರತಿದಿನ ಸ್ನಾನ ಮಾಡಿ, ಸ್ವಚ್ಛವಾಗಿರುವ ಬಟ್ಟೆ ಧರಿಸಿದರೆ, ಅವನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ ನೀವು ಸರಿಯಾಗಿ ಸ್ನಾನ ಮಾಡದೇ, ತೊಳೆಯದ ಬಟ್ಟೆಯನ್ನು ಧರಿಸಿದರೆ, ನಿಮ್ಮಲ್ಲಿ ನಕಾರಾತ್ಮಕ ಶಕ್ತಿ, ಉದಾಸೀನತೆ ಮನೆ ಮಾಡುತ್ತದೆ. ಹಾಗಾಗಿ ಸ್ವಚ್ಛವಾಗಿರುವುದು ತುಂಬಾ ಮುಖ್ಯ.
ಹತ್ತನೇಯ ಅಭ್ಯಾಸ ರಾತ್ರಿ ಅನ್ನದ ಪಾತ್ರೆಯನ್ನು ಪೂರ್ತಿ ಖಾಲಿ ಮಾಡಿಡುವುದು. ಇದು ನಿಮಗೆ ವಿಚಿತ್ರವೆನ್ನಿಸಬಹುದು. ಆದರೆ ಪ್ರತಿದಿನ ಅನ್ನದ ಪಾತ್ರೆಯನ್ನು ಖಾಲಿ ಮಾಡಿ, ತೊಳೆಯದೇ ಹಾಗೆ ಇಡಬಾರದು. ಒಂದು ಅನ್ನದ ಪಾತ್ರೆಯಲ್ಲಿ ಕೊಂಚವಾದರೂ ಅನ್ನವಿರಿಸಬೇಕು. ಇಲ್ಲವೇ, ಅನ್ನದ ಪಾತ್ರೆಯನ್ನು ತೊಳೆದಿಡಬೇಕು. ಆದರೆ ಪ್ರತೀ ಶುಕ್ರವಾರ ಮತ್ತು ಮಂಗಳವಾರ ದೇವಿಯ ದಿನವಾಗಿರುವುದರಿಂದ ರಾತ್ರಿ ಅನ್ನದ ಪಾತ್ರೆ ಖಾಲಿ ಮಾಡದೇ, ಸ್ವಲ್ಪವಾದರೂ ಅನ್ನವಿರಿಸಿ. ಈ ದಿನ ಲಕ್ಷ್ಮೀ ಮನೆಗೆ ಬರುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಈ ರೀತಿ ಮಾಡಿ.
ಹನ್ನೊಂದನೇಯದ್ದು, ಬೆಳಿಗ್ಗೆ ಎದ್ದು ಕನ್ನಡಿ ನೋಡುವುದು, ಅಥವಾ ಮನೆಯವರ ಮುಖ ನೊಡುವುದು. ಅರೇ ಇದೇನಪ್ಪಾ ವಿಚಿತ್ರ, ನಮ್ಮ ಮುಖವನ್ನು ನಾವು ಕನ್ನಡಿಯಲ್ಲಿ ನೋಡಿಕೊಂಡರೆ, ಅಥವಾ ಮನೆಯವರ ಮುಖವನ್ನ ನೋಡಿದರೆ, ಅಥವಾ ಮೊಬೈಲನ್ನ ನೋಡಿದರೆ ಏನು ತಪ್ಪು ಅಂತಾ ನೀವು ಕೇಳಬಹುದು. ಆದ್ರೆ ಹೀಗೆ ಮಾಡಿದ್ದಲ್ಲಿ, ನಿಮ್ಮ ದಿನ ಅಷ್ಟು ನೆಮ್ಮದಿಯುತವಾಗಿರುವುದಿಲ್ಲ. ಅದಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಎರಡೂ ಕೈಗಳನ್ನ ಜೋಡಿಸಿ, ಕರಾಗ್ರೆ ವಸತೇ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ, ಕರ ಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರ ದರ್ಶನಂ ಅನ್ನೋ ಶ್ಲೋಕ ಹೇಳಿ, ಬಳಿಕ ಏನನ್ನಾದರೂ ನೋಡಿ. ಹೀಗೆ ಮಾಡುವುದರಿಂದ ನಿಮ್ಮ ದಿನ ಉತ್ತಮವಾಗಿರುತ್ತದೆ.
ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..
ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..