ಹಿಂದೂ ಧರ್ಮದಲ್ಲಿ ನಾವು ಪಾಲಿಸುವ ಪದ್ಧತಿಗಳಿಗೆ ಎಷ್ಟು ಮಹತ್ವವಿದೆಯೋ, ಅದಕ್ಕೂ ಹೆಚ್ಚಿನ ಮಹತ್ವ ಪೂಜೆಗೆ ಇದೆ. ಪೂಜೆ ಮಾಡುವಾಗ, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತಪ್ಪದೇ, ಹೇಗೆ ಇಡುತ್ತೇವೋ, ಅದೇ ರೀತಿ ಕೊನೆಗೆ ಆರತಿ ಮಾಡಿ, ದೇವರ ಪೂಜೆ ಮುಗಿಸುವುದು ಅಷ್ಟೇ ಮುಖ್ಯ. ಹಾಗಾದ್ರೆ ಪೂಜೆಯ ಕೊನೆಗೆ ಆರತಿ ಮಾಡೋದು ಯಾಕೆ..? ಇದರ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಜೀವನದಲ್ಲಿ ಕಷ್ಟ ಬಂದಾಗ ಈ 5 ಮಾತುಗಳನ್ನು ಎಂದಿಗೂ ಮರೆಯಬೇಡಿ- ಭಾಗ2
ಆರತಿ ಮಾಡುವುದು ಎಂದರೆ, ಸಂಗೀತ, ಪ್ರಾರ್ಥನೆಯ ಮೂಲಕ ದೇವರನ್ನು ನೆನೆಯುವುದು. ಸ್ಕಂದ ಪುರಾಣದ ಪ್ರಕಾರ, ಶ್ರೀ ವಿಷ್ಣು, ಯಾರು ಶುದ್ಧ ಮನಸ್ಸಿನಿಂದ ತನಗೆ ತುಪ್ಪದ ದೀಪ ಹಚ್ಚಿ, ಆರತಿ ಮಾಡುತ್ತಾರೋ, ಅಂಥವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ್ದಾನಂತೆ. ಆದರೆ ನಿಮಗೆ ಸ್ವರ್ಗ ಸಿಗಬೇಕೆಂದರೆ, ಬರೀ ತು್ಪಪದಾರತಿ ಮಾಡಿದ್ರೆ ಸಾಲದು. ಬದಲಾಗಿ ಉತ್ತಮ ಕಾರ್ಯಗಳನ್ನೂ ಮಾಡಬೇಕಾಗುತ್ತದೆ.
ರಾವಣ ಹಲವು ವರ್ಷಗಳವರೆಗೆ ಇವರನ್ನು ತನ್ನ ಕಾಲ ಕೆಳಗೆ ಇರಿಸಿಕೊಂಡಿದ್ದನಂತೆ.. ಯಾರವರು..?
ಇನ್ನು ಆರತಿ ಮಾಡಲು ಕೆಲ ಪದ್ಧತಿಗಳುಂಟು. ಮೊದಲು ಕಾಲಿನ ಭಾಗದಲ್ಲಿ ಆರತಿ ಮಾಡಬೇಕು. ನಂತರ ನಾಭಿಯ ಭಾಗದಲ್ಲಿ, ಕೊನೆಗೆ ಮುಖಕ್ಕೆ ಆರತಿ ಮಾಡಬೇಕು. ಇದು ಆರತಿ ಮಾಡುವ ಸರಿಯಾದ ಪರಿ. ಹೀಗೆ ಆರತಿ ಮಾಡುವಾಗ ಕೆಲವರು ಶ್ಲೋಕ ಹೇಳಿದರೆ, ಇನ್ನು ಕೆಲವರು ಹಾಡು ಹೇಳುತ್ತಾರೆ. ಇನ್ನು ಆರತಿ ಮಾಡುವಾಗ ಅದಕ್ಕೆ ತುಪ್ಪ ಅಥವಾ ಎಣ್ಣೆಯಲ್ಲಿ ಅದ್ದಿದ ಬತ್ತಿ, ಕರ್ಪೂರವನ್ನು ಬಳಸಲಾಗುತ್ತದೆ. ಈ ವಸ್ತುಗಳಿಂದ ಆರತಿ ಮಾಡಿದ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಕರ್ಪೂರದ ಆರತಿಯಿಂದ ಆ ಸ್ಥಳದಲ್ಲಿದ್ದ ಕೀಟಗಳು ನಾಶವಾಗುತ್ತದೆ.
ಮನುಷ್ಯನ ಮೃತ್ಯುವಾದ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡುವುದೇಕೆ..?
ಇನ್ನು ದೇವಸ್ಥಾನದಲ್ಲಿ ಮೊಳಗುವ ಗಂಟೆ ಶಬ್ದ, ಆರತಿ, ಹೋಮ ಹವನಕ್ಕೂ ಅದರದ್ದೇ ಆದ ಮಹತ್ವವಿದೆ. ಗಂಟೆ ಸದ್ದಿನಿಂದ, ಆ ಸ್ಥಳದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತು ಪಡಿಸಲಾಗಿದೆ. ಆರತಿ, ಹೋಮ ಹವನದಲ್ಲಿ ಬಳಸುವ ತುಪ್ಪ, ಕರ್ಪೂರ, ಕಟ್ಟಿಗೆ ಇತ್ಯಾದಿಯಿಂದ ಆ ಸ್ಥಳದಲ್ಲಿರುವ ಕೀಟ ನಾಶವಾಗುತ್ತದೆ. ಮತ್ತು ಪ್ರತಿದಿನ ಯಾರ ಮನೆಯಲ್ಲಿ ಹೋಮ ಹವನ ನಡೆಯುತ್ತದೆಯೋ, ಅಂಥ ಮನೆಯಲ್ಲಿ ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಕಡಿಮೆ ಇರುತ್ತದೆ ಅಂತಲೂ ಸಾಬೀತಾಗಿದೆ.